Asianet Suvarna News Asianet Suvarna News

ಖರ್ಗೆಗೆ ಪುತ್ರನನ್ನು ಸಿಎಂ ಮಾಡುವ ಕನಸು: ಅಮಿತ್‌ ಶಾ

ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಅವರು ಮುಖ್ಯ​ಮಂತ್ರಿ ಗಾದಿಗೆ ಟವೆಲ್‌ ಹಾಕಿದ್ದಷ್ಟೇ ಅಲ್ಲ, ಕಾಂಗ್ರೆ​ಸ್‌​ನಲ್ಲಿ ಆ ಸ್ಥಾನ​ಕ್ಕಾಗಿ ಇನ್ನೂ 10 ಮಂದಿ ಹಗಲುಗನಸು ಕಾಣುವುದ​ರಲ್ಲೇ ತಲ್ಲೀ​ನ​ರಾ​ಗಿ​ದ್ದಾರೆ. ರಾಜ್ಯ​ದಲ್ಲಿ ನಾವು ಸರ್ಕಾರ ಮಾಡುತ್ತೇವೆ ಎಂದು ಪದೇ ಪದೆ ಹೇಳುವ ಕಾಂಗ್ರೆಸ್‌, ಮೊದಲು ತನ್ನ ನಾಯಕ ಯಾರೆಂಬುದನ್ನು ತೀರ್ಮಾನಿಸಲಿ: ಅಮಿತ್‌ ಶಾ 

Mallikarjun Kharge's Dream is to Make His Son CM of Karnataka Says Amit Shah grg
Author
First Published Mar 4, 2023, 8:34 AM IST

ಬಸವಕಲ್ಯಾಣ/ಬೀದರ್‌(ಮಾ.04):  ಕಾಂಗ್ರೆಸ್‌ ಅಧ್ಯಕ್ಷರಿಗೀಗ ಮುಖ್ಯ​ಮಂತ್ರಿ ರೇಸ್‌ಗೆ ಬರಲಾಗಲ್ಲ, ಹೀಗಾಗಿ ಪುತ್ರನ ಮೇಲೆ ವ್ಯಾಮೋಹ ಬಂದಿದೆ. ಪುತ್ರ​ನಿಗೆ ಮುಖ್ಯ​ಮಂತ್ರಿ ಪಟ್ಟದ ಕನಸು ಕಾಣು​ತ್ತಿ​ದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಲ್ಲಿ​ಕಾರ್ಜುನ ಖರ್ಗೆ ವಿರುದ್ಧ ವ್ಯಂಗ್ಯ​ವಾ​ಡಿ​ದ​ರು.

ಇಲ್ಲಿನ ಥೇರ್‌ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಅವರು ಮುಖ್ಯ​ಮಂತ್ರಿ ಗಾದಿಗೆ ಟವೆಲ್‌ ಹಾಕಿದ್ದಷ್ಟೇ ಅಲ್ಲ, ಕಾಂಗ್ರೆ​ಸ್‌​ನಲ್ಲಿ ಆ ಸ್ಥಾನ​ಕ್ಕಾಗಿ ಇನ್ನೂ 10 ಮಂದಿ ಹಗಲುಗನಸು ಕಾಣುವುದ​ರಲ್ಲೇ ತಲ್ಲೀ​ನ​ರಾ​ಗಿ​ದ್ದಾರೆ. ರಾಜ್ಯ​ದಲ್ಲಿ ನಾವು ಸರ್ಕಾರ ಮಾಡುತ್ತೇವೆ ಎಂದು ಪದೇ ಪದೆ ಹೇಳುವ ಕಾಂಗ್ರೆಸ್‌, ಮೊದಲು ತನ್ನ ನಾಯಕ ಯಾರೆಂಬುದನ್ನು ತೀರ್ಮಾನಿಸಲಿ ಎಂದ​ರು.

ಮೋದಿ ಆಯ್ತು, ಈಗ ಅಮಿತ್‌ ಶಾ ಲಿಂಗಾಯತ ದಾಳ

ಕಾಂಗ್ರೆ​ಸ್‌ಗೆ ಜನಹಿತಕ್ಕಿಂತ ಅಧಿಕಾರ ಮುಖ್ಯ. ಆದರೆ, ಬಿಜೆಪಿಯ ಈ ವಿಜಯ ಸಂಕಲ್ಪ ಯಾತ್ರೆ ಅಧಿಕಾರ, ನಮ್ಮ ನಾಯಕನಿಗೆ ಮುಖ್ಯ​ಮಂತ್ರಿ ಖುರ್ಚಿಗಾಗಿ ಅಲ್ಲ. ರಾಜ್ಯದ ಬಡವರ ಕಲ್ಯಾಣದ, ಅಭಿವೃದ್ಧಿಯ ಗುರಿಯೇ ನಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.

ಮುಂಬರುವ ರಾಜ್ಯ ವಿಧಾ​ನ​ಸಭಾ ಚುನಾವಣೆ ನಂತರ ಕಾಂಗ್ರೆಸ್‌ನ ಅಂತಿಮ ಯಾತ್ರೆ ಆರಂಭ ಆಗುತ್ತದೆ ಎಂದು ಭವಿಷ್ಯ ನುಡಿದ ಶಾ, ಕರ್ನಾಟಕದಿಂದ ಸಾವಿರಾರು ಕಿ.ಮೀ. ದೂರದಲ್ಲಿರುವ, ಕಮಲ ಅರ​ಳಲೇ ಅಸಾ​ಧ್ಯ​ವಾ​ಗಿದ್ದ ಸ್ಥಳಗಳಾಗಿದ್ದ ತ್ರಿಪುರಾ, ನಾಗಲ್ಯಾಂಡ್‌ ಮತ್ತು ಮೇಘಾಲಯದಲ್ಲಿ ಬಿಜೆಪಿ ಇದೀಗ ಸರ್ಕಾರ ರಚಿಸುತ್ತಿದೆ. ಪರಿ​ಸ್ಥಿತಿ ಹೀಗಿ​ರು​ವಾಗ ಕರ್ನಾಟಕದಲ್ಲಿ ಸರ್ಕಾರ ರಚಿಸೋದು ಸಾಧ್ಯವೇ ಎಂದು ಶಾ ಪ್ರಶ್ನಿಸಿದರು.

ಕೈ, ಜೆಡಿ​ಎಸ್‌ ಪರಿ​ವಾ​ರದ ಪಕ್ಷ​ಗ​ಳು: 

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಇವೆರಡೂ ಒಂದೊಂದು ಪರಿವಾರದ ಪಕ್ಷವಾಗಿದ್ದು, ಇಂಥ ಪಕ್ಷ​ಗ​ಳಿಂದ ಕರ್ನಾಟಕದ ಕಲ್ಯಾಣ ಅಸಾಧ್ಯ ಎಂದು ಅಮಿತ್‌ ಶಾ ಭವಿಷ್ಯ ನುಡಿದರು. ಇದೇ ವೇಳೆ ಜೆಡಿ​ಎ​ಸ್‌ಗೆ ಮತ ಹಾಕಿ​ದರೆ ಅದು ಕಾಂಗ್ರೆಸ್‌ಗೆ ಹಾಕಿ​ದಂತೆ ಎಂದು ಪುನ​ರು​ಚ್ಚ​ರಿ​ಸಿ​ದ​ರು.

ಜೆಡಿಎಸ್‌ ತನಗೆ ಸಿಗುವ 25-30 ಸೀಟುಗಳನ್ನು ತೆಗೆ​ದು​ಕೊಂಡು ನೇರವಾಗಿ ಕಾಂಗ್ರೆಸ್‌ ಉಡಿಯಲ್ಲಿ ಹಾಕಿಬಿಡುತ್ತದೆ. ಆಗ ನಿಮ್ಮ ಮತ ಅನುಪಯುಕ್ತ ಆಗುತ್ತದೆ. ಹೀಗಾಗಿ ಬಿಜೆಪಿಗೆ ಸಂಪೂರ್ಣ ಬಹುಮತದ ಸರ್ಕಾರ ರಚಿಸಲು ಭರ್ಜರಿ ಜಯ ತಂದುಕೊಡಿ ಎಂದರು.

ರೈಲ್ವೆಗೆ ಕಾಂಗ್ರೆಸ್‌ನ ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ನೀಡಿದ್ದ ಅನುದಾನಕ್ಕಿಂತ ಕೇವಲ 8 ವರ್ಷಗಳಲ್ಲಿ 9 ಪಟ್ಟು ಹೆಚ್ಚು ಅಂದರೆ .30 ಸಾವಿರ ಕೋಟಿಗಳನ್ನು ನೀಡಿದ್ದೇವೆ. ಹೀಗಾಗಿ ಸಿದ್ದರಾಮಯ್ಯ ಅವರು ಇಲ್ಲಿಗೆ ಪ್ರಚಾರಕ್ಕಾಗಿ ಬಂದಾಗ ಲೆಕ್ಕ ತೆಗೆದುಕೊಂಡು ಬರಲಿ ಎಂದು ಸವಾಲೆಸೆದರು.

Karnataka election 2023: ಅಮಿತ್‌ ಶಾಗೆ 5 ಕೆ.ಜಿ ಬೆಳ್ಳಿಯ ವಿಶೇಷ ಕಿರೀಟ, ಗಧೆ

ಕಾಶ್ಮೀ​ರ​ದಲ್ಲಿ ರಕ್ತ​ಪಾತ ನಿಲ್ಲಿ​ಸಿದ ಮೋದಿ: ಶಾ

ದೇಶಾದ್ಯಂತ ಪಿಎಫ್‌ಐ ಸಂಘಟನೆ ನಿಷೇಧಿಸಿ ಉಗ್ರವಾದಿಗಳು ಮಂಡಿಯೂರುವಂತೆ ಮಾಡಿದ್ದಲ್ಲದೆ ಕಲಂ 370 ತೆಗೆದು ಕಾಶ್ಮೀರದಲ್ಲಿ ಉಗ್ರರಿಂದ ಆಗು​ತ್ತಿದ್ದ ರಕ್ತಪಾತ ಬಿಡಿ, ಒಂದು ಕಲ್ಲೆಸೆ​ಯೋ ತಾಕತ್ತೂ ಇಲ್ಲದಂತೆ ಮಾಡಿದ ಪ್ರಧಾನಿ ಮೋದಿ ಆಡಳಿತ ವಿಶ್ವದೆಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ ಎಂದು ಅಮಿತ್‌ ಶಾ ನುಡಿದರು.

ಬಿಜೆಪಿಯ ಮೋದಿ ಸರ್ಕಾರ 80 ಕೋಟಿ ಬಡವರ ಏಳ್ಗೆಗಾಗಿ ಶ್ರಮಿಸಿದ್ದಲ್ಲದೆ, 10 ಕೋಟಿ ಶೌಚಾಲಯಗಳನ್ನು ನಿರ್ಮಿಸಿ ಮಹಿಳೆಯರ ಮಾನ ಉಳಿಸುವ ಪ್ರಯತ್ನ ಮಾಡಿದೆ. 8 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ನೀಡುವ ಕಾರ್ಯ ಮಾಡಿದೆ. 3 ಕೋಟಿಗೂ ಹೆಚ್ಚು ಮನೆಗಳಿಗೆ ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರ ವಿದ್ಯುತ್‌ ಪೂರೈಸುವಂಥ ಕಾರ್ಯಕ್ರಮ ಮೋದಿ ಜಾರಿಗೆ ತಂದಿದ್ದಾರೆ ಎಂದು ಯೋಜನೆಗಳ ಪಟ್ಟಿಮಾಡಿ, ಮೋದಿಗಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಮತ ನೀಡಿ ಎಂದು ಅಮಿತ್‌ ಶಾ ಕರೆ ನೀಡಿದರು.

Follow Us:
Download App:
  • android
  • ios