ಡಿಕೆಶಿ ವೈರಿಯಲ್ಲ, ಅವರು ನನ್ನ ದೊಡ್ಡ ಹಿತೈಷಿ: ಎಚ್ಡಿ ಕುಮಾರಸ್ವಾಮಿ ವ್ಯಂಗ್ಯ
ಡಿಕೆ ಶಿವಕುಮಾರ ನನಗೆ ಅವರ ವೈರಿ ಅಲ್ಲ, ದೊಡ್ಡ ಹಿತೈಷಿ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.
ಬೆಂಗಳೂರು (ಏ.1): ಡಿಕೆ ಶಿವಕುಮಾರ ನನಗೆ ಅವರ ವೈರಿ ಅಲ್ಲ, ದೊಡ್ಡ ಹಿತೈಷಿ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.
ಇಂದು ಸಂಸದೆ ಸುಮಲತಾ ಅಂಬರೀಶ್ ಭೇಟಿ ಬಳಿಕ ಮಾತನಾಡಿದ ಕುಮಾರಸ್ವಾಮಿ, ಐದು ವರ್ಷ ಸರ್ಕಾರ ಸಂಪೂರ್ಣ ನಡೆಸಲಿ ಎಂದು 39 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ವಿ ಅಂತ ಪದೇ ಪದೇ ಹೇಳ್ತಿದಾರೆ. ಆದರೆ ಐದು ವರ್ಷ ನಾಮಕಾವಸ್ಥೆಯಾಗಿ ಅಧಿಕಾರ ಕೊಟ್ರು. ಒಂದು ದಿನವೂ ಅಧಿಕಾರ ನಡೆಸಲು ನೆಮ್ಮದಿಯಾಗಿರಲು ಬಿಡಲಿಲ್ಲ. ಅದಕ್ಕೇ ಸಮ್ಮಿಶ್ರ ಸರ್ಕಾರ ಬಿದ್ದುಹೋಗಿದ್ದು, ನನ್ನಿಂದ ಸರ್ಕಾರ ಹೋಗಲಿಲ್ಲ ಎಂದು ಡಿಕೆ ಶಿವಕುಮಾರ ಹೇಳಿಕೆಗೆ ಎಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಯಾರು ಶತ್ರು, ಯಾರು ಹಿತೈಷಿ ಎಂದು ಗೊತ್ತಾಗಲಿದೆ ಎಂದರು.
ಬಿಎಸ್ವೈ ವಿರುದ್ಧ ಹಗುರ ಮಾತಾಡುವುದು ನಿಲ್ಲಿಸಲಿ; ಕೆಎಸ್ ಈಶ್ವರಪ್ಪ ವಿರುದ್ಧ ಶಾಸಕ ಚನ್ನಬಸಪ್ಪ ಕಿಡಿ
ಅಂಬರೀಶ್ ಮನೆ ನನಗೆ ಹೊಸದಲ್ಲ. ಚುನಾವಣೆಯಲ್ಲಿ ಬೆಂಬಲಿಸುವಂತೆ ಸುಮಲತಾ ಅಕ್ಕ ಅವರ ಬೆಂಬಲ ಕೋರಿದ್ದೇನೆ. ಬಿಜೆಪಿ ಜೊತೆ ಸುಮಲತಾ ಅಕ್ಕ ಒಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಮಂಡ್ಯ ಚುನಾವಣೆ ವಿಚಾರವಾಗಿ ಎಲ್ಲವನ್ನೂ ಮುಕ್ತವಾಗಿ ಚರ್ಚೆ ಮಾಡಿದ್ದೇನೆ. ಅದೆಲ್ಲ ಈ ಸಂದರ್ಭ ಬಹಿರಂಗಪಡಿಸಲು ಆಗೊಲ್ಲ. ಏಪ್ರಿಲ್ 3ರಂದು ಸುಮಲತಾ ನಿರ್ಧಾರ ಮಾಡ್ತಾರೆ. ಏ.4ರಂದು ನಾನು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನನಗೆ ಸುಮಲತಾ ಸಹಕಾರ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.