Asianet Suvarna News Asianet Suvarna News

ಮೋದಿ 3ನೇ ಬಾರಿ ಪ್ರಧಾನಿ ಆಗ್ತಾರೆ: ಸಂಸದ ಮುನಿಸ್ವಾಮಿ

ನರೇಂದ್ರ ಮೋದಿ ರವರ ನೇತೃತ್ವದ ಕೇಂದ್ರ ಸರ್ಕಾರದ ಸ್ವಚ್ಚಭಾರತ್‌ ಮಿಷನ್‌, ಮುದ್ರಾ ಯೋಜನೆ, ಮನೆಗೊಂದು ಶೌಚಾಲಯ, ಪ್ರತಿಮನೆಗೆ ಗಂಗಾ ಯೋಜನೆ, ಆಯುಷ್ಮಾನ್‌ ಕಾರ್ಡು, ಈಗೆ ಹಲವು ಸೌಲಭ್ಯಗಳು ನೀಡಿದೆ. 

Kolar MP S Muniswamy Talks Over PM Narendra Modi gvd
Author
First Published Aug 13, 2023, 4:28 PM IST

ಶಿಡ್ಲಘಟ್ಟ (ಆ.13): ನರೇಂದ್ರ ಮೋದಿ ರವರ ನೇತೃತ್ವದ ಕೇಂದ್ರ ಸರ್ಕಾರದ ಸ್ವಚ್ಚಭಾರತ್‌ ಮಿಷನ್‌, ಮುದ್ರಾ ಯೋಜನೆ, ಮನೆಗೊಂದು ಶೌಚಾಲಯ, ಪ್ರತಿಮನೆಗೆ ಗಂಗಾ ಯೋಜನೆ, ಆಯುಷ್ಮಾನ್‌ ಕಾರ್ಡು, ಈಗೆ ಹಲವು ಸೌಲಭ್ಯಗಳು ನೀಡಿದೆ. ಇದನ್ನು ಜನರಿಗೆ ತಿಳಿಸಬೇಕು. ನಮ್ಮವರು ನಮಗೆ ಓಟು ಹಾಕಿಲ್ಲವೆಂದು ಜನರಿಂದ ದೂರವಾಗಬೇಡಿ ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಮನವಿ ಮಾಡಿದರು.

ನಗರದ ಮಯೂರ ವೃತ್ತ ದ ಬಳಿ ಇರುವ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎರಡನೇ ಅವಧಿ​ಗೆ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಕಾಂಗ್ರೆಸ್‌ನವರು ಎಷ್ಟೇ ಬೊಬ್ಬೆ ಹೊಡೆದರು 3 ನೇ ಬಾರಿ ದೇಶಕ್ಕೆ ಮೋದಿಯವರೇ ಪ್ರಧಾನ ಮಂತ್ರಿಯಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸಂಶೋಧನಾ ಫೌಂಡೇಷನ್‌ ಸ್ಥಾಪಿಸಲು ಚಿಂತನೆ: ಸಚಿವ ಬೋಸರಾಜು

ಗ್ಯಾರಂಟಿಗೆ ಹಣ ಒದಗಿಸಲು ಪರದಾಟ: ಬಿಜೆಪಿ ಮುಖಂಡ ಸೀಕಲ್‌ ರಾಮಚಂದ್ರಗೌಡ ಮಾತನಾಡಿ, ವಿಧಾನಸಭೆಯಲ್ಲಿ 14 ಬಾರಿ ಬಜೆಟ್‌ ಮಂಡಿಸಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿರುವ ಗ್ಯಾರಂಟಿಗಳಿಗೆ ಹಣ ಒದಗಿಸಲು ಹರಸಹಾಸ ಪಡುವ ಜೊತೆಗೆ, ಈ ಯೋಜನೆಗಳ ಕುರಿತು ಅಲೋಚನೆ ಮಾಡುವಂತಾಗಿದೆ. ಆದಷ್ಟುಬೇಗ ಉಚಿತ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿ. ರಾಜ್ಯದಲ್ಲಿ ಕಾಂಗ್ರೆಸ್‌ ಜನರಿಗೆ ಉಚಿತ ಗ್ಯಾರಂಟಿಗಳ ಭರವಸೆ ನೀಡಿ ಅ​ಧಿಕಾರಕ್ಕೆ ಬಂದಿದೆ ಎಂದರು.

ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆ ತರಲು ಚಿಂತನೆ: ಸಚಿವ ಎಚ್‌.ಕೆ.ಪಾಟೀಲ್‌

ಈ ಸಂದರ್ಭದಲ್ಲಿ ದೊಡ್ಡತೇಕಹಳ್ಳಿ, ಪಲಿಚೇರ್ಲು, ಕೆಂಚಾರ್ಲಹಳ್ಳಿ, ಚೀಮಂಗಲ , ಕೊತ್ತನೂರು ಗ್ರಾಮ ಪಂಚಾಯಿತಿಗಳ ಬಿಜೆಪಿ ಬೆಂಬಲಿತ ಅಧ್ಯಕ್ಷರು - ಉಪಾಧ್ಯಕ್ಷರು ಆಯ್ಕೆಯದವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ಮುಖಂಡರಾದ ಸೀಕಲ್‌ ಆನಂದ್‌ ಗೌಡ. ತಾತಹಳ್ಳಿ ಕನಕಪ್ರಸಾದ್‌, ರಮೇಶ್‌ ಬಾಯರಿ, ಅರಿಕೆರೆ ಮುನಿರಾಜು, ರಜನಿಕಾಂತ್‌ ಬಾಬು, ಆಂಜನೇಯ ರೆಡ್ಡಿ, ನಗರಸಭೆ ಸದಸ್ಯ ನಾರಾಯಣ ಸ್ವಾಮಿ ಹಾಗೂ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು- ಉಪಾಧ್ಯಕ್ಷರು ಇದ್ದರು.

Follow Us:
Download App:
  • android
  • ios