ಮುಖ್ಯಮಂತ್ರಿ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಹೇಳಿಕೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇರ್ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರು, (ಡಿ.11): ಕೋಡಿಹಳ್ಳಿ ಒಬ್ಬ ನಾಲಾಯಕ್ ಎಂದು ಹೇಳಿಕೆ ಕೊಟ್ಟಿದ್ದ ಬಿಜೆಪಿ ಶಾಸಕರು ಎಂ.ಪಿ ರೇಣುಕಾಚಾರ್ಯ ಅವರುಗೆ ಕೋಡಿಹಳ್ಳಿ ಚಂದ್ರಶೇಖರ್ ತಿರುಗೇಟು ಕೊಟ್ಟಿದ್ದಾರೆ.
"
ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ. ಈತನಿಂದ ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಲ್ಲ. ಅವರದ್ದೇನಿದ್ದರೂ ಬೆಂಕಿ ಹಚ್ಚುವ ಕೆಲಸ. ಸಾರಿಗೆ ಸಿಬ್ಬಂದಿಗೂ ಕೋಡಿಹಳ್ಳಿ ಚಂದ್ರಶೇಖರ್ಗೂ ಏನು ಸಂಬಂಧ. ಆತ ಒಬ್ಬ ನಾಲಾಯಕ್ ಎಂದು ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದರು.
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಇದಕ್ಕೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಯಾವ ರೇಣುಕಾಚಾರ್ಯ? ಅದೇ ಆ ನರ್ಸ್ ಕೇಸ್? ಅವ್ರೇನಾ? ಕಚ್ಚೆ ಸರಿಯಿಲ್ಲ ಬಾಯಿ ಸರಿಯಿಲ್ಲ ಆ ವಯ್ಯನ ಬಗ್ಗೆ ಏನು ಹೇಳೋದು? ಎಂದು ತೀಷ್ಣವಾಗಿ ರೇಣುಕಾಚಾರ್ಯಗೆ ಟಾಂಗ್ ಕೊಟ್ಟರು.
ಕಳೆದ ಮೂರು ದಿನಗಳಿಂದ ವಿವಿಧ ಬೇಡಿಕೆ ಈಡೇರಿವಂತೆ ರಾಜ್ಯ ಸಾರಿಗೆ ನೌಕರರು ಪ್ರತಿಭಟನೆ ಕೈಗೊಂಡಿದ್ದು, ಬಸ್ ಇಲ್ಲದೇ ಪ್ರಯಾಣಿಕರು ಸಾಕಷ್ಟು ಪರದಾಡಿದರು.
ಇನ್ನು ಈ ಪ್ರತಿಭಟನೆಯ ನೇತೃತ್ವವ ವಹಿಸಿಕೊಂಡಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಹ ಕೋಡಿಹಳ್ಳಿಗೆ ಈ ಸಾರಿಗೆ ನೌಕರರಿಗೆ ಏನ ಸಂಬಂಧ..? ಅವರೊಬ್ಬ ರೋಲ್ಕಾಲ್ ಮನುಷ್ಯ, ಹಾಗೇ ಹೀಗೆ ಅಂತೆಲ್ಲಾ ಬೈಯುತ್ತಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
Last Updated Dec 13, 2020, 7:48 PM IST