Asianet Suvarna News Asianet Suvarna News

ನೂತನ ಸಚಿವ ಆರ್.ಬಿ ತಿಮ್ಮಾಪುರ್​ಗೆ ನೀಡಬೇಕಿದ್ದ ಖಾತೆಗೆ JDS ಕನ್ನ

ದೋಸ್ತಿ ಪಕ್ಷಗಳ ನಡುವೆ ಅಧಿಕಾರ ಹಂಚಿಕೆಯಲ್ಲಿ ಭಾರೀ ಬಿರುಕು..! ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಧರ್ಮ ಪಾಲಿಸ್ತಿಲ್ವಾ ಜೆಡಿಎಸ್..? ನಿಗಮ ಮಂಡಳಿ ಅಷ್ಟೇ ಅಲ್ಲ ಈಗ ಕೈ ಪಾಳೆಯದಲ್ಲಿರುವ ಖಾತೆಗಳಿಗೂ ಕೈ ಹಾಕಿದ ಜೆಡಿಎಸ್..! 

Karnataka HD Kumaraswamy Keeps Portfolio Meant For Congress Minister RB Timmapur
Author
Bengaluru, First Published Jan 2, 2019, 5:57 PM IST

ಬೆಂಗಳೂರು, [ಜ.02]: ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಸರ್ಕಾರದಲ್ಲಿ ಒಂದಲ್ಲ ಒಂದಕ್ಕೆ ಅಸಮಾಧನಗಳು ಸ್ಫೋಟಗೊಳ್ಳುತ್ತಲೇ ಇವೆ. ಇದಕ್ಕೆ ಪೂರಕವೆಂಬಂತೆ ಆರ್.ಬಿ ತಿಮ್ಮಾಪುರ್​ಗೆ ಕೊಡಬೇಕಾಗಿದ್ದ ಖಾತೆಗೆ ಜೆಡಿಎಸ್ ಕನ್ನ ಹಾಕಿದೆ.

 ರಾಜ್ಯದ ನೂತನ ಸಚಿವ ಸಂಪುಟದಲ್ಲಿ ವಿಧಾನಪರಿಷತ್​ ಸದಸ್ಯ, ಬಾಗಲಕೋಟೆಯ ಆರ್‌.ಬಿ.ತಿಮ್ಮಾಪುರ್ ಮಂತ್ರಿ ಭಾಗ್ಯವೇನೋ ಸಿಕ್ಕಿದೆ. ಎಐಸಿಸಿ ಪಟ್ಟಿಯಲ್ಲಿ ಆರ್.ಬಿ ತಿಮ್ಮಾಪುರ್​ಗೆ ಬಂದರು ಮತ್ತು ಒಳನಾಡು ಸಾರಿಗೆ, ಸಕ್ಕರೆ 2 ಖಾತೆ ಹಂಚಿಕೆ ಮಾಡಿದೆ. 

ಆದ್ರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯ ಪತ್ರದಲ್ಲಿ ಆರ್.ಬಿ.ತಿಮ್ಮಾಪುರ್​ಗೆ ಸಕ್ಕರೆ ಖಾತೆ ಮಾತ್ರ ಪ್ರಕಟಿಸಿದ್ದು, ಬಂದರು ಮತ್ತು ಒಳನಾಡು ಸಾರಿಗೆ ಖಾತೆಯನ್ನ ಯಾರಿಗೂ ಹಂಚದ ಕುಮಾರಸ್ವಾಮಿ ಅವರು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. 

ಸಂಪುಟ ಪುನಾರಚನೆ ಬಳಿಕ ಆರ್.ಬಿ.ತಿಮ್ಮಾಪುರ್​​​​ಗೆ ಬಂದರು ಮತ್ತು ಒಳನಾಡು ಸಾರಿಗೆ, ಸಕ್ಕರೆ ಎರಡು ಖಾತೆಗಳನ್ನು ನೀಡಲಾಗಿತ್ತು. ಆದ್ರೆ ನೋಟಿಫಿಕೇಶನ್​​ನಲ್ಲಿ ಆರ್.ಬಿ ತಿಮ್ಮಾಪುರ್​ಗೆ ಸಕ್ಕರೆ ಖಾತೆ ಮಾತ್ರ ನೀಡಲಾಗಿದ್ದು, ಸುತ್ತೋಲೆಯಲ್ಲಿ ಪ್ರಕಟ ಮಾಡದಿರೋದಕ್ಕೆ ಆರ್.ಬಿ.ತಿಮ್ಮಾಪುರ್ ಶಾಕ್ ಆಗಿದ್ದಾರೆ.

ಈ ಬೆಳವಣಣಿಗೆ ರಾಜ್ಯ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಜೆಡಿಎಸ್, ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಧರ್ಮ ಪಾಲಿಸ್ತಿಲ್ವಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

Follow Us:
Download App:
  • android
  • ios