Asianet Suvarna News Asianet Suvarna News

ದೆಹಲಿಯಲ್ಲಿಂದು ಮೋದಿ, ಡಿ.ಕೆ. ಶಿವಕುಮಾರ್‌ ಭೇಟಿ?

ಬೆಂಗಳೂರಿನ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಆಗಿ ಪರಿವರ್ತಿಸುವ ಯೋಜನೆ ಇದ್ದು, ಇದಕ್ಕೆ ಕೇಂದ್ರದ ಭೂಸಾರಿಗೆ ಇಲಾಖೆ ಯಿಂದ ಅಗತ್ಯ ನೆರವು ನೀಡು ವಂತೆ ಕೋರಲಿದ್ದಾರೆ. ಅದೇ ರೀತಿ, ಕಾವೇರಿ ನದಿಗೆ ಕಟ್ಟಲು ಉದ್ದೇಶಿಸಿರುವ ಮೇಕೆದಾಟು ಸಮತೋಲಿತ ಅಣೆಕಟ್ಟು ಯೋಜನೆಗೆ ಅನುಮತಿ ನೀಡಬೇಕು. ಇದು ರಾಜ್ಯಕ್ಕಿಂತ ತಮಿಳುನಾಡಿಗೇ ಹೆಚ್ಚಿನ ಉಪಯೋಗ ವಾಗಲಿದೆ ಎಂಬುದನ್ನು ಮನವರಿಕೆ ಮಾಡಿ ಕೊಡಲಿದ್ದಾರೆ. 

karnataka dcm dk shivakumar likely meet pm narendra modi in delhi grg
Author
First Published Jul 31, 2024, 9:43 AM IST | Last Updated Jul 31, 2024, 10:45 AM IST

ಬೆಂಗಳೂರು(ಜು.31):  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು(ಬುಧವಾರ) ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ಮೇಕೆದಾಟು, ಭದ್ರಾ ಮೇಲ್ದಂಡೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳು ಹಾಗೂ ಬೆಂಗಳೂರು ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಸೂಕ್ತ ನೆರವು ನೀಡುವಂತೆ ಕೋರಲಿದ್ದಾರೆ.

ಬೆಳಗ್ಗೆ 10.30ಕ್ಕೆ ಪ್ರಧಾನಿ ಅವರ ಭೇಟಿಗೆ ಅವಕಾಶ ಕೋರಲಾಗಿದೆ. ಹಾಗಾಗಿ, ಡಿ.ಕೆ. ಶಿವಕುಮಾ‌ರ್ ಅವರು ದೆಹಲಿಯಲ್ಲೇ ಉಳಿ ದಿದ್ದಾರೆ. ಪ್ರಧಾನಿ ಕಚೇರಿಯಿಂದ ಅನು ಮತಿ ಸಿಕ್ಕ ಕೂಡಲೇ ಭೇಟಿ ಮಾಡಲಿದ್ದಾರೆ.

ಸಿಡಿ ಶಿವಕುಮಾರನಿಂದ ಸರ್ಕಾರ ಹಾಳಾಗಿದೆ; ರಾಜ್ಯ ದಿವಾಳಿಯಾಗಿದೆ: ಡಿಕೆಶಿ ವಿರುದ್ಧ ಮತ್ತೆ ಹರಿಹಾಯ್ದ ರಮೇಶ್ ಜಾರಕಿಹೊಳಿ

ಬೆಂಗಳೂರಿನ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಆಗಿ ಪರಿವರ್ತಿಸುವ ಯೋಜನೆ ಇದ್ದು, ಇದಕ್ಕೆ ಕೇಂದ್ರದ ಭೂಸಾರಿಗೆ ಇಲಾಖೆ ಯಿಂದ ಅಗತ್ಯ ನೆರವು ನೀಡು ವಂತೆ ಕೋರಲಿದ್ದಾರೆ. ಅದೇ ರೀತಿ, ಕಾವೇರಿ ನದಿಗೆ ಕಟ್ಟಲು ಉದ್ದೇಶಿಸಿರುವ ಮೇಕೆದಾಟು ಸಮತೋಲಿತ ಅಣೆಕಟ್ಟು ಯೋಜನೆಗೆ ಅನುಮತಿ ನೀಡಬೇಕು. ಇದು ರಾಜ್ಯಕ್ಕಿಂತ ತಮಿಳುನಾಡಿಗೇ ಹೆಚ್ಚಿನ ಉಪಯೋಗ ವಾಗಲಿದೆ ಎಂಬುದನ್ನು ಮನವರಿಕೆ ಮಾಡಿ ಕೊಡಲಿದ್ದಾರೆ. ಅದೇ ರೀತಿ, ಭದ್ರಾ ಮೇಲ್ದಂಡೆ ಯೋಜನೆಗೆ ಸಹಾಯ ಬಯಸಲಿದ್ದಾರೆ ಎಂದು ತಿಳಿದುಬಂದಿ

Latest Videos
Follow Us:
Download App:
  • android
  • ios