‘ಎಲ್ಲರಿಗೂ ವೆಲ್‌ಕಮ್ ಟು ಕರ್ನಾಟಕ’| ಆಪರೇಶನ್ ಸಂಕ್ರಾಂತಿ ಫೇಲ್ ಆದ ಪರಿಣಾಮ| ರಾಜ್ಯಕ್ಕೆ ಮರಳುತ್ತಿರುವ ಬಿಜೆಪಿ ಶಾಸಕರು| ಹರಿಯಾಣದ ಸ್ಟಾರ್ ಹೋಟೆಲ್‌ನಲ್ಲಿರುವ ಬಿಜೆಪಿ ಶಾಸಕರು| ಮರಳಿ ಬಂದ ಶಾಸಕರಿಗೆ ಕಾಂಗ್ರೆಸ್ ವ್ಯಂಗ್ಯಭರಿತ ವೆಲ್‌ಕಮ್| ಇನ್ನಾದರೂ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಲು ಸಲಹೆ| ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ 

ಬೆಂಗಳೂರು(ಜ.17): ಕಳೆದ ಕೆಲವು ದಿನಗಳಿಂದ ಹರಿಯಾಣದ ಸ್ಟಾರ್ ಹೋಟೆಲ್‌ನಲ್ಲಿ ಬೀಡು ಬಿಟ್ಟಿರುವ ಬಿಜೆಪಿ ಶಾಸಕರು ಒಬ್ಬೊಬ್ಬರಾಗಿ ಮರಳಿ ರಾಜ್ಯಕ್ಕೆ ಬರುತ್ತಿದ್ದಾರೆ.

ಈ ಮಧ್ಯೆ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ವ್ಯಂಗ್ಯಭರಿತ ಸ್ವಾಗತ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಲಕ್ಸುರಿ ಹೋಟೆಲ್ ನಲ್ಲಿ ಜಾಲಿ ಹಾಲಿ ಡೇ ಮುಗಿಸಿ ಬರುತ್ತಿರುವ ಬಿಜೆಪಿ ಶಾಸಕರಿಗೆ ಸ್ವಾಗತ. ಇನ್ನು ಮುಂದಾದರೂ ಈ ಶಾಸಕರು ತಮ್ಮ ಕ್ಷೇತ್ರಗಳಿಗೆ ತೆರಳಿ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತಾರೆ ಎಂಬ ವಿಶ್ವಾಸವಿದೆ..’ ಎಂದು ಕಿಚಾಯಿಸಿದ್ದಾರೆ.

Scroll to load tweet…

ಆಪರೇಶನ್ ಸಂಕ್ರಾಂತಿ ಹೆಸರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತ ತರುವ ಮೂಡ್‌ನಲ್ಲಿದ್ದ ಬಿಜೆಪಿ, ಇದೀಗ ಮತ್ತೊಮ್ಮೆ ತನ್ನ ತಂತ್ರದಲ್ಲಿ ವಿಫಲತೆ ಕಂಡಿದೆ. ಈ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಬೀಡು ಬಿಟ್ಟಿದ್ದ ಬಿಜೆಪಿ ಶಾಸಕರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿ ರಾಜ್ಯಕ್ಕೆ ವಾಪಸ್ ಬರುತ್ತಿದ್ದಾರೆ.