Asianet Suvarna News Asianet Suvarna News

29 ಸಚಿವರಿಂದ ಪ್ರಮಾಣವಚನ: ಬೊಮ್ಮಾಯಿ ಸಂಪುಟದ ಹೊಸಬರು- ಹಳಬರ ಮಿಶ್ರಣ

29 ಸಚಿವರಿಂದ ಪ್ರಮಾಣವಚನ
ಬೊಮ್ಮಾಯಿ ಸಂಪುಟದ ಹೊಸಬರು- ಹಳಬರ ಮಿಶ್ರಣ
ಇದೇ ಮೊದಲ ಬಾರಿಗೆ ಸಚಿವರಾದ್ದವರು ಒಟ್ಟು 6 ಜನರು

Karnataka cabinet 29 ministers Takes oath on August 4th rbj
Author
Bengaluru, First Published Aug 4, 2021, 5:39 PM IST

ಬೆಂಗಳೂರು, (ಆ.04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಶಾಸಕರು ಸೇರ್ಪಡೆಗೊಂಡಿದ್ದು, ಇಂದು (ಬುಧವಾರ) ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಮಾಡಿದರು. 

ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಪ್ರಮಾಣವಚನ ಬೋಧಿಸಿದರು. ಇನ್ನು ಬೊಮ್ಮಾಯಿ ಸಂಪುಟದ ಹೊಸಬರು- ಹಳಬರ ಮಿಶ್ರಣವಾಗಿದ್ದು, ಬೊಮ್ಮಾಯಿ ಯಾವು ರೀತಿ ನಡೆಸುಕೊಂಡ ಹೋಗುತ್ತಾರೆ ಎನ್ನುವುದು ಮುಂದಿರುವ ಪ್ರಶ್ನೆ

ಪಕ್ಷ ಮಾಡುತ್ತಿರುವ ದೊಡ್ಡ ಅವಮಾನ: ಸ್ವಪಕ್ಷದ ವಿರುದ್ಧ ಬಿಜೆಪಿ ಶಾಸಕಿ ಅಸಮಾಧಾನ

ಜಾತಿವಾರು, ಪಕ್ಷ ಸಂಘಟನೆ, ವ್ಯಕ್ತಿತ್ವ ಸೇರಿದಂತೆ ಇತರೆ ಮಾನದಂಡಗಳ ಆಧಾರದ ಮೇಲೆ ಹೈಕಮಾಂಡ್ ಮಂತ್ರಿ ಸ್ಥಾನಬಾಗ್ಯ ನೀಡಿದೆ. ಇನ್ನು ಮುಖ್ಯವಾಗಿ ಆರು ಹೊಸ ಮುಖಗಳಿಗೆ ಹೈಕಮಾಂಡ್ ಮಣೆಹಾಕಿರುವುದು ವಿಶೇಷ. ಅಂದ್ರೆ ಆ ಆರು ಜನರು ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.

ಹೌದು... ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಚಿವರಾದ್ದವರು ಒಟ್ಟು 6 ಜನರು. ಇನ್ನುಳಿದವರು ಈಗಾಗಲೇ ಸಚಿವರಾಗಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಯಾರು ಆ ಆರು ಜನ ಹೊಸಬರು?
1. ಅರಗ ಜ್ಞಾನೇಂದ್ರ (ತೀರ್ಥಹಳ್ಳಿ )
2. ಸುನಿಲ್  ಕುಮಾರ್ ( ಕಾರ್ಕಳ )
3. B C ನಾಗೇಶ್  (ತಿಪಟೂರು )
4.ಹಾಲಪ್ಪ ಆಚಾರ್(ಯಲಬುರ್ಗಾ) 
5. ಮುನಿರತ್ನ   (  R R ನಗರ )
6. ಶಂಕರ್  ಪಾಟೀಲ್  ಮುನೇನಕೊಪ್ಪ    (ನವಲಗುಂದ ).

ಈಗಾಗಲೇ ಮಂತ್ರಿಯಾಗಿದ್ದವರು
ಗೋವಿಂದ ಕಾರಜೋಳ 
ಕೆ.ಎಸ್​.ಈಶ್ವರಪ್ಪ, 
ಆರ್​.ಅಶೋಕ್​,
 ಬಿ.ಶ್ರೀರಾಮುಲು
ವಿ.ಸೋಮಣ್ಣ
ಉಮೇಶ್ ಕತ್ತಿ
ಎಸ್. ಅಂಗಾರ 
ಜೆ.ಸಿ.ಮಾಧುಸ್ವಾಮಿ 
ಡಾ. ಅಶ್ವಥ ನಾರಾಯಣ
 ಸಿ.ಸಿ.ಪಾಟೀಲ್​ 
ಆನಂದ್​ ಸಿಂಗ್ 
ಕೋಟಾ ಶ್ರೀನಿವಾಸ ಪೂಜಾರ
 ಪ್ರಭು ಚೌಹ್ವಾಣ್​
 ಮುರುಗೇಶ್​ ನಿರಾಣಿ
 ಶಿವರಾಮ್​ ಹೆಬ್ಬಾರ್​
 ಎಸ್​.ಟಿ. ಸೋಮಶೇಖರ್​
 ಬಿ.ಸಿ.ಪಾಟೀಲ್
ಬಸವರಾಜ ಬೈರತಿ
, ಡಾ.ಕೆ.ಸುಧಾಕರ್​
ಗೋಪಾಲಯ್ಯ, 
ಶಶಿಕಲಾ ಜೊಲ್ಲೆ
ಎಂಟಿಬಿ ನಾಗರಾಜ್​ 

Follow Us:
Download App:
  • android
  • ios