Asianet Suvarna News Asianet Suvarna News

ಬೈ ಎಲೆಕ್ಷನ್‌ಗೆ ಬಿಜೆಪಿ  ಪಟ್ಟಿ;  ಬೆಳಗಾವಿಗೆ ಅಚ್ಚರಿ ಅಭ್ಯರ್ಥಿ

ಬೆಳಗಾವಿ ಲೋಕಸಭಾ ಕಣಕ್ಕೆ ಬಿಜೆಪಿ ಅಭ್ಯರ್ಥಿ ಫೈನಲ್/ ಸುರೇಶ್ ಅಂಗಡಿ ಪತ್ನಿ ಮಂಗಳಾಗೆ ಟಿಕೆಟ್ ಕೊಟ್ಟು ಅಚ್ಚರಿ/ ಬಸವ ಕಲ್ಯಾಣದಿಂದ ಶರಣು ಸಲಗಾರ್/ ಸತೀಶ್ ಜಾರಕಿಹೊಳಿ ಎದುರಿಸಲು ಮಂಗಳಾ

Karnataka By Election Suresh Angadi wife mangala-angadi BJP Candidate for Belagavi Lok Sabha mah
Author
Bengaluru, First Published Mar 25, 2021, 10:27 PM IST

ಬೆಂಗಳೂರು/ ನವದೆಹಲಿ(ಮಾ.  25) ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ  ಮಾಡಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ದಿವಂಗತ ಸುರೇಶ್ ಅಂಗಡಿ ಪತ್ನಿ ಮಂಗಳಾ ಅವರಿಗೆ ಟಿಕೆಟ್ ಸಿಕ್ಕಿದೆ. ಬಸವಕಲ್ಯಾಣ ಕ್ಷೇತ್ರದಿಂದ ಶರಣು  ಸಲಗಾರ್ ಮತ್ತು ಮಸ್ಕಿಯಂಲ್ಲಿ ನಿರೀಕ್ಷೆಯಂತೆ ಪ್ರತಾಪ್ ಗೌಡ ಪಾಟೀಲ್  ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

ಜಗದೀಶ್ ಶೆಟ್ಟರ್  ಕುಟುಂಬಕ್ಕೆ ಬೆಳಗಾವಿ ಲೋಕಸಭಾ ಟಿಕೆಟ್ ಸಿಗಲಿದೆ ಎಂಬುದನ್ನು ಹೇಳಲಾಗಿತ್ತು.  ಮಂಗಳಾ ಅವರಿಗೆ ಟಿಕೆಟ್ ನೀಡಿ ಬಿಜೆಪಿ ಅಚ್ಚರಿ ಮೂಡಿಸಿದೆ. ಸತೀಶ್ ಜಾರಕಿಹೊಳಿ ಪ್ರಬಲ ಅಭ್ಯರ್ಥಿ ಎಂಬ  ಕಾರಣಕ್ಕೆ ಮಂಗಳಾ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತು ಕೇಳಿಬಂದಿದೆ.

Karnataka By Election Suresh Angadi wife mangala-angadi BJP Candidate for Belagavi Lok Sabha mah

ಕಲಾಪ ಮುಗಿದರೂ ಹಾಗೆ ಉಳಿದ ಪ್ರಶ್ನೆಗಳು

ದಿ. ಸುರೇಶ್ ಅಂಗಡಿ ಅವರ ಪುತ್ರಿ, ಹಾಗೂ ಸಚಿವ ಜಗದೀಶ್ ಶೆಟ್ಟರ್ ಅವರ ಸೊಸೆ ಶ್ರದ್ಧಾ ಶೆಟ್ಟರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಅಂತಿಮವಾಗಿ ಉಪಚುನಾಣೆ ಕಣ ಒಂದು ಹಂತಕ್ಕೆ ಬಂದಿದ್ದು ಆಡಳಿತದಲ್ಲಿರುವ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಿದೆ.

ಈ ಹಿಂದೆ  ಕಳೆದ ಲೋಕಸಭಾ ಚುನಾವಣೆಯಲ್ಲಿ  ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ದಿವಂಗತ ಅನಂತ್‌ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿತ್ತು. 

 

Follow Us:
Download App:
  • android
  • ios