Asianet Suvarna News Asianet Suvarna News

ಬಜೆಟ್ ಅಧಿವೇಶನಕ್ಕೆ ಆನಂದ್ ಸಿಂಗ್ ಬಂದೇ ಬರ್ತಾರೆ!

ನಾಳೆಯಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ. ಕಾಂಗ್ರೆಸ್ ಶಾಸಕರಿಂದಲೇ ಹಲ್ಲೆಗೆ ಒಳಗಾಗಿದ್ದ ಶಾಸಕ ಆನಂದ್ ಸಿಂಗ್ ಅಧಿವೇಶನಕ್ಕೆ ಬರುತ್ತಾರೋ ಇಲ್ಲವೋ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.

karnataka budget session 2019 congress mla anand Singh will attend
Author
Bengaluru, First Published Feb 5, 2019, 11:06 PM IST

ಬೆಂಗಳೂರು[ಫೆ. 05]  ಬಜೆಟ್ ಅಧಿವೇಶನಕ್ಕೆ ಶಾಸಕ‌ ಆನಂದ್ ಸಿಂಗ್‌‌ ಹಾಜರಾಗುವುದು ಖಚಿತವಾಗಿದೆ.  ಅಧಿವೇಶನಕ್ಕೆ ಬರುವುದಾಗಿ ಕಾಂಗ್ರೆಸ್ ನಾಯಕರಿಗೆ ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 10:30 ಸುಮಾರಿಗೆ ಮನೆಯಿಂದ ಹೊರಡಲಿರುವ ಆನಂದ್ ಸಿಂಗ್ ಅಧಿವೇಶನಕ್ಕೆ ಬಂದು ಹಾಜರಾತಿ ಹಾಕಿ ವಾಪಸ್ಸಾಗುವ ಸಾಧ್ಯತೆ ಹೆಚ್ಚಿದೆ. ದೈಹಿಕವಾಗಿ ಆರೋಗ್ಯ ಸಹಕರಿಸಿದರೆ ಕಲಾಪದಲ್ಲಿ ಪಾಲ್ಗೊಳ್ಳುವ ಇಂಗಿತವನ್ನು ಆನಂದ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ಕಳೆದ 15 ದಿನಗಳಿಂದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಮವಾರ ಸಂಜೆ ಆನಂದ್ ಸಿಂಗ್ ಡಿಸ್ಚಾರ್ಜ್ ಆಗಿದ್ದರು.

Follow Us:
Download App:
  • android
  • ios