Asianet Suvarna News Asianet Suvarna News

ಬಸವಕಲ್ಯಾಣ, ಮಸ್ಕಿ, ಬೆಳಗಾವಿ ಉಪ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ

ಮುಂಬರುವ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಉಪ ಚುನಾವಣೆಗಾಗಿ ಉಸ್ತುವಾರಿಗಳನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ)  ಪ್ರಕಟಿಸಿದೆ. 

Karnataka BJP opinionates in charges for assembly and lok sabha by polls rbj
Author
Bengaluru, First Published Feb 4, 2021, 10:04 PM IST

ಬೆಂಗಳೂರು, (ಫೆ.04):  ಬಸವ ಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಉಪ ಚುನಾವಣೆ ನಡೆಯಬೇಕಿದೆ. ಇನ್ನು ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಈ ಮೂರು ಕ್ಷೇತ್ರಗಳಿಗೆ ಕರ್ನಾಟಕ ಬಿಜೆಪಿ ಗುರುವಾರ ಉಸ್ತುವಾರಿಗಳನ್ನು ನೇಮಿಸಿದೆ. ಈ ಮೊದಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ. ವೈ ವಿಜಯೇಂದ್ರ ಅವರಿಗೆ ಬಸವ ಕಲ್ಯಾಣ ಕ್ಷೇತ್ರದ ಉಸ್ತುವಾರಿ ನೀಡಲಾಗುತ್ತು. 

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಎರಡು ದೊಡ್ಡ ಕುಟುಂಬಗಳ ಮಧ್ಯೆ ಜಂಗಿ ಕುಸ್ತಿ

ಆದ್ರೆ, ಇದೀಗ ಬದಲಾವಣೆ ಮಾಡಿ ಅವರಿಗೆ ಮಸ್ಕಿ ಕ್ಷೇತ್ರ ಉಸ್ತುವಾರಿಯಾಗಿ ಜವಾಬ್ದಾರಿ ನೀಡಲಾಗಿದೆ.  ಹಾಗಾದ್ರೆ, ಇನ್ನುಳಿದಂತೆ ಯಾರಿಗೆ ಯಾವ ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಬಸವಕಲ್ಯಾಣ ಉಸ್ತುವಾರಿಗಳು
* ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, * ವಿ ಸೋಮಣ್ಣ, * ಬಸವರಾಜ ಬೊಮ್ಮಾಯಿ, * ಭಗವಂತ ಖೂಬಾ, * ಮಾಲಿಕಯ್ಯ ಗುತ್ತೇದಾರ್, ರಾಜ್ಯ ಉಪಾಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕರ್, ಪ್ರಭಾರಿ ಈಶ್ವರ್ ಸಿಂಗ್ ಠಾಕೂರ್, ಅಮರನಾಥ್ ಪಾಟೀಲ್.

ಮಸ್ಕಿ ಉಸ್ತುವಾರಿಗಳ ಪಟ್ಟಿ
* ಶ್ರೀರಾಮುಲು, * ಎನ್ ರವಿ ಕುಮಾರ್, * ಬಿ. ವೈ. ವಿಜಯೇಂದ್ರ, * ನೇಮಿರಾಜ್ ನಾಯಕ್, * ನರಸಿಂಹ ನಾಯಕ್ (ರಾಜೂ ಗೌಡ). *  ಶಿವರಾಜ್ ಪಾಟೀಲ್, ಶಾಸಕ

ಬೆಳಗಾವಿ ಲೋಕಸಭಾ ಉಸ್ತುವಾರಿಗಳು
* ಜಗದೀಶ್ ಶೆಟ್ಟರ್, * ಪ್ರಹ್ಲಾದ್ ಜೋಶಿ, * ಮಹೇಶ್ ಟೆಂಗಿನಕಾಯಿ * ರಮೇಶ್ ಜಾರಕಿಹೊಳಿ, * ಉಮೇಶ್ ಕತ್ತಿ, * ಶಶಿಕಲಾ ಜೊಲ್ಲೆ

Follow Us:
Download App:
  • android
  • ios