ಕಾಂತರಾಜು ಆಯೋಗವು ಹಲವು ಮಾನದಂಡಗಳನ್ನಿಟ್ಟುಕೊಂಡು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿದೆಯೇ ಹೊರತು, ಯಾವುದೇ ರೀತಿಯ ಜಾತಿಗಣತಿ ಮಾಡಿಲ್ಲ. ಹೀಗಾಗಿ ಕಾಂತರಾಜು ವರದಿಯಲ್ಲಿರುವ ಗೊಂದಲಗಳನ್ನು ಸರ್ಕಾರ ನಿವಾರಿಸುವ ಕೆಲಸ ಮೊದಲು ಮಾಡಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕೋರಿದರು.
ಬೆಂಗಳೂರು (ಏ.23): ಕಾಂತರಾಜು ಆಯೋಗವು ಹಲವು ಮಾನದಂಡಗಳನ್ನಿಟ್ಟುಕೊಂಡು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿದೆಯೇ ಹೊರತು, ಯಾವುದೇ ರೀತಿಯ ಜಾತಿಗಣತಿ ಮಾಡಿಲ್ಲ. ಹೀಗಾಗಿ ಕಾಂತರಾಜು ವರದಿಯಲ್ಲಿರುವ ಗೊಂದಲಗಳನ್ನು ಸರ್ಕಾರ ನಿವಾರಿಸುವ ಕೆಲಸ ಮೊದಲು ಮಾಡಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕೋರಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಸುರೇಶ್, ಕಾಂತರಾಜು ಆಯೋಗದ ವರದಿ ಸಿದ್ಧವಾಗಿ 10 ವರ್ಷಗಳಾಗಿರುವುದರಿಂದ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದೆ. ಅದರಲ್ಲೂ ನಗರ ಪ್ರದೇಶದ ಜನರ ಮಾಹಿತಿ ವರದಿಯಲ್ಲಿ ಸಮರ್ಪಕವಾಗಿ ಸೆರಿಸಲಾಗಿದೆಯೇ? ಇಲ್ಲವೇ ಎಂಬ ಗೊಂದಲಗಳಿವೆ.
ರಾಜ್ಯದಲ್ಲಿ 1.34 ಕೋಟಿ ಕುಟುಂಬಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ. ಕಾಂತರಾಜು ಆಯೋಗ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡಿತ್ತು. ಆದರೆ, ವರದಿಗೆ ಸಂಬಂಧಿಸಿದಂತೆ ಜಾತಿ ವಿಚಾರ ಚರ್ಚೆಯಾಗುತ್ತಿದೆ. ಜಾತಿಗಳ ಸಂಖ್ಯೆಗಿಂತ ಪ್ರಮುಖವಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆಯಾಗಬೇಕು ಎಂದರು. ಜಾತಿಗಣತಿ ವಿಚಾರವಾಗಿ ಎದ್ದಿರುವ ಅನುಮಾನಗಳನ್ನು ರಾಜ್ಯ ಸರ್ಕಾರ ಪರಿಹರಿಸಬೇಕು. ಕಾಂತರಾಜು ಆಯೋಗವು ಜಾತಿಗಣತಿಯನ್ನು ಮಾಡಿಲ್ಲ. ಬದಲಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿದೆ.
ಅಕ್ರಮ ಫ್ಲೆಕ್ಸ್ ಅಳವಡಿಸಿದರೆ ಎಫ್ಐಆರ್ ದಾಖಲಿಸುವ ಜೊತೆಗೆ ದಂಡ: ತುಷಾರ್ ಗಿರಿನಾಥ್
ಅದನ್ನೇ ಜಯಪ್ರಕಾಶ್ ಹೆಗ್ಡೆ ಸರ್ಕಾರದ ಮುಂದಿಟ್ಟಿದ್ದಾರೆ ಎಂದು ಹೇಳಿದರು. ವರದಿ ಕುರಿತು ಚರ್ಚಿಸಲು ವಿಧಾನಮಂಡಲ ಅಧಿವೇಶನ ಕರೆಯಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್, ಅದೂ ಕೂಡ ಒಂದು ಭಾಗವೇ. ನಾನು ಅದನ್ನು ಅಲ್ಲಗಳೆಯುವುದಿಲ್ಲ. ಈ ರೀತಿಯ ದೊಡ್ಡ ತೀರ್ಮಾನ ತೆಗೆದುಕೊಳ್ಳುವಾಗ ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ತೆಲಂಗಾಣದಲ್ಲೂ ಗಣತಿ ಮಾಡಿದಾಗ ಅದನ್ನು ಅಧಿವೇಶನದಲ್ಲಿ ಮಂಡನೆ ಮಾಡಿ ಚರ್ಚಿಸಲಾಗಿತ್ತು. ಹೀಗಾಗಿ ರಾಜ್ಯದಲ್ಲೂ ವಿಶೇಷ ಅಧಿವೇಶ ಕರೆದು ಚರ್ಚೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಸಲಹೆ ನೀಡಿದರು.
ಪೆಟ್ಟು ಬಿದ್ದು ಹುಚ್ಚರಾಗಿದ್ದಾರೆ: ‘ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ತಲೆಗೆ ಪೆಟ್ಟು ಬಿದ್ದು ಹುಚ್ಚ ಆಗಿದ್ದಾನೆ. ಆತನ ಹೆಸರು ಹೇಳಲೂ ಅಸಹ್ಯ ಆಗುತ್ತದೆ. ಹೀಗಾಗಿ ಮಾತನಾಡುವುದು ಬೇಡ ಎಂದು ಸುಮ್ಮನಾಗಿದ್ದೆ. ಇನ್ನು ಸುಮ್ಮನಿರುವುದಿಲ್ಲ. ವಿಧಾನಸೌಧದಲ್ಲಿ ನಡೆದಿರುವ ಅತ್ಯಾಚಾರದ ಚಾರ್ಜ್ಶೀಟ್ನ್ನು ಮಂಗಳವಾರ ಬಿಚ್ಚಿಡುತ್ತೇನೆ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, ‘ಆತನಿಗೆ ತಲೆ ಪೆಟ್ಟಾಗಿದೆ ಎಂದು ಸಂಸದರಾದ ಡಾ.ಮಂಜುನಾಥ್ ಅವರೇ ಹೇಳಿದ್ದಾರೆ. ಆ್ಯಸಿಡ್ ತಲೆಗೆ ಬಿದ್ದು ತಲೆಗೆ ಆ್ಯಸಿಡ್ ಹೋಗಿದೆ ಎಂದು ಹೇಳಿದ್ದರಲ್ಲ. ಹೀಗಾಗಿ ತಲೆ ಕೆಟ್ಟು ಮಾತನಾಡುತ್ತಿದ್ದಾನೆ.
ಸಿದ್ದರಾಮಯ್ಯ ಕುರ್ಚಿ ಉಳಿವಿಗಾಗಿ ಜಾತಿ ವರದಿ ತಂದಿಲ್ಲ: ಯತೀಂದ್ರ
ಆತನ ವಿರುದ್ಧದ ಚಾರ್ಜ್ಶೀಟ್ ವರದಿಯನ್ನೇ ತಂದು ಓದುತ್ತೇನೆ. ನೀವು ವಿಧಾನಸೌಧದಲ್ಲಿ ನಡೆದಿರುವ ರೇಪ್ ಬಗ್ಗೆ ಸುದ್ದಿ ಹಾಕಬೇಕು. ಇಷ್ಟು ದಿನ ನಾನು ಮಾತನಾಡಿರಲಿಲ್ಲ. ಈಗ ಮಾತನಾಡುತ್ತೇನೆ ಕೇಳಿಸಿಕೊಳ್ಳಲಿ’ ಎಂದು ಹೇಳಿದರು. ಮುನಿರತ್ನ ಅವರ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಅವರು, ಅವನ ಹೆಸರು ಹೇಳಲೂ ಅಸಹ್ಯ ಆಗುತ್ತದೆ. ಆದರೂ ಆತನ ಹೆಸರು ಹೇಗೆ ಕರೆಯುತ್ತೀರಿ ಎಂದು ಅರ್ಥವಾಗುತ್ತಿಲ್ಲ. ಅವನ ದುರ್ನತಡೆಗಳನ್ನು ಖಂಡಿಸದೆ ಇನ್ನೂ ವಿಜೃಂಭಿಸುತ್ತೀರಲ್ಲ ಅದರ ಬಗ್ಗೆ ಅಸಮಾಧಾನ ಇದೆ. ಬೇರೆಯವರ ಬಗ್ಗೆ ಹೇಗೆ ತೋರಿಸುತ್ತೀರಿ, ಇವರ ಬಗ್ಗೆ ಸುದ್ದಿಗಳನ್ನು ಹೇಗೆ ತೇಲಿಸುತ್ತೀರಿ ಎಂಬ ಬಗ್ಗೆ ಬೇಸರವಿದೆ ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.
