ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ  ಹೋರಾಟ ನಡೆಯುತ್ತಿದೆ. ಇದರ ಮಧ್ಯೆ  ಜಯಮೃತ್ಯುಂಜಯ ಶ್ರೀಗಳು ತಮ್ಮ ಸಮಾಜದ ಶಾಸಕರುಗಳಿಗೆ ಕಿವಿ ಮಾತೊಂದನ್ನು ಹೇಳಿದ್ದಾರೆ.

ದಾವಣಗೆರೆ, (ಜ.29): ಪಂಚಮಸಾಲಿ ಸಮಾಜದ ಶಾಸಕರುಗಳು ನೀವು ರಾಜೀನಾಮೆ ಕೊಡಬೇಡಿ, ಮುಖ್ಯಮಂತ್ರಿಗಳೇ ರಾಜೀನಾಮೆ ನೀಡುವಂತೆ ಒತ್ತಡಹಾಕಿ ಎಂದು ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಹರಿಹರದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಪಾದಯಾತ್ರೆ ಸಮಾವೇಶದ ಬಹಿರಂಗ ಸಭೆಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ನೀವು ರಾಜೀನಾಮೆ ಕೊಟ್ಟರೆ ಪ್ರಯೋಜನವಿಲ್ಲ. ನೀವು ನಮ್ಮ ಸಮಾಜದಿಂದ ಗೆದ್ದಿದ್ದೀರ, ರಾಜೀನಾಮೆ ಕೊಡಬೇಡಿ, ನಮ್ಮ ಬೇಡಿಕೆಯನ್ನ ಈಡೇರಿಸದ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ತಾವೇ ರಾಜೀನಾಮೆ ಕೊಡಬೇಕು ಎಂದು ಹೇಳಿದರು.

ಮೀಸಲಾತಿಗಾಗಿ ರಾಜ್ಯದಲ್ಲೊಂದು ಬೃಹತ್ ಪಾದಯಾತ್ರೆ: ಪಂಚಲಕ್ಷ ನಡೆ ವಿಧಾನಸೌಧದ ಕಡೆ

ಪಂಚಮಸಾಲಿಯವರೇ ಸಿಎಂ ಆದ್ರೂ 2ಎ ಹೋರಾಟ ನಿಲ್ಲೋದಿಲ್ಲ. ಬಿಎಸ್​ವೈ ನಮ್ಮ ಬೇಡಿಕೆ ಈಡೇರಿಸಿಲ್ಲ, ಏನಾದರೂ ಕೇಂದ್ರದವರು ಬಿಎಸ್​ವೈ ರಾಜೀನಾಮೆ ಪಡೆದರೆ, ಉತ್ತರ ಕರ್ನಾಟಕದವರೇ ಸಿಎಂ ಆಗಬೇಕು. ಅದರಲ್ಲೂ ಲಿಂಗಾಯತರಿಗೆ ನೀಡುವಂತೆ ಹೇಳುತ್ತೇನೆ. ನಮ್ಮ ಸಮಾಜದಲ್ಲಿ 15 ಶಾಸಕರು ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ ಎಂದರು.