Asianet Suvarna News Asianet Suvarna News

ಕರ್ನಾಟಕ ಜನತೆಗೆ ಕಾಂಗ್ರೆಸ್‌ ಸರ್ಕಾರದಿಂದ ಅನ್ಯಾಯ: ಪ್ರತಾಪಗೌಡ ಪಾಟೀಲ್

ನನ್ನ ಅಧಿಕಾರ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕರಿಗೆ ಸಾಧ್ಯವಾಗುತ್ತಿಲ್ಲ. ನನ್ನ ಮೂರೂವರೆ ವರ್ಷದ ಅಧಿಕಾರ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದಾಗೂ ಜನರ ತೀರ್ಪಿಗೆ ತಲೆ ಬಾಗುತ್ತೇನೆ ಎಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ 

Injustice by the Congress government to the people of Karnataka says Former MLA Pratapgouda Patil grg
Author
First Published Sep 1, 2024, 11:27 PM IST | Last Updated Sep 1, 2024, 11:28 PM IST

ಕವಿತಾಳ(ಸೆ.01):  ಹಿಂದೆ ನನ್ನ ಅಧಿಕಾರ ಅವಧಿಯಲ್ಲಿ ಜಾರಿಯಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕರಿಗೆ ಸಾಧ್ಯವಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಜಾರಿ ನೆಪದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಗಳನ್ನು ಸ್ಥಗಿತಗೊಳಿಸಿದ್ದು, ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ದೂರಿದರು.

ಸಮೀಪದ ಯಕ್ಲಾಸಪುರ ಗ್ರಾಮದಲ್ಲಿರುವ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನನ್ನ ಅಧಿಕಾರ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕರಿಗೆ ಸಾಧ್ಯವಾಗುತ್ತಿಲ್ಲ. ನನ್ನ ಮೂರೂವರೆ ವರ್ಷದ ಅಧಿಕಾರ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದಾಗೂ ಜನರ ತೀರ್ಪಿಗೆ ತಲೆ ಬಾಗುತ್ತೇನೆ ಎಂದರು.

ಗ್ಯಾರಂಟಿಯಲ್ಲಿಯೇ ಸರ್ಕಾರ ಕಾಲಹರಣ, ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲ: ಪ್ರತಾಪಗೌಡ ಪಾಟೀಲ್

ಮುಖಂಡರಾದ ಶರಣಯ್ಯ ಸೊಪ್ಪಿಮಠ, ಬಸವಂತರಾಯ ಕುರಿ, ಚಂದ್ರಕಾಂತ್ ಪಾಟೀಲ್, ಸಂತೋಷ್ ರಾಜ್ ಗುರು, ಪ್ರಕಾಶ್ ಗೌಡ ಸುಂಕನೂರ್, ಆದನಗೌಡ, ಶಿವಪ್ಪ ಎಕ್ಲಾಸ್ ಪುರ್, ಸುಧಾಕರ್, ಸೋಮಣ್ಣ, ಅಮ್ಮಣ್ಣ ನಾಯಕ್, ವೀರನಗೌಡ, ಚನ್ನಬಸವ ಇದ್ದರು.

Latest Videos
Follow Us:
Download App:
  • android
  • ios