Asianet Suvarna News Asianet Suvarna News

ಭ್ರಷ್ಟರ ವಿರು​ದ್ಧದ ಹೋರಾಟ ನಿಲ್ಲಲ್ಲ: ಸಚಿನ್‌ ಪೈಲಟ್‌

ಯ​ವ​ಕರ ಉತ್ತಮ ಭವಿ​ಷ್ಯ​ಕ್ಕಾಗಿ ನಾನು ಹೋರಾ​ಡುವೆ. ದೇಶಕ್ಕೆ ಇಂದು ಯುವ​ಕರ ರಾಜ​ಕೀಯ ಬೇಕಿ​ದೆ’ ಎಂದರು. ಈ ಮೂಲಕ ಮುಖ್ಯ​ಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಹುದ್ದೆಯ ಮೇಲೆ ತಮಗೆ ಕಣ್ಣಿದೆ ಎಂದು ಪರೋ​ಕ್ಷ​ವಾಗಿ ನುಡಿ​ದ​ ಸಚಿನ್‌ ಪೈಲಟ್‌ 

Fight Against the Corrupt will not stop Says Congress Leader Sachin Pilot grg
Author
First Published Jun 12, 2023, 1:30 AM IST

ಜೈಪುರ(ಜೂ.12):  ರಾಜ​ಸ್ಥಾನ ಮುಖ್ಯ​ಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಕತ್ತಿ ಮಸೆ​ಯು​ತ್ತಿ​ರುವ ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಅವರು ಭಾನು​ವಾರ ಹೊಸ ಪಕ್ಷ ಸ್ಥಾಪನೆ ಮಾಡ​ಲಿ​ದ್ದಾರೆ ಎಂಬ ವರ​ದಿಗಳು ಹುಸಿ​ಯಾ​ಗಿವೆ. ತಂದೆಯ ಪುಣ್ಯ​ಸ್ಮ​ರ​ಣೆ ವೇಳೆ ಮಾತ​ನಾ​ಡಿದ ಅವರು, ‘ಭ್ರಷ್ಟಾ​ಚಾ​ರದ ವಿರುದ್ಧದ ಹೋರಾಟ ನಿಲ್ಲಲ್ಲ. ನನ್ನ ಬೇಡಿ​ಕೆ​ಗಳು ಈಡೇ​ರು​ವ​ವ​ರೆಗೆ ನಾನು ಹಿಂದಡಿ ಇಡು​ವು​ದಿಲ್ಲ ಹಾಗೂ ಸ್ವಚ್ಛ ರಾಜ​ಕೀ​ಯವೇ ನನ್ನ ಆದ್ಯತೆ’ ಎಂದಿ​ದ್ದಾ​ರೆ.

ತಂದೆ ರಾಜೇಶ್‌ ಪೈಲಟ್‌ ಅವರ ಪುಣ್ಯ​ಸ್ಮ​ರಣೆ ನಿಮಿತ್ತ ಅವರ ಪುತ್ಥ​ಳಿ​ಯೊಂದನ್ನು ಅನಾ​ವ​ರಣ ಮಾಡಿದ ಪೈಲ​ಟ್‌, ​‘​ಯ​ವ​ಕರ ಉತ್ತಮ ಭವಿ​ಷ್ಯ​ಕ್ಕಾಗಿ ನಾನು ಹೋರಾ​ಡುವೆ. ದೇಶಕ್ಕೆ ಇಂದು ಯುವ​ಕರ ರಾಜ​ಕೀಯ ಬೇಕಿ​ದೆ’ ಎಂದರು. ಈ ಮೂಲಕ ಮುಖ್ಯ​ಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಹುದ್ದೆಯ ಮೇಲೆ ತಮಗೆ ಕಣ್ಣಿದೆ ಎಂದು ಪರೋ​ಕ್ಷ​ವಾಗಿ ನುಡಿ​ದ​ರು

ಕರ್ನಾಟಕದಲ್ಲಿ ಸುಭದ್ರ ಸರ್ಕಾರ ರಚನೆ ಬೆನ್ನಲ್ಲೇ ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!

ಇದೇ ವೇಳೆ, ‘ನನ್ನ ದನಿ ದುರ್ಬಲ ಆಗಿಲ್ಲ. ನಾನು ಹಿಂದಡಿ ಇಡಲ್ಲ. ಸ್ವಚ್ಛ ರಾಜ​ಕೀ​ಯವೇ ನನ್ನ ಆದ್ಯ​ತೆ ಆಗಿದ್ದು, ಬೇಡಿಕೆ ಈಡೇ​ರು​ವ​ವ​ರ​ಗೆ ನಾನು ಸುಮ್ಮ​ನಿ​ರು​ವು​ದಿ​ಲ್ಲ’ ಎಂದರು. ಈ ಮೂಲಕ ಹಿಂದಿನ ವಸುಂಧರಾ ರಾಜೇ ನೇತೃ​ತ್ವದ ಬಿಜೆಪಿ ಸರ್ಕಾ​ರ​ದ ಭ್ರಷ್ಟಾ​ಚಾರ ಪ್ರಕ​ರ​ಣ​ಗಳ ತನಿಖೆ ನಡೆ​ಯ​ಬೇಕು ಎಂಬ ತಮ್ಮ ಹಿಂದಿನ ಬೇಡಿ​ಕೆ​ಯನ್ನು ಪರೋ​ಕ್ಷ​ವಾಗಿ ಉಲ್ಲೇಖಿ​ಸಿ​ದ​ರು.

ಇತ್ತೀ​ಚೆಗೆ, ಪೈಲಟ್‌ ತಂದೆಯ ಪುಣ್ಯ​ಸ್ಮ​ರಣೆ ದಿನ​ವಾದ ಜ.11ರಂದು ಹೊಸ ಪಕ್ಷ ಕಟ್ಟ​ಲಿ​ದ್ದಾ​ರೆ ಎಂದು ವರ​ದಿ​ಯಾ​ಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್‌ ವರಿ​ಷ್ಠರು ತಮ್ಮ ದೂತ​ರನ್ನು ಕಳಿಸಿ ಸಚಿನ್‌ ಪೈಲಟ್‌ ಹಾಗೂ ಅವರ ಬಣ​ ನಾಯ​ಕ​ರನ್ನು ಸಮಾ​ಧಾನ ಮಾಡಲು ಯತ್ನಿ​ಸಿ​ದ್ದರು. ಇದರ ಬೆನ್ನಲ್ಲೇ ಶುಕ್ರ​ವಾರ ಕಾಂಗ್ರೆಸ್‌ ಪ್ರಧಾನ ಕಾರ್ಯ​ದರ್ಶಿ ಕೆ.ಸಿ. ವೇಣು​ಗೋ​ಪಾಲ್‌ ಅವರು, ‘ಪೈ​ಲಟ್‌ ಕಾಂಗ್ರೆಸ್‌ ಬಿಡಲ್ಲ. ಹೊಸ ಪಕ್ಷ ಸ್ಥಾಪನೆ ಕೇವಲ ವದಂತಿ’ ಎಂದಿ​ದ್ದ​ರು.

Follow Us:
Download App:
  • android
  • ios