Asianet Suvarna News Asianet Suvarna News

ನೈಸ್‌ ಜತೆ​ ಡಿಕೆ ಸಹೋ​ದ​ರರ ವ್ಯವ​ಹಾ​ರ ದಾಖ​ಲೆ​ಗ​ಳಿವೆ: ಮಾಜಿ ಶಾಸಕ ಮಂಜುನಾಥ್‌ ಆರೋಪ

ಮಾಜಿ ಸಿಎಂ ಕುಮಾ​ರ​ಸ್ವಾಮಿ ಮತ್ತು ನೈಸ್‌ ಕಂಪನಿ ಜೊತೆ ಯಾವ ವ್ಯವ​ಹಾ​ರವೂ ನಡೆ​ದಿಲ್ಲ. ಇನ್ನು ನೀವು ಆ ಕಂಪನಿ ಮುಖ್ಯಸ್ಥ ಅಶೋಕ್‌ ಖೇಣಿ​ಯಿಂದ ಎನ್‌ಒಸಿ ಪಡೆದು ರಿಜಿ​ಸ್ಟರ್‌ ಮಾಡಿ​ಸಿ​ಕೊಂಡಿ​ರುವ ಹಾಗೂ ಷೇರ್‌ ಹೋಲ್ಡರ್‌ ಆಗಿ​ರುವ ದಾಖ​ಲೆ​ಗ​ಳಿವೆ ಎಂದು ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಂಸದ ಡಿ.ಕೆ.​ಸು​ರೇಶ್‌ ವಿರುದ್ಧ ಮಾಜಿ ಶಾಸಕ ಎ.ಮಂಜು​ನಾಥ್‌ ಗಂಭೀರ ಆರೋಪ ಮಾಡಿ​ದ​ರು. 

Ex MLA A Manjunath Slams On DK Brothers At Ramanagara gvd
Author
First Published Aug 19, 2023, 8:57 PM IST

ರಾಮ​ನ​ಗರ (ಆ.19): ಮಾಜಿ ಸಿಎಂ ಕುಮಾ​ರ​ಸ್ವಾಮಿ ಮತ್ತು ನೈಸ್‌ ಕಂಪನಿ ಜೊತೆ ಯಾವ ವ್ಯವ​ಹಾ​ರವೂ ನಡೆ​ದಿಲ್ಲ. ಇನ್ನು ನೀವು ಆ ಕಂಪನಿ ಮುಖ್ಯಸ್ಥ ಅಶೋಕ್‌ ಖೇಣಿ​ಯಿಂದ ಎನ್‌ಒಸಿ ಪಡೆದು ರಿಜಿ​ಸ್ಟರ್‌ ಮಾಡಿ​ಸಿ​ಕೊಂಡಿ​ರುವ ಹಾಗೂ ಷೇರ್‌ ಹೋಲ್ಡರ್‌ ಆಗಿ​ರುವ ದಾಖ​ಲೆ​ಗ​ಳಿವೆ ಎಂದು ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಂಸದ ಡಿ.ಕೆ.​ಸು​ರೇಶ್‌ ವಿರುದ್ಧ ಮಾಜಿ ಶಾಸಕ ಎ.ಮಂಜು​ನಾಥ್‌ ಗಂಭೀರ ಆರೋಪ ಮಾಡಿ​ದ​ರು. ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ನೈಸ್‌ ಕಂಪನಿಯೊ​ಂದಿಗೆ ಡಿಕೆ ಸಹೋ​ದ​ರರು ಹೇಗೆ ಸೇರಿ​ಕೊಂಡರು. ಇಬ್ಬರ ನಡುವೆ ಎಲ್ಲೆಲ್ಲಿ, ಏನೆಲ್ಲ ವ್ಯವ​ಹಾರ ನಡೆ​ದಿದೆ ಎಂಬು​ದರ ದಾಖ​ಲೆ​ಗ​ಳಿವೆ. 

ಸಹೋ​ದ​ರರು ಒಪ್ಪಿಗೆ ನೀಡಿ​ದರೆ ಅದೆ​ಲ್ಲ​ವನ್ನು ಬಹಿ​ರಂಗ ಪಡಿ​ಸು​ತ್ತೇವೆ. 1994-96ನೇ ಸಾಲಿ​ನಲ್ಲಿ ದೇವೇ​ಗೌ​ಡರು ಮುಖ್ಯ​ಮಂತ್ರಿ ಆಗಿ​ದ್ದಾಗ ನೈಸ್‌ ರಸ್ತೆ ಯೋಜ​ನೆಯ ಒಪ್ಪಂದಕ್ಕೆ ಸಹಿ ಹಾಕಿದ್ದು ಸತ್ಯ. ನಾವೇನು ಇಲ್ಲ ಅನ್ನು​ತ್ತಿಲ್ಲ. ಆದರೆ, ಒಪ್ಪಂದ​ ಸರಿ​ಯಿಲ್ಲ ಎಂದು ಹೋರಾಟ ಮಾಡಿ ಅದನ್ನು ದೇವೇ​ಗೌಡ ಮತ್ತು ಕುಮಾ​ರ​ಸ್ವಾಮಿ ಅವರೇ ಹೋರಾಟ ಮಾಡಿ ನ್ಯಾಯಾ​ಲ​ಯದ ಮಟ್ಟಕ್ಕೆ ಹೋಗು​ವಂತೆ ಮಾಡಿದರು. ಆದ​ರೀಗ ನೀವೇಕೆ ವಕಾ​ಲತ್ತು ವಹಿ​ಸು​ತ್ತಿ​ದ್ದೀರಿ. ನೀವು ಆ ಕಂಪ​ನಿ​ಯೊಂದಿಗೆ ಪಾಟ್ನರ್‌ ಶಿಪ್‌ ತೆಗೆ​ದು​ಕೊಂಡಿರು​ವುದು ಜನರು ಮತ್ತು ಸರ್ಕಾ​ರಕ್ಕೂ ಗೊತ್ತಿದೆ. ಯಾರು ಕಣ್ಣು ಮುಚ್ಚಿ​ಕೊಂಡು ಕುಳಿ​ತಿಲ್ಲ ಎಂದು ಹೇಳಿ​ದರು.

ಕೌನ್ಸೆಲಿಂಗ್‌ ಮೂಲಕ ವರ್ಗಾವಣೆಯಿಂದ ಸರ್ಕಾರದ ಇಮೇಜ್‌ ಹೆಚ್ಚಳ: ಬಸವರಾಜ ಹೊರಟ್ಟಿ

ನೈಸ್‌ ವಿಚಾ​ರ​ದಲ್ಲಿ ಡಿಕೆ ಸೋದ​ರ​ರಿಗೆ ಆಗಿ​ಲ್ಲದ ಕಾಳಜಿ ಈಗೇಕೆ ಬಂದಿದೆ. ತಮ್ಮ ಪಟಾಲಂ ಬಿಟ್ಟು ಭೂ ಪರಿ​ಹಾರ ಪಡೆ​ದು​ಕೊಳ್ಳಿ, ಇಲ್ಲ​ದಿ​ದ್ದರೆ ಕೋರ್ಟಿ​ನಲ್ಲಿ ಡಿಪಾ​ಸಿಟ್‌ ಮಾಡು​ತ್ತೇ​ವೆ. ಜಾಗ ಖಾಲಿ ಮಾಡಿ​ಸು​ತ್ತೇ​ವೆಂದು ರೈತ​ರ ಮೇಲೆ ಒತ್ತಡ ಹೇರಿ ಧಮಕಿ ಹಾಕಿ​ಸು​ತ್ತಿ​ದ್ದಾ​ರೆ ಎಂದು ಆರೋ​ಪಿ​ಸಿ​ದ​ ಅವರು, ಬಿಡ​ದಿ​ಯಲ್ಲಿ ಕೆಐ​ಎ​ಡಿ​ಬಿ​ರ​ವರು ಎಕ​ರೆಗೆ 1.30 ಕೋಟಿ ಕೊಡು​ತ್ತಾರೆ. ಕೆಂಗೇರಿ, ಕುಂಬ​ಳ​ಗೂಡ ಬಳಿ 4ರಿಂದ 6 ಕೋಟಿ ಬೆಲೆ ಬಾಳುವ ಜಮೀ​ನಿಗೆ 46ರಿಂದ 56 ಲಕ್ಷ ಭೂ ಪರಿ​ಹಾರ ಪಡೆ​ಯು​ವಂತೆ ಒತ್ತಡ ಹೇರು​ತ್ತಿ​ದ್ದಾರೆ. ಅಷ್ಟೊಂದು ಕಡಿಮೆ ಪರಿ​ಹಾರ ಪಡೆ​ಯಲು ಅಲ್ಲಿನ ರೈತರು ಏನು ಪಾಪ ಮಾಡಿ​ದ್ದಾರೆ.

ನೀವು ರೈತ​ರನ್ನು ಉದ್ಧಾರ ಮಾಡಲು ಬಂದಿ​ದ್ದೀರಿ. ನಿಮ್ಮದೆ ಸರ್ಕಾರ ಇದೆ. ರೈತ​ರಿಗೆ ಮಾರು​ಕಟ್ಟೆಬೆಲೆ ಕೊಡಿ​ಸಿ ನಿಮ್ಮ ಸಾಮ​ಥ್ಯ​ರ್‍ ಪ್ರದ​ರ್ಶಿಸಿ. ನಿಮಗು ನೈಸ್‌ಗೂ ಸಂಬಂಧ ಇಲ್ಲ​ದ್ದಿ​ದರೆ ನೀವೇಕೆ ರೈತ​ರನ್ನು ಬಲ​ವಂತ ಮಾಡು​ತ್ತಿ​ದ್ದೀರಾ ಎಂದು ಪ್ರಶ್ನಿ​ಸಿ​ದರು. ನೈಸ್‌ ರಸ್ತೆ ಯೋಜನೆ ಕಾಲ​ದಲ್ಲಿ ಎಸ್‌.ಎಂ.​ಕೃಷ್ಣರವರು ಮುಖ್ಯ​ಮಂತ್ರಿ​ಯಾ​ಗಿ​ದ್ದಾಗ ಡಿ.ಕೆ.​ಶಿ​ವ​ಕು​ಮಾರ್‌ರವರು ಸಚಿ​ವ​ರಾ​ಗಿ​ದ್ದರು. ಕುಮಾ​ರ​ಸ್ವಾ​ಮಿ​ ಸರ್ಕಾ​ರ​ದ​ಲ್ಲಿಯೂ ಸಚಿ​ವ​ರಾ​ಗಿ​ದ್ದರು. ಈ ಬಗ್ಗೆ ನೀವು ಎಂದಾ​ದರು ಸಂಸ​ತ್ತಿ​ನಲ್ಲಿ, ನಿಮ್ಮಣ್ಣ ಅಧಿ​ವೇ​ಶ​ನ​ದಲ್ಲಿ ಪ್ರಸ್ತಾಪ ಮಾಡಿ ಹೋರಾಟ ಮಾಡಿ​ದ್ದೀರಾ. 

ಈಗ ಕುಮಾ​ರ​ಸ್ವಾ​ಮಿ​ಯವರು ನೈಸ್‌ ಅಕ್ರ​ಮ​ ವರ​ದಿ​ಯನ್ನು ಪ್ರಧಾ​ನಿಯ​ವ​ರಿಗೆ ಒಪ್ಪಿ​ಸು​ತ್ತೇನೆ ಎಂದು ಹೇಳಿ​ರುವು​ದರಲ್ಲಿ ತಪ್ಪೇ​ನಿದೆ. ಕೇಂದ್ರ ಸರ್ಕಾರ ತನಿ​ಖೆ​ ಮಾಡಿ​ಸು​ವು​ದಾ​ದರೆ ಮಾಡಿ​ಸ​ಲಿ ನಿಮ​ಗೇಕೆ ಭಯ ಎಂದು ಡಿಕೆ ಸಹೋ​ದ​ರ​ರನ್ನು ಪ್ರಶ್ನೆ ಮಾಡಿ​ದ​ರು. ನೈಸ್‌ ರಸ್ತೆ​ ಹೋಗುವ ಭಾಗ​ದಲ್ಲಿ ನೀವು ಜಮೀನು ಖರೀ​ದಿ​ಸಿರುವುದು, ಕಂಪನಿ ಮುಖ್ಯ​ಸ್ಥ ಅಶೋಕ್‌ ಖೇಣಿ ಬಳಿ ಎನ್‌ಒಸಿ ಪಡೆದು ರಿಜಿ​ಸ್ಟರ್‌ ಮಾಡಿ​ಸಿ​ಕೊಂಡಿ​ರು​ವ ದಾಖ​ಲೆ​ಗ​ಳಿವೆ. ನಿಮ್ಮ ಹುಳು​ಕನ್ನು ಮುಚ್ಚಿ​ಕೊ​ಳ್ಳಲು ನಮ್ಮ ನಾಯ​ಕರ ವಿರುದ್ಧ ಮಾತ​ನಾ​ಡಿ​ದರೆ ಸಹಿ​ಸಿ​ಕೊ​ಳ್ಳಲು ಆಗಲ್ಲ ಎಂದ​ರು. 

ಮೂಲಭೂತ ಸೌಲಭ್ಯವಿಲ್ಲದೆ ಮಂಕಾದ ಮಲೆನಾಡ ಕುಗ್ರಾಮ: ಮನನೊಂದ ಗ್ರಾಮಸ್ಥರಿಂದ ಪ್ರಧಾನಿ ಮೋದಿಗೆ ಪತ್ರ

ನೈಸ್‌ ಜೊತೆ ಕುಮಾ​ರ​ಸ್ವಾ​ಮಿರವ​ರಿಗೆ ವ್ಯವ​ಹಾ​ರ ನಡೆ​ದಿದೆ ಅಂತ ಹೇಳಿ​ದ್ದೀರಿ. ಯಾವ ವ್ಯವ​ಹಾರ ನಡೆ​ದಿತ್ತು ಎಂಬು​ದನ್ನು ಬಹಿ​ರಂಗ ಪಡಿಸಿ ನೋಡೋಣ. ಈಗ ಯಾವ ವ್ಯವ​ಹಾರ ನಡೆ​ಯು​ತ್ತಿದೆ ಎಂಬು​ದರ ದಾಖಲೆ ಇದೆ. ಅದನ್ನು ಬೇಕಾ​ದರೆ ನಾನು ಬಹಿ​ರಂಗ ಪಡಿ​ಸು​ತ್ತೇವೆ ಎಂದು ಎ.ಮಂಜು​ನಾಥ್‌ ಸವಾಲು ಹಾಕಿ​ದರು. ಸುದ್ದಿ​ಗೋ​ಷ್ಠಿ​ಯಲ್ಲಿ ಜೆಡಿ​ಎಸ್‌ ಮುಖಂಡ​ರಾದ ರಾಜ​ಶೇ​ಖರ್‌, ರೈಡ್‌ ನಾಗ​ರಾಜ್‌, ನರ​ಸಿಂಹ​ಮೂರ್ತಿ, ದೊರೆ​ಸ್ವಾಮಿ, ಶಿವ​ಲಿಂಗಯ್ಯ, ವೆಂಕ​ಟೇಶ್‌ , ಸುಗ್ಗ​ನ​ಹಳ್ಳಿ ರಾಮ​ಕೃ​ಷ್ಣಯ್ಯ ಇದ್ದರು.

Follow Us:
Download App:
  • android
  • ios