Asianet Suvarna News Asianet Suvarna News

ಎಂಟಿಬಿಗೆ ಚುನಾವಣೆಗೆ ಟಿಕೆಟ್ ಕೊಡಿಸಿದ್ದು ನಾನೆ : ಡಿಕೆಶಿ

  • ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಅಸಮಾಧಾನ
  • MTB ನಾಗರಾಜ್ ಗೆ ಟಿಕೆಟ್ ಕೊಡಿಸಿದ್ದು ನಾನೇ
  • ಗೆದ್ದ ಮೇಲೆ ಪಾರ್ಟಿ ಬಿಟ್ಟು ಹೋದರು, ಅದಕ್ಕೇನು ಮಾಡಲು ಆಗುತ್ತೆ..?
DK Shivakumar Express his unhappiness on Minister MTB Nagaraj snr
Author
Bengaluru, First Published Jul 3, 2021, 12:58 PM IST

 ಬೆಂಗಳೂರು (ಜು.03): ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಅಸಮಾಧಾನ ಹೊರಹಾಕಿದ್ದಾರೆ. 

ಬೆಂಗಳೂರಿನಲ್ಲಿಂದು ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಎದೆಯಲ್ಲಿ ಇದ್ದೇನೆ ಎಂದು ತೋರಿಸಿದವರು ಇದ್ದಾರೆ. ಆದರೆ ಕೆಲವರು ದ್ರೋಹ ಬಗೆದರು ಎಂದರು. 

MTB ನಾಗರಾಜ್ ಗೆ ಟಿಕೆಟ್ ಕೊಡಿಸಿದ್ದು ನಾನೇ.  ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸುವುದಕ್ಕೆ ನಾನು ಒಬ್ಬ ಕಾರಣ. ನನ್ನಿಂದ ಗೆದ್ದ ಅಂತ ಹೇಳೋದಿಲ್ಲ ಆದರೆ ಟಿಕೆಟ್ ಕೊಡಿಸಿದ್ದು ನಾನೇ ಎಂದು ಡಿಕೆಶಿ ಹೇಳಿದರು.

ಮನೆಗೆ ಬಂದ ಸೊಸೆಯ ಹಾಗೆ ಸಿದ್ದರಾಮಯ್ಯ ಕೈಗೆ ಕೀಲಿ ಕೈ ಸಿಕ್ಕಿದೆ: ಡಿಕೆಶಿಗೆ ಇಬ್ರಾಹಿಂ ಟಾಂಗ್ ...

ಆಮೇಲೆ ಎಂಟಿಬಿ ನಾಗರಾಜ್ ಗೆದ್ದರು. ಆಗ ನನ್ನ ಎದೆಯಲ್ಲಿ ಕಾಂಗ್ರೆಸ್ ಪಕ್ಷ ಇದೆ  ಅಂತಿದ್ದರು. ಆಮೇಲೆ ಪಾರ್ಟಿ ಬಿಟ್ಟು ಹೋದರು. ಅದಕ್ಕೆ ನಾವು ಏನು ಮಾಡಲು ಸಾಧ್ಯ ಎಂದು ಎಂಟಿಬಿ ಬಿಜೆಪಿ ಸೇರ್ಪಡೆ ಬಗ್ಗೆ ಡಿಕೆಶಿ ಹೇಳಿದರು. 

ಎಂಟಿಬಿ ನಾಗರಾಜ್ ಸೇರಿ 17 ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣವಾಗಿದ್ದರು.

Follow Us:
Download App:
  • android
  • ios