ಲೋಕಸಭಾ ಚುನಾವಣೆ 2024: ಈ ಸಲ 100 ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಮಿಸ್..!
ಎನ್ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿ ಸ್ಪರ್ಧಿಸುತ್ತಿರುವ ಬಿಜೆಪಿ ಈವರೆಗೆ ಸುಮಾರು 402 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಪೈಕಿ ಅದು 100 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ. 2019ರಲ್ಲಿ ಪಕ್ಷ 437 ಸ್ಥಾನಗಳಲ್ಲಿ ಕಣಕ್ಕೆ ಇಳಿದಿತ್ತು. ಈ ಲೆಕ್ಕಾಚಾರದಲ್ಲಿ ಮೈತ್ರಿಕೂಟಗಳಿಗೆ ಇನ್ನೊಂದಿಷ್ಟು ಸೀಟುಬಿಟ್ಟು ಕೊಟ್ಟ ಹೊರತಾಗಿಯೂ ಒಂದಷ್ಟು ಸ್ಥಾನಗಳಲ್ಲಿ ಬಿಜೆಪಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ನವದೆಹಲಿ(ಮಾ.26): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಕನಿಷ್ಠ 370 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಬಿಜೆಪಿ, ಈ ಬೃಹತ್ ಗುರಿ ದಾಟಲು ಸಾಕಷ್ಟು ರಣತಂತ್ರ ರೂಪಿಸಿದೆ. ಇಂಥ ರಣತಂತ್ರಗಳ ಪೈಕಿ 100 ಹಾಲಿ ಸಂಸರಿಗೆ ಟಿಕೆಟ್ ನಿರಾಕರಣೆ ಕೂಡ ಒಂದೆಂಬುದು ಗಮನಾರ್ಹ!
ನಿಜ. ಎನ್ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿ ಸ್ಪರ್ಧಿಸುತ್ತಿರುವ ಬಿಜೆಪಿ ಈವರೆಗೆ ಸುಮಾರು 402 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಪೈಕಿ ಅದು 100 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ. 2019ರಲ್ಲಿ ಪಕ್ಷ 437 ಸ್ಥಾನಗಳಲ್ಲಿ ಕಣಕ್ಕೆ ಇಳಿದಿತ್ತು. ಈ ಲೆಕ್ಕಾಚಾರದಲ್ಲಿ ಮೈತ್ರಿಕೂಟಗಳಿಗೆ ಇನ್ನೊಂದಿಷ್ಟು ಸೀಟುಬಿಟ್ಟು ಕೊಟ್ಟ ಹೊರತಾಗಿಯೂ ಒಂದಷ್ಟು ಸ್ಥಾನಗಳಲ್ಲಿ ಬಿಜೆಪಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಹಾಗಾದಲ್ಲಿ ಇನ್ನೊಂದಿಷ್ಟು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆಯಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
Lok Sabha Election 2024: ಅಭ್ಯರ್ಥಿಗಳ ಆಯ್ಕೆ ವೇಳೆ ಬಿಜೆಪಿಗರಿಗೆ ಮೋದಿ ಕ್ಲಾಸ್..!
ನಿರಾಕರಣೆ ಏಕೆ?:
ಕೇಂದ್ರದಲ್ಲಿ ಬಿಜೆಪಿ ಈಗಾಗಲೇ 10 ವರ್ಷಗಳಿಂದ ಅಧಿಕಾರದಲ್ಲಿದೆ. ಹೀಗಾಗಿ ಒಂದಿಷ್ಟು ಆಡಳಿತ ವಿರೋಧಿ ಅಲೆ ಸಹಜ. ಇದರ ಜೊತೆಗೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹಲವು ಹಾಲಿ ಸಂಸದರು ಸ್ಥಳೀಯವಾಗಿ ವಿರೋಧ ಎದುರಿಸುತ್ತಿದ್ದಾರೆ. ಈ ಕಾರಣದಿಂದ ಕೆಲ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಇದರ ಹೊರತಾಗಿ ಹಲವು ಬಾರಿ ಸಂಸದರಾಗಿ ಆಯ್ಕೆಯಾದವರು, ಹಲವು ಬಾರಿ ಆಯ್ಕೆಯಾದರೂ ಯಾವುದೇ ಸಾಧನೆ ಮಾಡದವರು, ಚುನಾವಣೆಗೆ ಮುನ್ನ ಮತ್ತು ಚುನಾವಣೆ ವೇಳೆ ವಿವಾದಿತ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದವರು ಕೂಡಾ ಈ ಬಾರಿ ಟಿಕೆಟ್ ಕಳೆದುಕೊಂಡಿದ್ದಾರೆ. ಹೀಗೆ ನಾನಾ ಕಾರಣಕ್ಕೆ ಟಿಕೆಟ್ ಕಳೆದುಕೊಂಡ ಸಂಸದರ ಸಂಖ್ಯೆ ಇದೀಗ 100 ತಲುಪಿದೆ. ಅಂದರೆ ಹಾಲಿ ಸಂಸದರ ಪೈಕಿ ಶೇ.24ರಷ್ಟು ಜನರಿಗೆ ಟಿಕೆಟ್ ನಿರಾಕರಣೆ ಮಾಡಿದಂತಾಗಿದೆ.
ಹೊಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ಸಹಜವಾಗಿಯೇ ಅವರ ವಿರುದ್ಧ ವಿಪಕ್ಷಗಳಿಗೆ ಯಾವುದೇ ಟೀಕಾ ಪ್ರಹಾರದ ಅವಕಾಶ ನಿರಾಕರಿಸುತ್ತದೆ, ಮತದಾರರಲ್ಲೂ ಹೊಸ ಭರವಸೆ ಮೂಡಿಸಲು ಕಾರಣವಾಗುತ್ತದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಲೋಕಸಭೆ ಚುನಾವಣೆ 2024: ಕುಮಾರಸ್ವಾಮಿಗಾಗಿ ಮಂಡ್ಯ, ಚನ್ನಪಟ್ಟಣ ಜಟಾಪಟಿ..!
2019ರಲ್ಲೂ ಇದೇ ತಂತ್ರ:
2019ರ ಲೋಸಕಭಾ ಚುನಾವಣೆಯಲ್ಲಿ ಬಿಜೆಪಿ ಇದೇ ರಣತಂತ್ರ ರೂಪಿಸಿತ್ತು. ಕಳೆದ ಬಾರಿ ಬಿಜೆಪಿ 437 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿತ್ತು. ಈ ಪೈಕಿ 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ 99 ಜನರಿಗೆ ಟಿಕೆಟ್ ನಿರಾಕರಿಸಿ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿತ್ತು ಎಂಬುದು ವಿಶೇಷ. ಆಗಲೂ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆ ಪ್ರಮಾಣ ಶೇ.23ರಷ್ಟಿತ್ತು ಎಂಬುದು ವಿಶೇಷ.
ನಿರಾಕರಣೆ ಏಕೆ?
- 10 ವರ್ಷಗಳಿಂದ ಅಧಿಕಾರದಲ್ಲಿರುವುದರಿಂದ ಕೆಲವರ ವಿರುದ್ಧ ಆಡಳಿತ ವಿರೋಧಿ ಅಲೆ
- ಯಾವುದೇ ಸಾಧನೆ ಮಾಡದ ಕಾರಣ ಹಲವು ಸಂಸದರಿಗೆ ಮತ್ತೆ ಟಿಕೆಟ್ ಕೊಡದ ಬಿಜೆಪಿ
- ವಿವಾದಿತ ಹೇಳಿಕೆ ನೀಡಿ, ಪಕ್ಷಕ್ಕೆ ತೀವ್ರ ಮುಜುಗರ ತಂದವರೂ ಸ್ಪರ್ಧೆಯಿಂದ ಔಟ್
- ಹೊಸ ಅಭ್ಯರ್ಥಿ ಕಣಕ್ಕಿಳಿಸಿದರೆ ಟೀಕಿಸಲು ವಿಪಕ್ಷಕ್ಕೆ ವಿಷಯ ಇರಲ್ಲ ಎಂಬ ಕಾರಣ