ಮೋದಿ ಅವರಷ್ಟು ಕೆಲಸ ಮಾಡಲಾಗದೇ ಕರ್ನಾಟಕದಲ್ಲಿ ಸೋಲು: ಸಿ.ಟಿ. ರವಿ
ಕಳೆದ ಚುನಾವಣೆಯಲ್ಲಿ ಪಡೆದಷ್ಟೇ ಮತಗಳನ್ನು ಈ ಸಲವೂ ಬಿಜೆಪಿ ಪಡೆಯಿತು. ಆದರೆ ಕಾಂಗ್ರೆಸ್ನ ಗ್ಯಾರಂಟಿ ಭರವಸೆಗಳು ನಮಗೆ ಮುಳುವಾದವು: ಸಿ.ಟಿ. ರವಿ
ಪಣಜಿ(ಜೂ.13): ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಲಸ ಮಾಡಿದಷ್ಟು ನಮಗೆ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಲು ಆಗಲಿಲ್ಲ. ಅಲ್ಲದೆ, ಚುನಾವಣೆಗೂ ಮುನ್ನ ನಮ್ಮ ಸಾಧನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವಲ್ಲಿ ವಿಫಲರಾದೆವು. ಹೀಗಾಗಿಯೇ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಗೋವಾ ಬಿಜೆಪಿ ಉಸ್ತುವಾರಿ ಸಿ.ಟಿ. ರವಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಚುನಾವಣೆಯಲ್ಲಿ ಪಡೆದಷ್ಟೇ ಮತಗಳನ್ನು ಈ ಸಲವೂ ಬಿಜೆಪಿ ಪಡೆಯಿತು. ಆದರೆ ಕಾಂಗ್ರೆಸ್ನ ಗ್ಯಾರಂಟಿ ಭರವಸೆಗಳು ನಮಗೆ ಮುಳುವಾದವು ಅಂತ ತಿಳಿಸಿದ್ದಾರೆ.
ಕೆಲವು ನಾಯಕರ ಹೊಂದಾಣಿಕೆ ರಾಜಕೀಯದಿಂದ ನನಗೆ ಸೋಲು: ಸಿ.ಟಿ.ರವಿ
ಪ್ರತಿ ಮತಗಟ್ಟೆಯಲ್ಲಿ ನಮಗೆ 100-200ರಷ್ಟು ಕಡಿಮೆ ಮತ ಬಂದವು. ಚುನಾವಣೆಗೂ ಮುನ್ನ ನಮ್ಮ ಸಾಧನೆಗಳನ್ನು ಜನರಿಗೆ ವಿವರಿಸುವಲ್ಲಿ ವಿಫಲವಾದೆವು. ಅಲ್ಲದೆ ರಾಷ್ಟ್ರಮಟ್ಟದಲ್ಲಿ ಮೋದಿ ಮಾಡಿದಂತೆ ರಾಜ್ಯದಲ್ಲಿ ನಾವು ಕೆಲಸ ಮಾಡಲು ಆಗಲಿಲ್ಲ. ಹೀಗಾಗೇ ಸೋತೆವು ಎಂದು ಹೇಳಿದ್ದಾರೆ.