Asianet Suvarna News Asianet Suvarna News

Ramanagara: ಬಿಜೆಪಿಯೇ ವಸೂಲಿ ಪಕ್ಷ: ಸಂಸದ ಸುರೇಶ್‌ ವಾಗ್ದಾಳಿ

ರಾಜ್ಯ​ದಲ್ಲಿ 40 ಪರ್ಸೆಂಟ್‌ ಕಮಿ​ಷನ್‌ ಪಡೆದು ಬಿಜೆಪಿ ಸರ್ಕಾರ ಆಡ​ಳಿತ ನಡೆ​ಸು​ತ್ತಿ​ದೆ. ಆ ಪಕ್ಷದ ನಾಯ​ಕರಿಂದ ಕಾಂಗ್ರೆ​ಸ್ಸಿ​ಗರು ಪಾಠ ಕಲಿ​ಯ​ಬೇ​ಕಾ​ಗಿಲ್ಲ ಎಂದು ಬಿಜೆಪಿ ನಾಯ​ಕರ ವಿರುದ್ಧ ಸಂಸದ ಡಿ.ಕೆ.​ಸು​ರೇಶ್‌ ವಾಗ್ದಾಳಿ ನಡೆ​ಸಿ​ದರು.

Congress MP DK Suresh Slams Onn BJP Government At Ramanagara gvd
Author
First Published Nov 5, 2022, 9:02 PM IST

ರಾಮ​ನ​ಗರ (ನ.05): ರಾಜ್ಯ​ದಲ್ಲಿ 40 ಪರ್ಸೆಂಟ್‌ ಕಮಿ​ಷನ್‌ ಪಡೆದು ಬಿಜೆಪಿ ಸರ್ಕಾರ ಆಡ​ಳಿತ ನಡೆ​ಸು​ತ್ತಿ​ದೆ. ಆ ಪಕ್ಷದ ನಾಯ​ಕರಿಂದ ಕಾಂಗ್ರೆ​ಸ್ಸಿ​ಗರು ಪಾಠ ಕಲಿ​ಯ​ಬೇ​ಕಾ​ಗಿಲ್ಲ ಎಂದು ಬಿಜೆಪಿ ನಾಯ​ಕರ ವಿರುದ್ಧ ಸಂಸದ ಡಿ.ಕೆ.​ಸು​ರೇಶ್‌ ವಾಗ್ದಾಳಿ ನಡೆ​ಸಿ​ದರು. ತಾಲೂ​ಕಿನ ಬಿಡದಿ ಹೋಬಳಿ ಬನ್ನಿ​ಕುಪ್ಪೆ(ಬಿ) ಗ್ರಾಮ ಪಂಚಾ​ಯಿತಿ ವ್ಯಾಪ್ತಿಯ ಬೆತ್ತಂಗೆರೆ ಗ್ರಾಮ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಬಿಜೆಪಿಯೇ ವಸೂಲಿ ಪಕ್ಷ. ಆ ಪಕ್ಷದ ನಾಯ​ಕರು ಕಾಂಗ್ರೆಸ್‌ ದಿವಾ​ಳಿ​ತ​ನದ ಬಗ್ಗೆ ಮಾತ​ನಾ​ಡು​ತ್ತಿ​ರು​ವುದು ಹಾಸ್ಯಾ​ಸ್ಪದ. ಯಾರಾರ‍ಯರು ಕಾಂಗ್ರೆಸ್‌ ತತ್ವ ಸಿದ್ಧಾಂತ​ಗಳಿಗೆ ಬದ್ಧ​ರಾಗುವ ಹಾಗೂ ಪಕ್ಷಕ್ಕೆ ಶಕ್ತಿ ತುಂಬ​ಬಲ್ಲ ಯಾರೇ ನಾಯ​ಕರು, ಕಾರ್ಯ​ಕ​ರ್ತರು ಆಗಿ​ರಲಿ ಬರ​ಲೆಂದು ಆಹ್ವಾನ ನೀಡಿ​ದ್ದೇವೆ. 

ಆ ನಿಟ್ಟಿ​ನಲ್ಲಿ ಯಾರ್ಯಾರು ಇದ್ದಾರೆ ಅವ​ರನ್ನು ಪಕ್ಷ ಸ್ವಾಗ​ತಿ​ಸು​ತ್ತದೆ. ಪಕ್ಷಕ್ಕೆ ಅರ್ಜಿ ಹಾಕಿ ಎಂದಷ್ಟೇ ಹೇಳಿ​ದ್ದೇವೆ. ಆನಂತರ ರೆಹ​ಮಾನ್‌ ಖಾನ್‌ ಅಧ್ಯ​ಕ್ಷ​ತೆ​ಯ​ಲ್ಲಿ​ರುವ ಸಮಿತಿ ಯಾರಾರ‍ಯರು ಸೂಕ್ತ ಎಂಬು​ದನ್ನು ಆಯ್ಕೆ ಮಾಡ​ಲಿದೆ. ಆ ಸಮಿ​ತಿ​ಯಲ್ಲಿ ಸಿದ್ದ​ರಾ​ಮಯ್ಯ, ​ಶಿ​ವ​ಕು​ಮಾರ್‌ ಸೇರಿ​ದಂತೆ ಅನೇ​ಕರ ನಾಯ​ಕರು ಇರು​ತ್ತಾರೆ. ಪಕ್ಷ ಸಂಘ​ಟನೆ ಉದ್ದೇ​ಶವೇ ಹೊರತು ನಾಯ​ಕರ ಪ್ರತಿಷ್ಠೆ ಪ್ರಶ್ನೆ ಇಲ್ಲ. ಪಕ್ಷ ಬೆಳೆ​ಯ​ಬೇಕು, ಬಿಜೆಪಿಯ ದುರಾ​ಡ​ಳಿತ ತೊಲ​ಗಿ​ಸಲು ಎಲ್ಲರು ಒಟ್ಟಿಗೆ ಕೆಲಸ ಮಾಡು​ತ್ತಿ​ದ್ದೇವೆ ಎಂದು ಹೇಳಿ​ದ​ರು.

ಕನಕಪುರ: ಜೀ ನೆಟ್‌ ವರ್ಕ್‌ಗೆ ಕನ್ನ​ಹಾ​ಕಿದ ನಾಲ್ವರ ವಿರುದ್ಧ ಕೇಸ್‌..!

ಹಿರಿಯ ನಾಯಕ ಮಲ್ಲಿ​ಕಾ​ರ್ಜುನ ಖರ್ಗೆ​ ಅ​ವರು ಭಾರ​ತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯ​ಕ್ಷ​ರಾಗಿ ಆಯ್ಕೆ​ಯಾ​ಗಿ​ರು​ವುದು ಪಕ್ಷ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಚಾರ. ಖರ್ಗೆರವರ ನಿರಂತರ ಹೋರಾ​ಟದ ಪರಿ​ಶ್ರಮ ಅವ​ರಿಗೆ ಶಕ್ತಿ ನೀಡಿದೆ. ಖರ್ಗೆರವರು ಅಧ್ಯ​ಕ್ಷ​ರಾ​ಗಿ​ರು​ವುದು ಕರ್ನಾ​ಟಕ ಮಾತ್ರ​ವಲ್ಲ ದೇಶ​ದಲ್ಲಿ ಅಧಿ​ಕಾ​ರಕ್ಕೆ ಬರಲು ಅನು​ಕೂ​ಲ​ವಾ​ಗ​ಲಿದೆ. ಗುಜ​ರಾತ್‌ ಹಾಗೂ ಹಿಮಾ​ಚಲ ಪ್ರದೇಶ ಚುನಾ​ವಣೆ ಎದು​ರಿ​ಸಲು ಪಕ್ಷ ಸದೃ​ಢ​ವಾ​ಗಿದೆ. ಎಲ್ಲ ಸವಾ​ಲು​ಗ​ಳನ್ನು ಎದು​ರಿಸಿ ಪಕ್ಷ​ವನ್ನು ಅಧಿ​ಕಾ​ರಕ್ಕೆ ತರಲು ಪ್ರಯ​ತ್ನ ಮಾಡು​ತ್ತೇವೆ ಎಂದು ಸುರೇಶ್‌ ತಿಳಿ​ಸಿ​ದರು.

ತಾಲೂಕು ಪಂಚಾ​ಯಿತಿ ಮಾಜಿ ಅಧ್ಯಕ್ಷ ಗಾಣ​ಕಲ್‌ ನಟ​ರಾಜ್‌, ಎಪಿ​ಎಂಸಿ ಮಾಜಿ ಅಧ್ಯಕ್ಷ ರಮೇಶ್‌, ಗ್ರಾಪಂ ಅಧ್ಯಕ್ಷೆ ಸುಮತಿ ನಾಗ​ರಾಜು, ಉಪಾ​ದ್ಯಕ್ಷ ರೇವಣ ಸಿದ್ದಯ್ಯ, ಸದ​ಸ್ಯ​ರಾದ ಹೊಂಬೇ​ಗೌಡ, ಲ​ಕ್ಷ್ಮಣ್‌, ಉದಯ್‌ ಕುಮಾರ್‌, ಕೃಷ್ಣ, ನಾಗ​ರಾಜು, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ದೀಪಾ, ಎಸ್ಸಿ ಎಸ್ಟಿ ವಿಭಾಗ ಅಧ್ಯಕ್ಷ ನರ​ಸಿಂಹಯ್ಯ ಮತ್ತಿ​ತ​ರರು ಹಾಜ​ರಿ​ದ್ದ​ರು.

ನಮಗೂ ಪ್ರತ್ಯು​ತ್ತರ ಕೊಡಲು ಬರು​ತ್ತದೆ: ಮಾಜಿ ಶಾಸ​ಕ ಬಾಲ​ಕೃ​ಷ್ಣರವ​ರ ಕಾರಿನ ಮೇಲೆ ಕಲ್ಲು ತೂರಾಟ ನಡೆ​ಸಿ​ದ್ದನ್ನು ಖಂಡಿ​ಸು​ವು​ದನ್ನು ಬಿಟ್ಟು ಶಾಸ​ಕರು ಶಿಷ್ಟಾಚಾ​ರದ ಬಗ್ಗೆ ಮಾತ​ನಾ​ಡು​ತ್ತಿ​ದ್ದಾರೆ. ನಮಗೂ ಪ್ರತ್ಯು​ತ್ತರ ಕೊಡಲು ಬರು​ತ್ತದೆ ಎಂಬು​ದನ್ನು ಮರೆ​ಯ​ಬಾ​ರದು ಎಂದು ಶಾಸಕ ಎ.ಮಂಜು​ನಾಥ್‌ ವಿರುದ್ಧ ಸಂಸದ ಡಿ.ಕೆ.​ಸು​ರೇಶ್‌ ಪರೋ​ಕ್ಷ​ವಾಗಿ ವಾಗ್ದಾಳಿ ನಡೆ​ಸಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಶಾಸ​ಕರು ಮೊದಲು ಶಿಷ್ಟಾಚಾರ ಅಂದ​ರೇನು ಎಂಬು​ದನ್ನು ತಿಳಿ​ದು​ಕೊಂಡು ಹೇಳಲಿ, ಆನಂತರ ನಾನು ಮಾತ​ನಾ​ಡು​ತ್ತೇವೆ. 

ಕಲ್ಲು ತೂರಾಟ ಮಾಡಿದ್ದು ಎಷ್ಟು ಸರಿ ತಪ್ಪು ಎನ್ನು​ವುದನ್ನು ರಾಜ​ಕಾ​ರ​ಣ​ದ​ಲ್ಲಿ​ರುವ ಆ ಪಕ್ಷದ ನಾಯ​ಕರು ಯೋಚನೆ ಮಾಡ​ಬೇಕು. ನಮಗೂ ಪ್ರತ್ಯು​ತ್ತರ ಕೊಡಲು ಬರು​ತ್ತದೆ. ಅದರ ಅವ​ಶ್ಯ​ಕತೆ ಇದೆ ಅನ್ನಿ​ಸು​ತ್ತಿಲ್ಲ ಎಂದ​ರು. ಮಾಜಿ ಶಾಸಕ ಬಾಲ​ಕೃ​ಷ್ಣ​ರ​ವರ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದು ರಾಜ​ಕೀ​ಯ​ವಾದ ಕುಚ್ಯೇ​ದ್ಯ​ತನ. ಕೆಲ​ವರು ಬಾಲ​ಕೃ​ಷ್ಣ​ರ​ವರ ಏಳಿಗೆ ಸಹಿ​ಸದ ಕಿಡಿ​ಗೇ​ಡಿ​ಗಳು ಇಂತಗ ಕುಚೇ​ದ್ಯದ ಕೆಲಸ ಮಾಡು​ತ್ತಿ​ದ್ದಾರೆ. ರಾಜ​ಕಾ​ರ​ಣ​ದಲ್ಲಿ ಇದೆಲ್ಲ ಸರಿ​ಯಲ್ಲ ಎಂದು ಹೇಳಿ​ದರು.

Ramanagara: ಹಾಲಿನ ಡೇರಿ ಕಟ್ಟಡ ಉದ್ಘಾಟನೆ ವಿಚಾರವಾಗಿ ಕೈ ಹಾಗೂ ದಳ ಕಾರ್ಯಕರ್ತರ ನಡುವೆ ಮಾರಾಮಾರಿ

ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅನು​ಷ್ಠಾನ ಮಾಡಲು ರಾಮ​ನ​ಗ​ರ ಜಿಲ್ಲೆ​ಯಲ್ಲಿ ಅನೇಕ ಗ್ರಾಮ​ಗ​ಳನ್ನು ನೀತಿ ಆಯೋಗ ಆಯ್ಕೆ ಮಾಡಿದೆ. ಅದ​ರಂತೆ ಬೆತ್ತಂಗೆರೆ ಗ್ರಾಮವೂ ​ಸೇ​ರಿ​ದೆ. ಕೇಂದ್ರ ಸರ್ಕಾರ 40 ಲಕ್ಷ ರುಪಾಯಿ ಅನು​ದಾನ ನೀಡಲಿದ್ದು, ಹೆಚ್ಚು​ವ​ರಿ​ಯಾಗಿ ನರೇಗಾ ಬಳ​ಸಿ​ಕೊಂಡು ಒಟ್ಟಾರೆ 80 ಲಕ್ಷ ರುಪಾಯಿ ವೆಚ್ಚದ ಕಾಮ​ಗಾರಿ ಅನು​ಷ್ಠಾನ ಮಾಡು​ತ್ತೇವೆ.
-ಡಿ.ಕೆ.​ಸು​ರೇಶ್‌, ಸಂಸ​ದರು

Follow Us:
Download App:
  • android
  • ios