ಯೋಗೇಶ್ವರ್‌ ಹಿಂದೆಯೂ ಯಡಿಯೂರಪ್ಪ ಅವರನ್ನೂ ಬ್ಲಾಕ್‌ಮೇಲ್ ಮಾಡಿದರು. ಅದ್ಯಾವುದೋ ಸಿಡಿ ಇಟ್ಟುಕೊಂಡು ಸರ್ಕಾರವನ್ನೂ ಬೀಳಿಸಿದ್ದಾಯ್ತು. ಈಗ ಕಾಂಗ್ರೆಸ್‌ ಸರ್ಕಾರ ಕೆಡುವುತ್ತೇನೆ ಎನ್ನುತ್ತಿದ್ದಾರೆ. ಬರೀ ಸರ್ಕಾರ ಬೀಳಿಸೋ ಕೆಲಸ ಮಾತ್ರವೇ ಮಾಡೋದ? ಎಂದು ಪ್ರಶ್ನಿಸಿದ ಡಿ.ಕೆ.ಸುರೇಶ್‌ 

ಚನ್ನಪಟ್ಟಣ(ಸೆ.10): ವೈದ್ಯ ಕಾಲೇಜು ಕನಕಪುರದಲ್ಲೂ ಆಗುತ್ತೆ, ರಾಮನಗರದಲ್ಲೂ ಆಗುತ್ತೆ. ಮಾಡಲು ಕೆಲಸವಿಲ್ಲದೆ ಕೆಲವರು ಈ ಕುರಿತು ಗೊಂದಲ ಸೃಷ್ಟಿಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಅವರಿಗೆ ಸಂಸದ ಡಿ.ಕೆ.ಸುರೇಶ್‌ ತಿರುಗೇಟು ನೀಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಈ ಹಿಂದೆ ಯೋಗೇಶ್ವರ್‌ ಬ್ಲಾಕ್‌ಮೇಲ್‌ ಮಾಡಿದ್ದರು ಎಂದು ಏಕವಚನದಲ್ಲೇ ವಾಗ್ದಾಳಿ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ನಗರದಲ್ಲಿ ಮಾತನಾಡಿ, ರಾಮನಗರದ ಮೆಡಿಕಲ್‌ ಕಾಲೇಜನ್ನು ವೈಯಕ್ತಿಕ ಲಾಭಕ್ಕೆ ಸ್ಥಳಾಂತರ ಮಾಡಲಾಗಿದೆ ಎಂಬ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಆರೋಪಕ್ಕೆ ಪ್ರತಿಕ್ರಿಯಿಸಿ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಬಿಜೆಪಿ-ಜೆಡಿಎಸ್ ಒಟ್ಟಾದರೂ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಆತ ಬಿಡದಿಯಲ್ಲಿ ರಿಯಲ್‌ ಎಸ್ಟೇಟ್‌ ಹೆಸರಲ್ಲಿ, ಮೆಗಾಸಿಟಿ ಮಾಡುತ್ತೇನೆಂದು ಜನರಿಗೆ ಟೋಪಿ ಹಾಕಿದ್ದಾಯ್ತು, ಆ ದಂಧೆ ಮಾಡಬೇಕಾದ ಅನಿವಾರ್ಯತೆಯಂತೂ ನಮಗಿಲ್ಲ. ಯೋಗೇಶ್ವರ್‌ ಹಿಂದೆಯೂ ಯಡಿಯೂರಪ್ಪ ಅವರನ್ನೂ ಬ್ಲಾಕ್‌ಮೇಲ್ ಮಾಡಿದರು. ಅದ್ಯಾವುದೋ ಸಿಡಿ ಇಟ್ಟುಕೊಂಡು ಸರ್ಕಾರವನ್ನೂ ಬೀಳಿಸಿದ್ದಾಯ್ತು. ಈಗ ಕಾಂಗ್ರೆಸ್‌ ಸರ್ಕಾರ ಕೆಡುವುತ್ತೇನೆ ಎನ್ನುತ್ತಿದ್ದಾರೆ. ಬರೀ ಸರ್ಕಾರ ಬೀಳಿಸೋ ಕೆಲಸ ಮಾತ್ರವೇ ಮಾಡೋದ? ಎಂದು ಪ್ರಶ್ನಿಸಿದರು.