Asianet Suvarna News Asianet Suvarna News

ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ ಸಿದ್ದರಾಮಯ್ಯ..!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಾಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

Congress Leader Siddaramaiah slams BS Yediyurappa Over Farmers Bill rbj
Author
Bengaluru, First Published Sep 28, 2020, 3:49 PM IST

ಬೆಂಗಳೂರು, (ಸೆ.28): ಯಡಿಯೂರಪ್ಪ ಒಬ್ಬ ಡೋಂಗಿ ರೈತ ನಾಯಕ. ಹಸಿರು ಶಾಲು ಹಾಕಿಕೊಂಡು ಬಿಂಬಿಸಿದ್ದರು. ನಿಜವಾಗಲೂ ರೈತರ ಪರ ಇದ್ದಿದ್ದರೆ ಇಂತಹ ಕಾಯ್ದೆ ತರುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಿಎಸ್​ವೈ ವಿರುದ್ಧ ಗುಡುಗಿದ್ದಾರೆ.

"

ಬೆಂಗಳೂರಿನಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ದೇವರಾಜು ಅರಸು ಭೂ ಸುಧಾರಣೆ ಕಾಯ್ದೆ ತಂದಿದ್ದರು. ಉಳುವವನೇ ಭೂಮಿ ಒಡೆಯ ಮಾಡಿದ್ದರು. ಜಮೀನು ಮಾಲೀಕರು ವಿರೋಧ ಮಾಡಿದ್ದು, ಭೂ ರಹಿತರು ಭೂ ಮಾಲೀಕರಾದರು. ಆದರೆ, ಯಡಿಯೂರಪ್ಪ ರೈತರ ಜಮೀನು ಕಸಿದುಕೊಳ್ಳುತ್ತಿದ್ದಾರೆ ಕಿಡಿಕಾರಿದರು.

`ರೈತನ ಅನ್ನ ತಿನ್ನುತ್ತಿರುವ ನಾನು ರೈತನಿಗೆ ಯಾವುದೇ ಅನ್ಯಾಯ ಮಾಡಲ್ಲ'

ಇನ್ನು ರೈತರು ಜಮೀನು ಮಾರಿ, ಅದೇ ಜಮೀನಿನಲ್ಲಿ ಕೂಲಿ ಮಾಡಲು ಹೋಗುತ್ತಾರೆ. ಉಳುವವನೇ ಭೂ ಒಡೆಯ ಮಾಡಿದ್ದೆವು. ಬಿಜೆಪಿ ಉಳ್ಳವನೇ ಭೂಮಿ ಒಡೆಯ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

"

ಎಷ್ಟು ಲೂಟಿ ಹೊಡೆಯುತ್ತೀರಿ ಮಿಸ್ಟರ್ ಯಡಿಯೂರಪ್ಪ, ಕೋವಿಡ್ ಸಮಯದಲ್ಲೂ ಲೂಟಿ ಹೊಡೆದಿದ್ದ ಗಿರಾಕಿಗಳು, ಯಡಿಯೂರಪ್ಪ ಮತ್ತು ಪುತ್ರ ಲೂಟಿ ಮಾಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಕಂಪನಿ ಹಿಂದೆ ಚೆಕ್ ಮೂಲಕ ಲಂಚ ಪಡೆದಿದ್ದರು. ಆದರೆ, ಈಗ ಆರ್ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios