Asianet Suvarna News Asianet Suvarna News

'ವೀರಶೈವ-ಲಿಂಗಾಯತ ನಿಗಮ‌ ಸ್ಥಾಪನೆ ನಾನು ಸ್ವಾಗತ ಮಾಡಲ್ಲ'

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಗ್ರೀನ್​ ಸಿಗ್ನಲ್​​ ನೀಡಿದ್ದಾರೆ.  ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ...

Congress Leader Reacts On Veerashaiva Lingayat development corporation rbj
Author
Bengaluru, First Published Nov 17, 2020, 2:30 PM IST

ಬೆಂಗಳೂರು, (ನ.17): ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್​​, ನಿಗಮ‌ ಸ್ಥಾಪನೆ ನಾನು ಸ್ವಾಗತ ಮಾಡಲ್ಲ. ಇದು ರಾಜಕೀಯ ತಿರ್ಮಾನ ಅಲ್ಲ. ಕಣ್ಸೊರೆಸುವ ತಂತ್ರ ಅಲ್ಲ ಅಂದ್ರೆ ದೊಡ್ಡ ಮೊತ್ತ ಕೊಡಲಿ ಎಂದು ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದರು.

 ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದಾರೆ. ಆದ್ರೆ, ಹೀಗೆ ರಚನೆ ಮಾಡಿ 100, 200, 500 ಕೋಟಿ ಕೊಟ್ಟರೆ ಯಾವುದಕ್ಕೂ ಸಾಲೋದಿಲ್ಲ ಎಂದರು.

ಸರ್ಕಾರದ ಮುಂದೆ ಮಾಜಿ ಸಚಿವ ಎಂಬಿ ಪಾಟೀಲ್ ಇಟ್ಟ ಮಹಾರಾಷ್ಟ್ರ ಮಾದರಿ ಬೇಡಿಕೆ

ಅಲ್ಲದೇ ಕನಿಷ್ಠ 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿದರೆ ನಮ್ಮ ಸಮುದಾಯಕ್ಕ ಉಪಯೋಗವಾಗುತ್ತೆ.  ಆಗ ನಾನು ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಮಹಾರಾಷ್ಟ್ರ ಮಾದರಿಯಲ್ಲಿ ಲಿಂಗಾಯತರಿಗೆ 16% ಮೀಸಲಾತಿ ಬೇಕು. ಲಿಂಗಾಯತ ನಿಗಮ ಮಾಡಿದ್ರೆ ಪ್ರಯೋಜನ ಆಗಲ್ಲ. 1000 ಕೋಟಿ  ರೂಪಾಯಿ ಕೊಟ್ಟರೂ ಪ್ರಯೋಜನ ಆಗಲ್ಲ. 4 ರಿಂದ 5 ಸಾವಿರ ಕೋಟಿ ರೂ ಕೊಡಲಿ. ನಾನೇ ಸಿಎಂ ಯಡಿಯೂರಪ್ಪ ಅವರನ್ನು ಗೌರವಿಸುತ್ತೇನೆ ಇದು ಕಾಂಗ್ರೆಸ್ ಅಭಿಪ್ರಾಯ ಅಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios