Asianet Suvarna News Asianet Suvarna News

Lok Sabha Elections 2024: ಚಾಮರಾಜನಗರದಲ್ಲಿ ಎಸ್‌.ಬಾಲರಾಜ್‌, ಸುನೀಲ್‌ ಬೋಸ್‌ ಜಿದ್ದಾಜಿದ್ದಿ..!

ಕಾಂಗ್ರೆಸ್ ಪಕ್ಷದಿಂದ ಮಹದೇವಪ್ಪ ಅವರ ಪತ್ರ ಬಿಜೆಪಿಯಿಂದ ಕೊಳ್ಳೇಗಾಲದ ಬಾಲರಾಜು ಸ್ಪರ್ಧಾಕಣದಲ್ಲಿದ್ದಾರೆ. ಬಿಎಸ್ಪಿಯಿಂದ ಮಾಜಿ ರಾಜ್ಯಾಧ್ಯಕ್ಷ ಎಂ.ಕೃಷ್ಣ ಮೂರ್ತಿ ಸೇರಿದಂತೆ 14 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಸುನೀಲ್ ಬೋಸ್ ಮತ್ತು ಮಾಜಿ ಎರಡೂ ಪಕ್ಷಗಳು ಆಬ್ಬರದ ಪ್ರಚಾರದಲ್ಲಿ ತೊಡಗಿವೆ. ನಾಮಪತ್ರ ಸಲ್ಲಿಕೆಯಿಂದ ಹಿಡಿದು. ಕ್ಷೇತ್ರದಲ್ಲಿ ಸಮಾವೇಶಗಳನ್ನು ನಡೆಸುವ ಮೂಲಕ ಹೆಚ್ಚಿನ ಲೀಡ್ ಕೊಟ್ಟು ನನ್ನ ಮುಖ್ಯ ಮಂತ್ರಿ ಹುದ್ದೆ ಉಳಿಸಿ ಎಂಬ ಭಾವನಾತ್ಮಕ ಮಾತುಗಳ ಮೂಲಕ ಕೈ ಹಿಡಿಯುವು ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ. 
 

Competition Between S Balaraj and Sunil Bose in Chamarajanagara Lok Sabha Constituency grg
Author
First Published Apr 17, 2024, 12:13 PM IST

ದೇವರಾಜ ಕಪ್ಪಸೋಗೆ/ ಅಂಶಿ ಪ್ರಸನ್ನಕುಮಾ‌ರ್ 

ಚಾಮರಾಜನಗರ(ಏ.17):  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಸ್ವಕ್ಷೇತ್ರ ಒಳಗೊಂಡಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲ್ಲಲೇ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದೇ ವೇಳೆ, ಬಿಜೆಪಿ ಮತ್ತೊಮ್ಮೆ ಹಂಬಲದಲ್ಲಿದೆ. ಸ್ತ್ರಕ್ಷೇತ್ರವನ್ನು ಆರಳಿಸುವ

ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ ಚಾಮರಾಜನಗರ ಕ್ಷೇತ್ರ ಕಳೆದ ಬಾರಿ ವಿ. ಶ್ರೀನಿವಾಸಪ್ರಸಾದ್ ಅವರ ಸ್ಪರ್ಧೆಯಿಂದಾಗಿ ಮೊದಲ ಬಾರಿಗೆ ಕಮಲದ ತೆಕ್ಕೆಗೆ ಜಾರಿತ್ತು. ಈ ಬಾರಿ ಶತಾಯಗತಾಯ ಗೆಲ್ಲುವ ಮೂಲಕ ಕ್ಷೇತ್ರವನ್ನು ಮತ್ತೆ ತಮ್ಮ ವಶಕ್ಕೆ ಪಡೆಯಬೇಕೆಂಬ ಹಠಕ್ಕೆ ಬಿದ್ದಿರುವ ಸಿದ್ದರಾಮಯ್ಯ ಮತ್ತು ಬಳಿಕ ಕಾಂಗ್ರೆಸ್‌ನ ನೆಚ್ಚಿನ ಕ್ಷೇತ್ರವಾಗಿದ್ದ ಮಹದೇವಪ್ಪ ಜೋಡಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಶ್ರೀನಿವಾಸಪ್ರಸಾದ್ ಜೊತೆಗಿನ ವೈರತ್ವವನ್ನು ಮರೆತು ಆರೋಗ್ಯ ವಿಚಾರಿಸುವ ನೆರದಲ್ಲಿ ಕಾಂಗ್ರೆಸ್‌ ಬೆಂಬಲಿಸುವಂತೆ ಉಭಯ ನಾಯಕರು ಮನವಿ ಮಾಡಿದ್ದಾರೆ.

Breaking: ಸಂಸದ ಕರಡಿ ಸಂಗಣ್ಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಅಬ್ಬರದ ಪ್ರಚಾರ: 

ಕಾಂಗ್ರೆಸ್ ಪಕ್ಷದಿಂದ ಮಹದೇವಪ್ಪ ಅವರ ಪತ್ರ ಬಿಜೆಪಿಯಿಂದ ಕೊಳ್ಳೇಗಾಲದ ಬಾಲರಾಜು ಸ್ಪರ್ಧಾಕಣದಲ್ಲಿದ್ದಾರೆ. ಬಿಎಸ್ಪಿಯಿಂದ ಮಾಜಿ ರಾಜ್ಯಾಧ್ಯಕ್ಷ ಎಂ.ಕೃಷ್ಣ ಮೂರ್ತಿ ಸೇರಿದಂತೆ 14 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಸುನೀಲ್ ಬೋಸ್ ಮತ್ತು ಮಾಜಿ ಎರಡೂ ಪಕ್ಷಗಳು ಆಬ್ಬರದ ಪ್ರಚಾರದಲ್ಲಿ ತೊಡಗಿವೆ. ನಾಮಪತ್ರ ಸಲ್ಲಿಕೆಯಿಂದ ಹಿಡಿದು. ಕ್ಷೇತ್ರದಲ್ಲಿ ಸಮಾವೇಶಗಳನ್ನು ನಡೆಸುವ ಮೂಲಕ ಹೆಚ್ಚಿನ ಲೀಡ್ ಕೊಟ್ಟು ನನ್ನ ಮುಖ್ಯ ಮಂತ್ರಿ ಹುದ್ದೆ ಉಳಿಸಿ ಎಂಬ ಭಾವನಾತ್ಮಕ ಮಾತುಗಳ ಮೂಲಕ ಕೈ ಹಿಡಿಯುವು ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ. 

ಇನ್ನು, 2004ರಲ್ಲಿ ಪಕ್ಷೇತರರಾಗಿ ಕೊಳ್ಳೇಗಾಲದಿಂದ ವಿಧಾನಸಭೆ ಪ್ರವೇಶಿಸಿದ್ದ ಎಸ್. ಬಾಲರಾಜು, ಕಳೆದ 20 ವರ್ಷಗಳಿಂದ ಅಧಿಕಾರವಿಲ್ಲದೆ ಜನಸೇವೆ ಮಾಡುತ್ತಾ ಬಂದಿದ್ದೇನೆ. ನನಗೊಂದು ಅವಕಾಶ ಕೊಡಿ ಎಂದು ಮತದಾರರ ಮನಗೆಲ್ಲಲು ಸರ್ಕಸ್ ಮಾಡುತ್ತಿದ್ದಾರೆ. ಈ ಮಧ್ಯೆ, ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಕುಟುಂಬದವರು ನಲ್ಲೂ ಗುರುತಿಸಿಕೊಂಡಿದ್ದು, ಪ್ರಸಾದ್ ಅವರು ಸ್ಪಷ್ಟವಾಗಿ ಯಾರನ್ನು ಬೆಂಬಲಿಸುತ್ತಾರೆ ಎಂಬ ಸಂದೇಶ ಹೊರಬಾರದಿರುವುದು ಬಿಜೆಪಿಗೆ ತಲೆ ನೋವು ತರಿಸಿದೆ.

ಕ್ಷೇತ್ರ ಪರಿಚಯ: 

ಕಾಂಗ್ರೆಸ್ 10 ಬಾರಿ, ಜನತಾದಳ 2 ಬಾರಿ, ಜೆಡಿಯು ಮತ್ತು ಜೆಡಿಎಸ್‌ ಹಾಗೂ ಬಿಜೆಪಿ ತಲಾ ಒಂದು ಬಾರಿ ಗೆದ್ದಿದ್ದರೂ, ಕಳೆದ ಬಾರಿ ಶ್ರೀನಿವಾಸ ಪ್ರಸಾದ್ ಕಮಲ ಆರಳಿಸಿರುವುದು ಕಾಂಗ್ರೆಸ್‌ಗೆ ನಿದ್ದೆ ಗೆಡಿಸಿದೆ. ಪ್ರಸ್ತುತ ಲೋಕಸಭಾ ಕ್ಷೇತ್ರ ಶಾಸಕರಿದ್ದಾರೆ.

ಬಾಲರಾಜು ಬಿಜೆಪಿ

2004ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿ ದ್ದರು. ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಬಾಲರಾಜು, 199100, 19970 ರಾಜನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 1999ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಸ್ಪರ್ಧಿಸಿ 3421 ಮತಗಳಿಂದ ಸೋಲು ಕಂಡರು. ಅದೇ ವರ್ಷ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ-ಜೆಡಿಯು ಹೊಂದಾಣಿಕೆ ನಡುವೆ ಟಿಕೆಟ್ ಕೈ ತಪ್ಪಿದ್ದರಿಂದ 2004ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಮೊದಲ ಬಾರಿಗೆ ಶಾಸಕರಾದರು. 2008, 2009, 2013ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ನಂತರ ಕಾಂಗ್ರೆಸ್ ಸೇರಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2023ರ ಚುನಾವಣೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಸುನೀಲ್ ಬೋಸ್ ಕಾಂಗ್ರೆಸ್

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ 2008ರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು, ಟಿ.ನರಸೀಪುರ ಕ್ಷೇತ್ರದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಚಿ.ನರಸೀಪುರ ತಾಲೂಕಿನ ಕೆಡಿಪಿ ಸದಸ್ಯರಾಗಿದ್ದು, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2017ರ 강한 판, 2018 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಇದೀಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

Lok Sabha Election 2024: ಮೋದಿ ಮೂರನೇ ಬಾರಿ ಗೆದ್ರೆ ಈ ಎಲ್ಲಾ ಸ್ಟಾಕ್‌ಗಳದ್ದು ಮಿಂಚಿನ ಓಟ ಅಂತಾರೆ ತಜ್ಞರು!

ಜಾತಿ ಮತ ಲೆಕ್ಕಾಚಾರ

ಪ.ಜಾತಿ 5 ಲಕ್ಷ, ಲಿಂಗಾಯತರು 3.80 ಲಕ್ಷ, ನಾಯಕರು 2.50 ಲಕ್ಷ, ಉಪ್ಪಾರರು 2 ಲಕ್ಷ, ಒಕ್ಕಲಿಗರು 1.50 ಲಕ್ಷ, ಕುರುಬರು 1.20 ಲಕ್ಷ, ಮುಸ್ಲಿಮರು 80 ಸಾವಿರ, ಇತರರು 2 ಲಕ್ಷದಷ್ಟಿದ್ದಾರೆ. ಅಹಿಂದ ಮತಗಳೇ ಇಲ್ಲಿ ಪ್ರಮುಖ.

ಕ್ಷೇತ್ರದ ಮತದಾರರ ವಿವರ

ಪುರುಷರು 8,78,702
ಮಹಿಳೆಯರು 8,99,501
ಇತರರು 107
ಒಟ್ಟು 17,78, 310 

2019 ರ ಫಲಿತಾಂಶ: 

ವಿ. ಶ್ರೀನಿವಾಸಪ್ರಸಾದ್‌(ಬಿಜೆಪಿ) ಗೆಲುವು 5,68,537 
ಆರ್‌. ದ್ರುವನಾರಾಯಣ(ಕಾಂಗ್ರೆಸ್‌) ಸೋಲು, 5,66, 720 

Follow Us:
Download App:
  • android
  • ios