Asianet Suvarna News Asianet Suvarna News

ಜಾರಕಿಹೊಳಿ‌- ಶಶಿಕಲಾ ಜೊಲ್ಲೆ ಮಧ್ಯೆ ಮುಸುಕಿನ ಗುದ್ದಾಟ..?

ಜನಸೇವಕ ಸಮಾವೇಶದ ಉಸ್ತುವಾರಿ ರಮೇಶ್ ಜಾರಕಿಹೊಳಿ‌ ವಹಿಸಿದ್ದಕ್ಕೆ ಶಶಿಕಲಾ ಜೊಲ್ಲೆಗೆ ಮುನಿಸು| ಅಮಿತ್ ಶಾ ಸ್ವಾಗತಕ್ಕೆ ಬಾರದ ಜೊಲ್ಲೆ ದಂಪತಿ| ಅಮಿತ್ ಶಾ ಬರುತ್ತಿದ್ದರೂ ಬಾಗಲಕೋಟೆಗೆ ತೆರಳಿದ ಸಚಿವೆ ಶಶಿಕಲಾ ಜೊಲ್ಲೆ| 

Coldwar between Ramesh Jarkiholi and Shashikala Jolle grg
Author
Bengaluru, First Published Jan 17, 2021, 1:44 PM IST

ಬೆಳಗಾವಿ(ಜ.17):  ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಮಧ್ಯೆ ಮುಸುಕಿನ ಗುದ್ದಾಟ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.  ಇಂದು ಬೆಳಗಾವಿಗೆ ಅಮಿತ್ ಶಾ ಬರುತ್ತಿದ್ದರೂ ಸಚಿವೆ ಶಶಿಕಲಾ ಜೊಲ್ಲೆ ಅವರು ಬಾಗಲಕೋಟೆಗೆ ತೆರಳಿದ್ದಾರೆ. 

ಜನಸೇವಕ ಸಮಾವೇಶದ ಉಸ್ತುವಾರಿಯನ್ನ ರಮೇಶ್ ಜಾರಕಿಹೊಳಿ‌ ವಹಿಸಿದ್ದಕ್ಕೆ ಶಶಿಕಲಾ ಜೊಲ್ಲೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಅಮಿತ್ ಶಾ ಸ್ವಾಗತಕ್ಕೆ ಜೊಲ್ಲೆ ದಂಪತಿ ಬೆಳಗಾವಿಗೆ ಬರಲಿಲ್ವಾ ಎಂಬ ಪ್ರಶ್ನೆಗಳು ಕಾಡುತ್ತಿವೆ.

ಅಮಿತ್ ಶಾ ಆಗಮನಕ್ಕೂ ಮುನ್ನವೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ..!

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಸ್ವಾಗತಕ್ಕೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಬ್ ಜೊಲ್ಲೆ ಬಂದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಸಮಾವೇಶ ನಡೆಯುತ್ತಿದ್ದರೂ ಸಚಿವೆ ಶಶಿಕಲಾ ಜೊಲ್ಲೆ ಒಮ್ಮೆಯೂ ಭೇಟಿ ನೀಡಿಲ್ಲ, ಕಾರ್ಯಕ್ರಮ ನಡೆಯುವ ಸ್ಥಳದ ಪರಿಶೀಲನೆಗೂ ಭೇಟಿ ನೀಡಿರಲಿಲ್ಲ ಎಂದು ತಿಳಿದು ಬಂದಿದೆ. 
 

Follow Us:
Download App:
  • android
  • ios