Asianet Suvarna News Asianet Suvarna News

ಬಿಜೆಪಿ-ಕಾಂಗ್ರೆಸ್ ರೆಸಾರ್ಟ್ ರಾಜಕಾರಣ: ಏನಂದರು ಕುಮಾರಣ್ಣ?

ರೆಸಾರ್ಟ್ ರಾಜಕಾರಣಕ್ಕೆ ಬೇಸರ ವ್ಯಕ್ತಪಡಿಸಿದ ಸಿಎಂ| ಬರಗಾಲ ಇರುವಾಗ ರೆಸಾರ್ಟ್ ಗೆ ಹೋಗುವುದು ಸರಿಯಲ್ಲ ಎಂದ ಕುಮಾರಸ್ವಾಮಿ| ‘ಬಿಜೆಪಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ’| ‘ಜೆಡಿಎಸ್ ಶಾಸಕರು ರೆಸಾರ್ಟ್ ಗೆ ಹೋಗುವ ಅವಶ್ಯಕತೆ ಇಲ್ಲ’| ಪ.ಬಂಗಾಳ ಸಮಾವೇಶ ಯಶಸ್ವಿ ಎಂದ ಕುಮರಸ್ವಾಮಿ

CM HD Kumarswamy First Reaction on Resort Politics
Author
Bengaluru, First Published Jan 19, 2019, 7:57 PM IST

ಮೈಸೂರು(ಜ.19): ಪ.ಬಂಗಾಳದಲ್ಲಿ ಇಂದು ನಡೆದ ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಭಾಗವಹಿಸಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ಮರಳಿದ್ದಾರೆ.

ಇವತ್ತಿನ ಪಶ್ಚಿಮ ಬಂಗಾಳದ ಸಮಾವೇಶ ದೇಶದಲ್ಲಿಯೇ ಇತ್ತಿಚ್ಚಿನ ದಿನಗಳಲ್ಲಿ ನಡೆದ ಬೃಹತ್ ಸಮಾವೇಶ ಎಂದು ಹೇಳಿರುವ ಸಿಎಂ, ತಾವು ಈ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ ಪರ ಅಲೆ ಕಂಡಿದ್ದಾಗಿ ಹೇಳಿದರು.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ತಮಗೆ ಯಾವುದೇ ಪರ್ಯಾಯ ನಾಯಕರೇ ಇಲ್ಲ ಅನ್ನೋ ಅಹಂಕಾರ ಭಾವನೆಯಲ್ಲಿದ್ದಾರೆ. ಆದರೆ ವಿಪಕ್ಷಗಳ ಇಂದಿನ ಸಮಾವೇಶ ಕಂಡು ಅವರ ನಿದ್ದೆ ಹಾರಿ ಹೋಗಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

"

ಕರ್ನಾಟಕದ ಮೈತ್ರಿ ಸರ್ಕಾರದ ಕಾರ್ಯಕ್ರಮದ ಬಳಿಕ ಇವತ್ತಿ ಸಭೆ ಅತ್ಯಂತ ಅದ್ಭುತವಾದ ಸಮಾವೇಶ ಎಂದು ಬಣ್ಣಿಸಿದ ಕುಮಾರಸ್ವಾಮಿ, ಪ್ರಧಾನಿಗಳು ತಮಗೆ ಯಾರು ಸರಿ ಸಾಟಿ ಇಲ್ಲ ಅನ್ನೋ ಭಾವನೆ ತ್ಯಜಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಮುಂದಿನ ಲೊಕಸಭೆ ಚುನಾವಣೆಯನ್ನು ಕಾಂಗ್ರೆಸ್-ಜೆಡಿಸ್ ಒಟ್ಟಾಗಿ ಎದುರಿಸಲು ಈಗಾಗಲೇ ನಿರ್ಧಾರ ಮಾಡಲಾಗಿದ್ದು, ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಬಿಜೆಪಿಯೇತರ ಪಕ್ಷಗಳು ಒಂದಾಗುತ್ತಿವೆ. ಬಿಜೆಪಿಗೆ ಮುಂದಿನ ಲೋಕಸಭೆ ಚುನಾವಣೆ ಅಷ್ಟು ಸುಲಭವಾಗಿರುವುದಿಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಇನ್ನು ಬಿಜೆಪಿ- ಕಾಂಗ್ರೆಸ್  ಶಾಸಕರ ರೆಸಾರ್ಟ್ ರಾಜಕಾರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಶಾಸಕರು ರೆಸಾರ್ಟ್ ನಲ್ಲಿರುವುದು ಸರಿಯಲ್ಲ ಎಂದರು.

ಬಿಜೆಪಿಯವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ನಾಯಕರು ರೆಸಾರ್ಟ್ ಗೆ ಹೋಗುವ ತೀರ್ಮಾನ ಮಾಡಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಸಿಎಂ ಮನವಿ ಮಾಡಿದರು.

"

ಬಿಜೆಪಿಯವರು ರಾಜ್ಯದಲ್ಲಿ ಅತಂತ್ರ ಸೃಷ್ಟಿಸಲು ಮೊದಲಿನಿಂದಲೂ ಪ್ರಯತ್ನ ಮಾಡುತ್ತಿದ್ದಾರೆ. ನಾವು ಯಾವುದೇ ಶಾಸಕರನ್ನ ಹೈಜಾಕ್ ಮಾಡಲು ಹೋಗಿಲ್ಲ. ಜೆಡಿಎಸ್ ಶಾಸಕರನ್ನು ರೆಸಾರ್ಟ್‌ ಗೆ ಕರೆದುಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Follow Us:
Download App:
  • android
  • ios