Asianet Suvarna News Asianet Suvarna News

ಯಡಿಯೂರಪ್ಪ ಕೊಟ್ರು ಬಂಪರ್: ನಿಗಮ ಮಂಡಳಿ ಅಧ್ಯಕ್ಷರಿಗೆ ಜಾಕ್​ಪಾಟ್

ಅಚ್ಚರಿ ಎಂಬಂತೆ ನಿಗಮ ಮಂಡಳಿ ಅಧ್ಯಕ್ಷರಿಗೆ ಮುಂದಿನ ಆದೇಶದ ವರೆಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

bs yediyurappa orders cabinet grade to corporation boards Presidents rbj
Author
Bengaluru, First Published Dec 16, 2020, 10:37 PM IST

ಬೆಂಗಳೂರು, (ಡಿ.16): ಇತ್ತೀಚೆಗಷ್ಟೇ ನೇಮಕಗೊಂಡಿದ್ದ ನಿಗಮ ಮಂಡಳಿ ಅಧ್ಯಕ್ಷರಿಗೆ ಸಿಎಂ ಬಿಎಸ್​​ವೈ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿದ್ದಾರೆ. 

ಕೆಲವು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಖಾಲಿ ಇರುವ ಎಲ್ಲಾ ನಿಗಮಗಳಿಗೆ ಅಧ್ಯಕ್ಷರನ್ನ ನೇಮಿಸಿತ್ತು. ಇದೀಗ ಅವರಲ್ಲಿ 9 ಮಂದಿಗೆ ಸಂಪುಟ ದರ್ಜೆಯ ಸ್ಥಾನಮಾನ ಹಾಗೂ ನಾಲ್ವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿದೆ.

ಬಿಜೆಪಿ ಸರ್ಕಾರಕ್ಕೆ ವರ್ಷ: ಶಾಸಕರಿಗೆ ಭರ್ಜರಿ ಗಿಫ್ಟ್‌ ನೀಡಿದ ಸಿಎಂ ಯಡಿಯೂರಪ್ಪ

ಯಾರಿಗೆಲ್ಲಾ ಸಂಪುಟ ದರ್ಜೆಯ ಸ್ಥಾನಮಾನ..?
* ಎಂ.ಚಂದ್ರಪ್ಪ - ಕೆಎಸ್​​​ಆರ್​​ಟಿಸಿ, ಬೆಂಗಳೂರು
* ಐಹೊಳೆ ದುರ್ಯೋಧನ ಮಹಾಲಿಂಗಪ್ಪ - ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಬೆಂಗಳೂರು
* ನೆಹರೂ ಚನ್ನಬಸಪ್ಪ ಓಲೇಕಾರ್ - ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ & ಅನುಸೂಚಿತ ಬುಡಕಟ್ಟುಗಳ ಆಯೋಗ, ಬೆಂಗಳೂರು
* ನರಸಿಂಹ ನಾಯಕ್ (ರಾಜೂಗೌಡ) -ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ, ಬೆಂಗಳೂರು
* ಕಳಕಪ್ಪ ಬಂಡಿ -ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (KSSIDC), ಬೆಂಗಳೂರು
* ಶಂಕರ ಪಾಟೀಲ್ ಮುನೇನಕೊಪ್ಪ -ಕರ್ನಾಟಕ ಮೂಲಭೂತ ಸೌಕರ್ಯ ಅಭಿವೃದ್ಧಿ & ಹಣಕಾಸು ಸಂಸ್ಥೆ (KUIDFC), ಬೆಂಗಳೂರು
* ಮಾಡಾಳು ವಿರೂಪಾಕ್ಷಪ್ಪ - ಕರ್ನಾಟಕ ಸಾಬೂನು & ಮಾರ್ಜಕ ನಿಯಮಿತ, ಬೆಂಗಳೂರು
* ಸಿದ್ದು ಸವದಿ -ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ, ಹುಬ್ಬಳ್ಳಿ

ರಾಜ್ಯ ಸಚಿವ ದರ್ಜೆ
* ರಾಜಕುಮಾರ್ ಪಾಟೀಲ್ ತೇಲ್ಕೂರ್ -ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ
* ಸಿ.ಎಸ್. ನಿರಂಜನ್ ಕುಮಾರ್ -ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ, ಬೆಂಗಳೂರು
* ಸಿ.ಎಸ್. ಜಯರಾಮ್ -ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು
* ಎನ್. ಲಿಂಗಣ್ಣ -ಡಾ.ಬಾಬು ಜಗಜೀವನ್​ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು (ಲಿಡ್ಕರ್).

Follow Us:
Download App:
  • android
  • ios