Asianet Suvarna News Asianet Suvarna News

ಬಿಜೆಪಿಗ ಮುನಿರಾಜು ಗೌಡ ನಿಷೇಧ ಅವಧಿ ಇಳಿಸಿದ ಆಯೋಗ

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಬಿಜೆಪಿಯ ಮುನಿರಾಜು ಗೌಡ ನಿಷೇಧದ ಅವಧಿಯನ್ನು ಚುನಾವಣಾ ಆಯೋಗ ಇಳಿಸಿದ್ದು, ಇದರಿಂದ ರಿಲೀಫ್ ದೊರಕಿದಂತಾಗಿದೆ. 

BJP Leader Muniraju Gowda Get Relief From Election Commission
Author
Bengaluru, First Published Oct 23, 2019, 9:05 AM IST

ನವದೆಹಲಿ [ಅ.23]: 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಬಿಜೆಪಿಯ ಮುನಿರಾಜು ಗೌಡ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಹೇರಿದ್ದ 3 ವರ್ಷಗಳ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡಿತಗೊಳಿಸಲಾಗಿದೆ.

2014ರ ಲೋಕಸಭಾ ಚುನಾವಣೆಯ ವೆಚ್ಚದ ವಿವರವನ್ನು ಸೂಕ್ತ ರೀತಿಯಲ್ಲಿ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಚುನಾವಣಾ ಆಯೋಗವು ಸಂಸತ್ತಿನ ಉಭಯ ಸದನ ಅಥವಾ ರಾಜ್ಯ ವಿಧಾನಸಭೆ ಅಥವಾ ವಿಧಾನ ಪರಿಷತ್‌ಗೆ 3 ವರ್ಷಗಳ ಕಾಲ ಸ್ಪರ್ಧಿಸಲು ನಿಷೇಧ ಹೇರಿ 2019ರ ಜ.9ರಂದು ಆದೇಶ ಹೊರಡಿಸಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರ ವಿರುದ್ಧ ಮುನಿರಾಜು ಗೌಡ ಅವರು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅಲ್ಲದೆ ಈ ಕುರಿತು 2019ರ ಅ.9ರಂದು ಖುದ್ದು ಹಾಜರಾಗಿ, ವಿವರ ಸಲ್ಲಿಕೆ ಕುರಿತು ಮಾಹಿತಿ ನೀಡಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಚುನಾವಣಾ ಆಯೋಗವು 2019ರ ಅ.17ರಂದು ಆದೇಶವೊಂದನ್ನು ಹೊರಡಿಸಿದ್ದು, ಅದರಲ್ಲಿ ಆದೇಶ ಪ್ರಕಟಗೊಂಡ ದಿನಕ್ಕೆ ನಿಷೇಧದ ಅವಧಿ ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಿಸಿದೆ. ಹೀಗಾಗಿ 3 ವರ್ಷದ ನಿಷೇಧದ ಅವಧಿ 9 ತಿಂಗಳು 9 ದಿನಕ್ಕೆ ಮುಕ್ತಾಯಗೊಂಡಂತೆ ಆಗಿದೆ.

Follow Us:
Download App:
  • android
  • ios