ನಾನು ನೂತನ ಸಚಿವ ಸಂಪುಟದಲ್ಲಿ ಇರುವುದಿಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌  ನಾನು ರಾಜ್ಯಪಾಲ ಆಗುತ್ತೇನೆ ಎಂಬುದೆಲ್ಲ ಸುಮ್ಮನೆ ಹರಿದಾಡುವ ಮಾತುಗಳು

ಹುಬ್ಬಳ್ಳಿ (ಜು.03): ನಾನು ನೂತನ ಸಚಿವ ಸಂಪುಟದಲ್ಲಿ ಇರುವುದಿಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ನಾನು ರಾಜ್ಯಪಾಲ ಆಗುತ್ತೇನೆ ಎಂಬುದೆಲ್ಲ ಸುಮ್ಮನೆ ಹರಿದಾಡುವ ಮಾತುಗಳು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ.

Add Asianetnews Kannada as a Preferred SourcegooglePreferred

 ಬೊಮ್ಮಾಯಿ ಸರ್ಕಾರದಲ್ಲಿ ನಮ್ಮ ಜಿಲ್ಲೆಯ ನಾಲ್ವರು ಶಾಸಕರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಕೊಡಲೇಬೇಕೆಂದು ಕೇಳಿದ್ದೇನೆ. ಸಿನಿಯಾರಿಟಿ ಆಧರಿಸಿ ಸ್ಥಾನ ಸಿಗುತ್ತದೆ ಎಂದು ಹೇಳಿದ್ದಾರೆ.

ಸ್ವಾಭಿಮಾನ, ಗೌರವದಿಂದ ಸಂಪುಟ ಸೇರಲ್ಲ: ಶೆಟ್ಟರ್‌

 ನಾನು ಅಧಿಕಾರದಲ್ಲಿ ಇದ್ದುದು ಅಲ್ಪ ಸಮಯ ಮಾತ್ರ. ಮುಖ್ಯಮಂತ್ರಿಯಾಗಿ ಇದ್ದದ್ದು 10 ತಿಂಗಳು, ಕೈಗಾರಿಕಾ ಸಚಿವನಾಗಿ ಕೆಲಸ ಮಾಡಿದ್ದು ಕೆಲವೇ ತಿಂಗಳು ಮಾತ್ರ. ಅಷ್ಟರಲ್ಲೇ ಸಾಕಷ್ಟುಕೆಲಸ ಮಾಡಿದ್ದೇನೆ. 

ಒಂದು ವೇಳೆ ಯಾವುದಾದರೂ ಅಧಿಕಾರದಲ್ಲಿ ಪೂರ್ತಿ ಐದು ವರ್ಷ ಇದ್ದಿದ್ದರೆ ಪರಿಪೂರ್ಣ ಬದಲಾವಣೆ ಮಾಡಲು ಸಾಧ್ಯವಾಗುತ್ತಿತ್ತು ಎಂದಿದ್ದಾರೆ. ಅಧಿಕಾರ ಇದ್ದಾಗ ಕೆಲಸ ಮಾಡಿ ತೋರಿಸಿದ್ದೇನೆ. ಅಧಿಕಾರ ಇಲ್ಲದಿದ್ದರೂ ನಾನು ಕೆಲಸ ಮಾಡಿಸುತ್ತೇನೆ. ಮುಂದೆ ಯಾರೇ ಸಚಿವರಾದರೂ ಅವರಿಂದ ಕೆಲಸ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ.