Asianet Suvarna News Asianet Suvarna News

ಬೀದರ್‌ ಜಿಲ್ಲೆಗೆ 2 ಸಚಿವ ಸ್ಥಾನ​ಗಳ ಸಾಧ್ಯ​ತೆ: ಈಶ್ವರ ಖಂಡ್ರೆ, ರಹೀ​ಮ್‌​ಖಾ​ನ್‌ಗೆ ಮಂತ್ರಿ​ಗಿರಿ?

ಮತ್ತೊಮ್ಮೆ ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಸ್ಥಳೀಯ ಶಾಸ​ಕ​ರಿಗೆ ಸಚಿವ ಸ್ಥಾನದ ಸಾಧ್ಯ​ತೆ​ಗಳು ದಟ್ಟ​ವಾ​ಗಿದ್ದು, ಪ್ರಬಲ ಲಿಂಗಾ​ಯತ ಸಮು​ದಾ​ಯದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಅಲ್ಪ​ಸಂಖ್ಯಾತ ಸಮು​ದಾ​ಯದ ರಹೀ​ಮ್‌​ಖಾನ್‌ ಇಬ್ಬರೂ ಸಿದ್ದ​ರಾ​ಮಯ್ಯ ಸರ್ಕಾ​ರದ ಸಚಿವ ಸಂಪುಟ ಸೇರುವ ಸಾಧ್ಯ​ತೆ​ಗಳು ದಟ್ಟ​ವಾ​ಗಿ​ವೆ.

Bidar District 2 Ministerial Positions Possible Eshwar Khandre and Rahim Khan Ministerial gvd
Author
First Published May 20, 2023, 10:45 PM IST

ಬೀದ​ರ್‌ (ಮೇ.20): ಮತ್ತೊಮ್ಮೆ ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಸ್ಥಳೀಯ ಶಾಸ​ಕ​ರಿಗೆ ಸಚಿವ ಸ್ಥಾನದ ಸಾಧ್ಯ​ತೆ​ಗಳು ದಟ್ಟ​ವಾ​ಗಿದ್ದು, ಪ್ರಬಲ ಲಿಂಗಾ​ಯತ ಸಮು​ದಾ​ಯದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಅಲ್ಪ​ಸಂಖ್ಯಾತ ಸಮು​ದಾ​ಯದ ರಹೀ​ಮ್‌​ಖಾನ್‌ ಇಬ್ಬರೂ ಸಿದ್ದ​ರಾ​ಮಯ್ಯ ಸರ್ಕಾ​ರದ ಸಚಿವ ಸಂಪುಟ ಸೇರುವ ಸಾಧ್ಯ​ತೆ​ಗಳು ದಟ್ಟ​ವಾ​ಗಿ​ವೆ. ಕಳೆದ 2016ರಿಂದ 2018ರ ಸಿದ್ದ​ರಾ​ಮಯ್ಯ ಸರ್ಕಾ​ರದ ಅವ​ಧಿ​ಯ​ಲ್ಲಿ ಪೌರಾ​ಡ​ಳಿತ ಸಚಿ​ವ​ರಾ​ಗಿದ್ದ ಈಶ್ವರ ಖಂಡ್ರೆ ಹಾಗೂ 2018ರಿಂದ 2019ರ ವರೆಗೆ ರಾಜ್ಯದ ಯುವ​ಜನ ಸೇವಾ ಹಾಗೂ ಕ್ರೀಡಾ ಇಲಾ​ಖೆಯ ಸಚಿ​ವ​ರಾ​ಗಿದ್ದ ರಹೀಮ್‌ ಖಾನ್‌ ಇದೀಗ ಮತ್ತೊಂದು ಅವ​ಧಿಯ ಸಚಿವ ಸ್ಥಾನ​ ಸಿಕ್ಕಲ್ಲಿ ಅಚ್ಚ​ರಿ​ಯಿ​ಲ್ಲ.

ಸಿದ್ದ​ರಾ​ಮಯ್ಯ ಸರ್ಕಾ​ರದಲ್ಲಿ ಸಚಿವ ಸ್ಥಾನ​ಕ್ಕಾಗಿ ಭಾರಿ ಪೈಪೋಟಿ ನಡೆ​ದಿ​ದೆ. ಅಲ್ಲದೆ ಲಿಂಗಾ​ಯತ ಹಾಗೂ ಮುಸ್ಲಿಂ ಸಮು​ದಾಯ ಶಾಸ​ಕರಿ​ಗೇನೂ ಕಮ್ಮಿ ಇಲ್ಲ. ಅದಾಗ್ಯೂ ಭಾಲ್ಕಿ ಕ್ಷೇತ್ರಕ್ಕೆ 4 ಬಾರಿ ಶಾಸ​ಕ​ರಾಗಿ, ಸಿದ್ದ​ರಾ​ಮಯ್ಯ ಆಡ​ಳಿ​ತ​ದಲ್ಲಿ ಪೌರಾ​ಡ​ಳಿತ ಹಾಗೂ ಜಿಲ್ಲಾ ಉಸ್ತು​ವಾ​ರಿ ಸಚಿ​ವ​ರಾ​ಗಿಯೂ ಸೇವೆ ಸಲ್ಲಿ​ಸಿ​ರುವ ಈಶ್ವರ ಖಂಡ್ರೆ ಈಗ ಕೆಪಿ​ಸಿಸಿ ಕಾರ್ಯಾ​ಧ್ಯರೂ ಅಲ್ಲ​ದೆ, ಅಖಿಲ ಭಾರತ ವೀರ​ಶೈವ ಲಿಂಗಾ​ಯತ ಸಮು​ದಾ​ಯವನ್ನೂ ಪ್ರತಿ​ನಿ​ಧಿ​ಸು​ತ್ತಿ​ರುವ ರಾಜ​ಕಾ​ರಣಿ. ಕಲ್ಯಾಣ ಕರ್ನಾ​ಟಕ ಭಾಗ​ದ ಕಾಂಗ್ರೆಸ್‌ ಅಭ್ಯ​ರ್ಥಿ​ಗ​ಳನ್ನು ಆಯ್ಕೆ ಮಾಡಿ ಶಾಸ​ಕ​ರ​ನ್ನಾಗಿಸುವಲ್ಲಿ ಬಹು​ಮುಖ್ಯ ಪಾತ್ರ ವಹಿ​ಸಿ​ದ್ದಾ​ರೆ ಎಂಬುವುದು ಸಿದ್ದು ಸರ್ಕಾ​ರದಲ್ಲಿ ಸಚಿವ ಸ್ಥಾನ​ಕ್ಕೆ ಸಮೀಪ ಕೊಂಡೊ​ಯ್ಯ​ಲಿದೆ.

ಕಾಂಗ್ರೆಸ್‌ ಗ್ಯಾರಂಟಿಯೇ ಕಮಲದ ಸೋಲಿಗೆ ಕಾರಣ: ಶಾಸಕ ಸುರೇಶ್‌ ಗೌಡ

ಇನ್ನು ರಹೀ​ಮ್‌​ಖಾನ್‌ ಕೂಡ ನಾಲ್ಕನೇ ಬಾರಿ ಶಾಸ​ಕ​ರಾ​ದ​ವರು. ಜಿಲ್ಲಾ ಕೇಂದ್ರ ಬೀದ​ರ್‌ನ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಛಾಪನ್ನು ಮೂಡಿ​ಸು​ವ​ದ​ಲ್ಲ​ದೆ ಕಲ್ಯಾಣ ಕರ್ನಾ​ಟಕ ಭಾಗ​ದಲ್ಲಿ 7 ಜಿಲ್ಲೆ​ಗ​ಳಲ್ಲಿ ಸತ​ತ ನಾಲ್ಕು ಬಾರಿ ಗೆದ್ದಿ​ರು​ವ ಹಾಲಿ ಕಾಂಗ್ರೆಸ್‌ ಶಾಸಕ ಹಾಗೂ 2018ರಿಂದ 2019ರವರೆಗೆ ರಾಜ್ಯದ ಯುವ​ಜನ ಸೇವಾ ಹಾಗೂ ಕ್ರೀಡಾ ಇಲಾ​ಖೆಯ ಸಚಿ​ವ​ರಾ​ಗಿದ್ದು ಈ ಬಾರಿಯೂ ಸಚಿವ ಸ್ಥಾನದ ಸಮೀ​ಪ​ದ​ಲ್ಲಿ​ರುವು​ದಕ್ಕೆ ಕಾರ​ಣ.

ಕೆಲಸ ಕಾರ್ಯಕ್ಕೆ ಶಾಸಕರ ಕಚೇರಿಗೆ ಅಲೆಯಬೇಕಿಲ್ಲ: ಶಾಸಕ ಟಿ.ಎಸ್‌. ಶ್ರೀವತ್ಸ

ಇನ್ನು ಶಾಸಕ ಈಶ್ವರ ಖಂಡ್ರೆ ಹಾಗೂ ರಹೀಮ್‌ ಖಾನ್‌ ಅವ​ರನ್ನು ಸಚಿ​ವ​ರ​ನ್ನಾ​ಗಿ​ಸು​ವಂತೆ ಜಿಲ್ಲೆಯ ವಿವಿಧ ಸಮು​ದಾ​ಯ​ಗಳ ಪ್ರಮು​ಖ​ರು, ಸಮಾ​ಜದ ಧಾರ್ಮಿಕ ಮುಖಂಡರುಗಳು ಆಗ್ರ​ಹಿ​ಸಿ​ದ್ದಿ​ದೆ ಅದಾಗ್ಯೂ ಕಲ​ಬು​ರಗಿ ಜಿಲ್ಲೆ​ಯಲ್ಲಿ ಕನಿಷ್ಠ ಮೂವರನ್ನು ಸಚಿ​ವ​ರ​ನ್ನಾಗಿ ಮಾಡುವ ಅನಿ​ವಾ​ರ್ಯ​ತೆಗೆ ನೂಕ​ಲ್ಪ​ಟ್ಟಿ​ರುವ ಕಾಂಗ್ರೆಸ್‌ ಬೀದರ್‌ಗೆ ಸಮಾ​ಧಾ​ನ​ಪ​ಡಿ​ಸುವ ತಂತ್ರ​ಗಾ​ರಿಕೆ ಅನು​ಸ​ರಿ​ಸ​ಲೂ​ಬ​ಹುದು. ಆದರೆ, ಬೀದರ್‌ ಜಿಲ್ಲೆ​ಯನ್ನು ಕಡೆ​ಗೆ​ಣಿ​ಸಿ​ದ್ದೆ​ಯಾ​ದಲ್ಲಿ ಬೀದರ್‌ ಅಭಿ​ವೃದ್ಧಿ ಹಾಗೂ ಆಡ​ಳಿ​ತದ ಮೇಲಿನ ಹಿಡಿತ ತಪ್ಪೋ​ದ್ರಲ್ಲಿ ಸಂದೇ​ಹ​ವಿ​ಲ್ಲ. ಹೀಗಾಗಿ ಬೀದರ್‌ ಜಿಲ್ಲೆಗೆ ಸಧ್ಯದ ಮಟ್ಟಿಗೆ ಒಬ್ಬ​ರ​ನ್ನಾ​ದರೂ ಸಚಿ​ವ​ರ​ನ್ನಾಗಿ ಮಾಡು​ವುದು ಜರೂರಿಯಿದೆ.

Follow Us:
Download App:
  • android
  • ios