ಬಿಜೆಪಿ ಹೈಕಮಾಂಡ್‌ ಆಹ್ವಾನದ ಮೇರೆಗೆ ಕಲಬುರ್ಗಿ ಪ್ರವಾಸ ರದ್ದುಗೊಳಿಸಿ ಶನಿವಾರ ದೆಹಲಿಗೆ ತೆರಳಲಿದ ಲಿಂಬಾವಳಿ| ಈ ಹಿಂದೆ ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ಕೆಲಸ ನಿರ್ವಹಿಸಿದ್ದ ಲಿಂಬಾವಳಿ| ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆ ಹೆಚ್ಚಳಗೊಳ್ಳುವಲ್ಲಿ ಶ್ರಮಿಸಿದ್ದ ಲಿಂಬಾವಳಿ| 

ಬೆಂಗಳೂರು(ಮಾ.06): ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್‌ ಲಿಂಬಾವಳಿ ಅವರಿಗೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಜವಾಬ್ದಾರಿ ನೀಡುವ ಸಾಧ್ಯತೆಯಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಹೈಕಮಾಂಡ್‌ ಆಹ್ವಾನದ ಮೇರೆಗೆ ಲಿಂಬಾವಳಿ ಅವರು ತಮ್ಮ ಕಲಬುರ್ಗಿ ಪ್ರವಾಸ ರದ್ದುಗೊಳಿಸಿ ಶನಿವಾರ ದೆಹಲಿಗೆ ತೆರಳಲಿದ್ದು, ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಸಚಿವ ಅರವಿಂದ್ ಲಿಂಬಾವಳಿ ರಾಜೀನಾಮೆ...!

ಈ ಹಿಂದೆ ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ಕೆಲಸ ನಿರ್ವಹಿಸಿರುವ ಲಿಂಬಾವಳಿ ಅವರು ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆ ಹೆಚ್ಚಳಗೊಳ್ಳುವಲ್ಲಿ ಶ್ರಮಿಸಿದ್ದರು. ಇದೀಗ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಉಸ್ತುವಾರಿ ತಂಡದಲ್ಲಿ ಜವಾಬ್ದಾರಿ ನೀಡುವ ನಿರೀಕ್ಷೆಯಿದೆ ಎನ್ನಲಾಗಿದೆ.