ಶಾಲೆಗಳಿಗೆ ರಜೆ ನೀಡುವ ಸಂಪ್ರದಾಯ ನಿಲ್ಲಬೇಕು. ಅದಕ್ಕೆ ಬದಲಾಗಿ ಈ ದಿನಗಳಂದು ಶಾಲೆ ತೆರೆದಿದ್ದು, ಶ್ರೇಷ್ಠ ವ್ಯಕ್ತಿಗಳ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಲಖನೌ: ಗಣ್ಯರ ಜನ್ಮದಿನ, ಪುಣ್ಯತಿಥಿಗೆ ಶಾಲೆಗಳಿಗೆ ರಜೆ ನೀಡುವುದನ್ನು ರದ್ದುಗೊಳಿಸು ವುದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಘೋಷಿಸಿದ್ದಾರೆ.

Add Asianetnews Kannada as a Preferred SourcegooglePreferred

ಶಾಲೆಗಳಿಗೆ ರಜೆ ನೀಡುವ ಸಂಪ್ರದಾಯ ನಿಲ್ಲಬೇಕು. ಅದಕ್ಕೆ ಬದಲಾಗಿ ಈ ದಿನಗಳಂದು ಶಾಲೆ ತೆರೆದಿದ್ದು, ಶ್ರೇಷ್ಠ ವ್ಯಕ್ತಿಗಳ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಿಎಂ ಹೇಳಿದ್ದಾರೆ.

ತುಂಬಾ ರಜಾ ದಿನಗಳಿರುವುದರಿಂದ ಶಾಲೆಗಳು 120 ದಿನಗಳು ಮಾತ್ರ ತೆರೆದಿರುತ್ತವೆ. ಆದರೆ ಶಾಲೆಗಳು ಕನಿಷ್ಠ 220 ದಿನಗಳು ತೆರೆದಿರಬೇಕು ಎಂದಿದ್ದಾರೆ.

ಯುಪಿ ಶಾಲೆಗಳಿಗೆ ವರ್ಷದಲ್ಲಿ 42 ಸಾರ್ವತ್ರಿಕ ರಜೆ ಇರುತ್ತದೆ. ಈ ಪೈಕಿ 17 ದಿನ ಗಣ್ಯರ ಜನ್ಮದಿನಕ್ಕೆ ಸಂಬಂಧಿಸಿದ್ದು.