Asianet Suvarna News Asianet Suvarna News

ಮೈಸೂರು ಅರಮನೆಗೆ ಆಗಮಿಸಿದ ಯದುವಂಶದ ಕುಡಿ

ಯದುವಂಶದ ಕುಡಿ ಮೈಸೂರಿನ ಮಹಾರಾಜ ಯದುವೀರ್-ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್’ನನ್ನು ಇಂದು ತಂದೆಯ ಮನೆಗೆ ಕರೆತರಲಾಗಿದೆ. ಮಗನನ್ನು ದಂಪತಿ ಇಂದು ಮೈಸೂರಿಗೆ ಕರೆತಂದಿದ್ದಾರೆ. ಆರತಿ ಮಾಡಿ ಇಳಿ ತೆಗೆದು ಮಗುವನ್ನು ಅರಮನೆಗೆ ಬರಮಾಡಿಕೊಳ್ಳಲಾಗಿದೆ.

Yduveer wadiyar Talk About Adhyaveer

ಮೈಸೂರು : ಯದುವಂಶದ ಕುಡಿ ಮೈಸೂರಿನ ಮಹಾರಾಜ ಯದುವೀರ್-ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್’ನನ್ನು ಇಂದು ತಂದೆಯ ಮನೆಗೆ ಕರೆತರಲಾಗಿದೆ. ಮಗನನ್ನು ದಂಪತಿ ಇಂದು ಮೈಸೂರಿಗೆ ಕರೆತಂದಿದ್ದಾರೆ. ಆರತಿ ಮಾಡಿ ಇಳಿ ತೆಗೆದು ಮಗುವನ್ನು ಅರಮನೆಗೆ ಬರಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಮಗುವಿನ ನಾಮಕರಣವನ್ನು ನೆರವೇರಿಸಿದ್ದು, ಈ ಬಗ್ಗೆ ಮಾತನಾಡಿದ ಯದುವೀರ್ ಒಡೆಯರ್ ನಮ್ಮ ಅನುಕೂಲಕ್ಕಾಗಿ ಬೆಂಗಳೂರಲ್ಲಿ ನಾಮಕರಣ ಮಾಡಿಲಾಗಿದೆ ಅಷ್ಟೆ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಇನ್ನು ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಾಗುವುದು ಎಂದರು.

ಇನ್ನು ಮಗುವಿಗೆ ಆದ್ಯವೀರ್ ಎಂದು ಹೆಸರಿಡಲಾಗಿದ್ದು, ಈ ಹೆಸರಿನ ಅರ್ಥವನ್ನು ಈ ವೇಳೆ ಯದುವೀರ್ ಒಡೆಯರ್ ತಿಳಿಸಿದ್ದು, ಇದರ ಅರ್ಥ ಚಾಮುಂಡಿ ಅಥವಾ ದುರ್ಗಿ ಎಂದು.  ಮಗುವಿನ ಒಳಿತಿಗಾಗಿ ಈ ಹೆಸರು ಇಡಲಾಗಿದೆ ಮಗ ಆದ್ಯವೀರ್ ಚೆನ್ನಾಗಿದ್ದಾನೆ ಎಂದು ಹೇಳಿದರು.

Follow Us:
Download App:
  • android
  • ios