ಯದುವೀರ್ ಕೃಷ್ಣದತ್ತ ಒಡೆಯರ್ ಇಂದು ಕಪ್ಪಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.  ಕೆ ಆರ್ ನಗರ ತಾಲೂಕಿನ ಹೆಬ್ಬಾಳು ಸಮೀಪ ಇರುವ ಇತಿಹಾಸ ಪ್ರಸಿದ್ದ ಕಪ್ಪಡಿ ಗದ್ದಿಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮೈಸೂರು (ಮಾ. 04): ಯದುವೀರ್ ಕೃಷ್ಣದತ್ತ ಒಡೆಯರ್ ಇಂದು ಕಪ್ಪಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕೆ ಆರ್ ನಗರ ತಾಲೂಕಿನ ಹೆಬ್ಬಾಳು ಸಮೀಪ ಇರುವ ಇತಿಹಾಸ ಪ್ರಸಿದ್ದ ಕಪ್ಪಡಿ ಗದ್ದಿಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಸಂಬಂಧಿಕರು ಹಾಗೂ ಪೀಠಾಧಿಪತಿ ವರ್ಚಸ್ ಸಿದ್ದಲಿಂಗರಾಜೇ ಅರಸ್ ಅವರನ್ನ ಭೇಟಿ ಮಾಡಿ ಮಾಡಿ ಯದುವೀರ್ ಆಶೀರ್ವಾದ ಪಡೆದರು. ನಂತರ ರಾಜಪ್ಪಾಜಿ ಹಾಗೂ ಚನ್ನಾಜಮ್ಮ ಗದ್ದುಗೆಗೆ ನಮಸ್ಕರಿಸಿ ಪ್ರದಕ್ಷಣೆ ಹಾಕಿದರು.
ಶಿವರಾತ್ರಿಯಿಂದ ಯುಗಾದಿ ಹಬ್ಬದ ವರೆಗೆ ಕಪ್ಪಡಿಜಾತ್ರೆ ನಡೆಯುತ್ತದೆ. ಇಂದು ಬೆಳಿಗ್ಗೆ 9:30 ರದ 11:30 ರ ವರೆಗೆ ಕಪ್ಪಡಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ವರ್ಚಸ್ ಸಿದ್ದಲಿಂಗರಾಜೇ ಸರಸ್ ಅವರು ಭಾಗಿಯಾಗಿದ್ದರು.
ಕಪ್ಪಡಿ ಪುರಾಣ ಕಾಲದಿಂದಲೂ ಸತ್ಯ, ಆಣೆ ಪ್ರಮಾಣಕ್ಕೆ ಹೆರುವಾಸಿಯಾದ ಕ್ಷೇತ್ರವಾಗಿದೆ.