Asianet Suvarna News Asianet Suvarna News

ಪ್ರಶ್ನೆ ಮಾಡಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೆನಾ? ಅವನು ಗಂಡನಲ್ಲ, ರಾಕ್ಷಸ

ಮದುವೆ ವಿಷ್ಯ ಬಚ್ಚಿಟ್ಟು ಮತ್ತೊಬ್ಬಳ ಜೊತೆ 4 ವರ್ಷ ಲವ್ವಿಡವ್ವಿ ಅಂತ ಸುತ್ತಾಡಿ ಮತ್ತೊಂದು ಮದ್ವೆಯಾದ. ಯಾವಾಗ ಗಂಡನ ಮದ್ವೆ ರಹಸ್ಯ ಗೊತ್ತಾಯ್ತೋ ಎರಡನೆ ಹೆಂಡತಿ ಪ್ರಶ್ನೆ ಮಾಡೋಕೆ ಶುರು ಮಾಡಿದ್ದಳು. ಇದರಿಂದ  ಕೋಪಗೊಂಡ ಗಂಡ, ಮೊದಲನೆ ಹೆಂಡತಿ ಜೊತೆ ಸೇರಿಕೊಂಡು ಕಿರುಕುಳ ಕೊಡೋಕೆ ಶುರುಮಾಡಿದ್ದಾನೆ. ಕಾಯಿಸಿದ ಕಬ್ಬಿಣದ ರಾಡ್​ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ್ದಾನೆ. ಇಂತದ್ದೊಂದು ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿಯಲ್ಲಿ ನಡೆದಿದೆ.

Women Herassment in Tumkuru

ತುಮಕೂರು (ಡಿ.14): ಮದುವೆ ವಿಷ್ಯ ಬಚ್ಚಿಟ್ಟು ಮತ್ತೊಬ್ಬಳ ಜೊತೆ 4 ವರ್ಷ ಲವ್ವಿಡವ್ವಿ ಅಂತ ಸುತ್ತಾಡಿ ಮತ್ತೊಂದು ಮದ್ವೆಯಾದ. ಯಾವಾಗ ಗಂಡನ ಮದ್ವೆ ರಹಸ್ಯ ಗೊತ್ತಾಯ್ತೋ ಎರಡನೆ ಹೆಂಡತಿ ಪ್ರಶ್ನೆ ಮಾಡೋಕೆ ಶುರು ಮಾಡಿದ್ದಳು. ಇದರಿಂದ  ಕೋಪಗೊಂಡ ಗಂಡ, ಮೊದಲನೆ ಹೆಂಡತಿ ಜೊತೆ ಸೇರಿಕೊಂಡು ಕಿರುಕುಳ ಕೊಡೋಕೆ ಶುರುಮಾಡಿದ್ದಾನೆ. ಕಾಯಿಸಿದ ಕಬ್ಬಿಣದ ರಾಡ್​ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ್ದಾನೆ. ಇಂತದ್ದೊಂದು ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿಯಲ್ಲಿ ನಡೆದಿದೆ.

ದೇವರಹಳ್ಳಿಯ ನಿವಾಸಿ ರಂಗನಾಥಸ್ವಾಮಿ ಕಿರುಕುಳದಿಂದ ಬೇಸತ್ತ ನೊಂದ ಹೆಂಡತಿ ಮಂಜುಳಾ ಸದ್ಯ ಬೀದಿಗೆ ಬಿದ್ದಿದ್ದಾಳೆ. ಖಾಸಗಿ ಬಸ್​ ಡ್ರೈವರ್​ ಆಗಿದ್ದ ರಂಗನಾಥಸ್ವಾಮಿ, ಎಂಎ ಪದವಿಧರೆ ಜೊತೆ ಪ್ರೀತಿಯ ನಾಟಕವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.  ಯಾವಾಗ ಆ ಯುವತಿ ಗರ್ಭಿಯಾದಳೋ ಆಗ ರಂಗನಾಥಸ್ವಾಮಿ ಕೈಕೊಡೋಕೆ ಮುಂದಾಗಿದ್ದಾನೆ.  ಈ ವೇಳೆ ಮಂಜುಳಾ ಪೊಲೀಸರ ಮೊರೆ ಹೋಗ್ತೀನಿ ಅಂದಿದ್ದಾಳೆ. ಇದರಿಂದ ಹೆದರಿದ ರಂಗನಾಥಸ್ವಾಮಿ, ಆಕೆಯನ್ನು ಮದ್ವೆಯಾಗಿದ್ದ. ಆದರೆ ಮದುವೆಯಾದ ಮರುದಿನ ಗಂಡನ ಮೊದಲ ಮದುವೆ ಬಗ್ಗೆ ಮಂಜುಳಾಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯೊಂದಿಗೆ ಸೇರಿಕೊಂಡು ರಂಗನಾಥ ಮಂಜುಳಾಗೆ ಚಿತ್ರಹಿಂಸೆ ಕೊಡಲು ಆರಂಭಿಸಿದ್ದಾನೆ. ಕಳೆದ 8 ತಿಂಗಳಿನಿಂದ ನಿರಂತರವಾಗಿ ಹಿಂಸೆ ನೀಡಿದ್ದು ಮರ್ಮಾಂಗಕ್ಕೂ ಹಲ್ಲೆ ನಡೆಸಲಾಗಿದೆ. ಇತ್ತ ಗಂಡನೂ ಕೈಬಿಟ್ಟಿದ್ದಾನೆ.  ಅತ್ತ ತವರು ಮನೆಯವರೂ ಸೇರಿಸುತ್ತಿಲ್ಲ. ಹೀಗಾಗಿ ನೊಂದ ಮಂಜುಳಾ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾಳೆ.

Follow Us:
Download App:
  • android
  • ios