ದೇವಮಾನವರಾದ ಪರಮೇಶ್ವರ್!
ದೇವರಿಗೆ ಕೈ ಮುಗಿಯುವುದನ್ನು ಬಿಟ್ಟು ಮಹಿಳಾಮಣಿಗಳು ಪರಮೇಶ್ವರ್ ರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ಕಾಲಿಗೆ ಬೀಳುತಿದ್ದರೂ ಪರಮೇಶ್ವರ್ ನಿರಾಕರಿಸಲಿಲ್ಲ. ಸೀಬಿ ಗ್ರಾಮದ ನರಸಿಹಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ತುಮಕೂರು (ಜೂ. 27): ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಡಿಸಿಎಂ ಜಿ.ಪರಮೇಶ್ವರ್ ತಾವೇ ದೇವಮಾನವರಾಗಿದ್ದಾರೆ.
ದೇವರಿಗೆ ಕೈ ಮುಗಿಯುವುದನ್ನು ಬಿಟ್ಟು ಮಹಿಳಾಮಣಿಗಳು ಪರಮೇಶ್ವರ್ ರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ಕಾಲಿಗೆ ಬೀಳುತಿದ್ದರೂ ಪರಮೇಶ್ವರ್ ನಿರಾಕರಿಸಲಿಲ್ಲ. ಮಹಿಳಾ ಕಾರ್ಯಕರ್ತರು, ಸಾರ್ವಜನಿಕರಿಂದ ಜಿ.ಪರಮೇಶ್ವರ್ ಪಾದಕ್ಕೆರಗಿ ನಮಸ್ಕರಿಸಿದ್ದಾರೆ. ಸೀಬಿ ಗ್ರಾಮದ ನರಸಿಹಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ತಮ್ಮ ಹರಕೆ ತೀರಿಸಲು ಬಂದಿದ್ದ ಜಿ.ಪರಮೇಶ್ವರ್ ನೋಡಿ ಭಾವುಕರಾದ ಜನ ಕಾಲಿಗೆ ಬಿದ್ದಿದ್ದಾರೆ. ಸಮಾಜವಾದಿ, ಪ್ರಗತಿಪರರು ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.