ಮೃತ ಗೃಹಿಣಿ ಹಾಗೂ ಪತಿ ಹಲವು ದಿನಗಳಿಂದ ಸೊಂಪುರ ಗೇಟ್ ಬಳಿ ನೆಲೆಸಿದ್ದರು. ನೇಪಾಲ ಮೂಲದ 26 ವರ್ಷದ ಆರೋಪಿ ತಿಲಕ್​​ ಕೃತ್ಯ ಎಸಗಿ ಪವಿತ್ರ ದೇಹವನ್ನು ಮನೆಯ ಪಕ್ಕದಲ್ಲೆ ಹೂತಿಟ್ಟು ಪರಾರಿಯಾಗಿದ್ದಾನೆ.

ಬೆಂಗಳೂರು (ಮೇ.16): ನೇಪಾಳ ಮೂಲದ ಗೃಹಿಣಿ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿರುವ ಘಟನೆವೊಂದು ಬೆಂಗಳೂರು ಹೊರವಲಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂಪುರ ಗೇಟ್ ಬಳಿ ಈ ಪ್ರಕರಣ ನಡೆದಿದೆ.

ಮೃತ ಗೃಹಿಣಿ ಹಾಗೂ ಪತಿ ಹಲವು ದಿನಗಳಿಂದ ಸೊಂಪುರ ಗೇಟ್ ಬಳಿ ನೆಲೆಸಿದ್ದರು. ನೇಪಾಲ ಮೂಲದ 26 ವರ್ಷದ ಆರೋಪಿ ತಿಲಕ್​​ ಕೃತ್ಯ ಎಸಗಿ ಪವಿತ್ರ ದೇಹವನ್ನು ಮನೆಯ ಪಕ್ಕದಲ್ಲೆ ಹೂತಿಟ್ಟು ಪರಾರಿಯಾಗಿದ್ದಾನೆ.

ಮೇ 4 ರಂದು ಘಟನೆ ನಡೆದಿದ್ದು, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಮೃತ ಮಹಿಳೆಯ ಪತಿ ಕಾಣೆಯಾಗಿರುವ ದೂರು ನೀಡಿದ್ದರು. ಸರ್ಜಾಪುರ ಪೊಲೀಸರ ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸರ್ಜಾಪುರ ಪೊಲೀಸರು ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.