ಅಬ್ಬಬ್ಬಾ ಜನ ತಲಾಖ್ ಕೊಡೋಕೆ ಕೊಡೋ ಕಾರಣ  ನೋಡಿದ್ರೆ ಯಾರಿಗಾದರೂ ಸಿಟ್ಟು ಬರದೇ ಇರದು. ಯಾಕೆ ಗೊತ್ತಾ? ಇಲ್ನೋಡಿ, 

ಉತ್ತರಪ್ರದೇಶ ಮಹೋಬಾ ಜಿಲ್ಲೆಯ ಭೂಪನೊಬ್ಬ, ಪತ್ನಿ ಮಾಡಿದ ರೊಟ್ಟಿ ಸುಟ್ಟುಹೋಗಿದೆ ಎಂದು ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಈತನಿಗೆ ಪತ್ನಿ ಮೇಲೆ ಪದೇ ಪದೇ ಭಾರೀ ಸಿಟ್ಟು ಬರುತ್ತಿತ್ತಂತೆ. 3 ದಿನಗಳ ಹಿಂದೆ ಪತ್ನಿ ಮಾಡಿದ್ದ ರೊಟ್ಟಿ ಸುಟ್ಟು ಕಪ್ಪಾಗಿದೆ ಎಂದು ಬೇಸತ್ತು ಆ ಕ್ಷಣದಲ್ಲೇ ತ್ರಿವಳಿ ತಲಾಖ್ ನೀಡಿದ್ದಾನೆ. ಪತ್ನಿ ಈ ಬಗ್ಗೆ ದೂರು ನೀಡಿದ ಬಳಿಕ ವಿಷಯ ಬಹಿರಂಗವಾಗಿದೆ.

ತ್ರಿವಳಿ ತಲಾಖ್ ಅಸಿಂಧು ಎಂಬ ಕಳೆದ ವರ್ಷದ ಕೋರ್ಟ್ ತೀರ್ಪು ಈ ಮಹಾನುಭಾವನಿಗೆ ಗೊತ್ತಿಲ್ಲವೆಂದು ಕಾಣುತ್ತೆ. ಕೇಂದ್ರದಲ್ಲಿ ಎನ್ ಡಿೆ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಮಹಿಳೆಯರ ಹಿತ ಕಾಪಾಡಲು ಅನೇಕ ಕ್ರಮ ತೆಗೆದುಕೊಂಡಿದ್ದು ಅದರಲ್ಲಿ ತಲಾಖ್ ರದ್ದು ಮಾಡಿರುವುದು ಒಂದು.