Asianet Suvarna News Asianet Suvarna News

ಸಿಎಂ ಜಗನ್‌ ಬಂದ ಬೆನ್ನಲ್ಲೇ ಆಂಧ್ರಕ್ಕೆ ಬಂತು 4200 ಕೋಟಿ!

ಸಿಎಂ ಜಗನ್‌ ಬಂದ ಬೆನ್ನಲ್ಲೇ ಆಂಧ್ರಕ್ಕೆ ಬಂತು 4200 ಕೋಟಿ| ಸಿಎಂ ಜಗನ್‌ ಕರೆಗೆ ಪ್ರಧಾನಿ ಮೋದಿ ಕೃಪೆ

With Jagan at helm Centre extends over Rs 4200 crore to Andhra Pradesh
Author
Bangalore, First Published Jun 17, 2019, 8:04 AM IST | Last Updated Jun 17, 2019, 8:04 AM IST

ಹೈದ್ರಾಬಾದ್‌17: ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದು ಜಗನ್‌ಮೋಹನ್‌ ರೆಡ್ಡಿ ಅವರು ಮುಖ್ಯಮಂತ್ರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ವಿವಿಧ ಯೋಜನೆಗಳಿಗೆ ಬರೋಬ್ಬರಿ 4200 ಕೋಟಿ ರು. ಬಿಡುಗಡೆ ಮಾಡಿದೆ.

ಆಂಧ್ರಪ್ರದೇಶ ಜೊತೆಗಿನ ಬಾಂಧವ್ಯವನ್ನು ಉತ್ತಮಗೊಳಿಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಬೇಡಿಕೆಗಳಿಗೆ ಸಂಬಧಿಸಿ ಸಲ್ಲಿಸಲಾಗಿದ್ದ ಮನವಿಗಳನ್ನು ಪರಿಶೀಲಿಸಿ ಒಟ್ಟು 4200 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ.

ಗೋದಾವರಿ ನದಿ ನೀರು ಬಳಸಿಕೊಂಡು ನೀರಾವರಿ ಯೋಜನೆಗೆ ಸಲ್ಲಿಸಲಾಗಿದ್ದ ಯೋಜನೆಗೆ ಗುರುವಾರವಷ್ಟೇ 3000 ಕೋಟಿ ನೀಡಲು ಕೇಂದ್ರ ಒಪ್ಪಿಗೆ ನೀಡಿತ್ತು. ಈಗ ಈ ಯೋಜನೆಯೂ ಸೇರಿ ಇನ್ನೂ ಕೆಲ ಯೋಜನೆಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡಿದೆ. ಈ ಹಿಂದೆ ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಹಿಂದಿನ ಸಿಎಂ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕಿಡಿಕಾರುತ್ತಿದ್ದರು.

Latest Videos
Follow Us:
Download App:
  • android
  • ios