ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ದಿನಾಂಕ ಘೋಷಣೆಗೂ ಕ್ಷಣಗಣನೆ ಆರಂಭವಾಗಿದೆ. ಇದೇ ವೇಳೆ ಅಭ್ಯರ್ಥಿಗಳ ಆಯ್ಕೆಯ ಕುತೂಹಲವೂ ಕೂಡ ಗರಿಗೆದರಿದೆ.
ನವದೆಹಲಿ : ಬಿಜೆಪಿಯ ಭೀಷ್ಮ ಎಲ್. ಕೆ. ಅಡ್ವಾಣಿ 6 ಬಾರಿ ಗೆದ್ದಿರುವ ಲೋಕಸಭಾ ಕ್ಷೇತ್ರ ಗುಜರಾತ್ನ ಗಾಂಧಿನಗರ.
ಕಳೆದ ಚುನಾವಣೆಯಲ್ಲೇ ಅವರು ಈ ಕ್ಷೇತ್ರಕ್ಕೆ ಸ್ವತಃ ‘ಕೇಳಿ’ ಟಿಕೆಟ್ ಪಡೆದುಕೊಳ್ಳುವಂತಾಗಿತ್ತು. ಈ ಬಾರಿ 91ನೇ ಇಳಿ ವಯಸ್ಸಿನಲ್ಲಿರುವ ಅವರಿಗೆ ಮತ್ತೆ ಟಿಕೆಟ್ ಸಿಗುತ್ತದೆಯೇ ಎಂಬುದು ಸದ್ಯಕ್ಕೆ ಸಸ್ಪೆನ್ಸ್.
75 ವರ್ಷ ದಾಟಿದವರನ್ನು ಸಕ್ರಿಯ ರಾಜಕಾರಣದಿಂದ ದೂರವಿಡುವ ಬಿಜೆಪಿಯ ಅಲಿಖಿತ ನಿಯಮ ಈ ಬಾರಿ ಜಾರಿಗೆ ಬಂದರೆ ಮೊದಲೇ ಪಕ್ಷದಲ್ಲಿ ತೆರೆಮರೆಗೆ ಸರಿದಿರುವ ಅಡ್ವಾಣಿಗೆ ಟಿಕೆಟ್ ಸಿಗುವುದು ಕಷ್ಟ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 11, 2019, 11:09 AM IST