ಬಿಎಸ್ವೈ ಸ್ಪರ್ಧಿಸಿದರೂ ತೇರದಾಳದಲ್ಲೇ ಕಣಕ್ಕಿಳಿವೆ
‘ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಮುಂದಿನ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ನಾನು ಕ್ಷೇತ್ರ ಬಿಟ್ಟು ಓಡುವವಳಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ: ‘ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಮುಂದಿನ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ನಾನು ಕ್ಷೇತ್ರ ಬಿಟ್ಟು ಓಡುವವಳಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಓಡಿ ಹೋಗುವ ಜಾಯಮಾನ ಕಾಂಗ್ರೆಸ್ ಪಕ್ಷದ್ದಾಗಲಿ, ಉಮಾಶ್ರೀಯದ್ದಾಗಲಿ ಅಲ್ಲ. ತೇರದಾಳದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿ ಅದೆಷ್ಟೇ ಬಲಿಷ್ಠ ನಾಯಕರು ಕಣಕ್ಕಿಳಿದರೂ, ಎದುರಾಳಿ ಯಾರೇ ಆಗಿದ್ದರೂ, ನಾನು ಮಾತ್ರ ಕಣದಲ್ಲಿರುತ್ತೇನೆ ಎಂದರು.