ಮುಂಗಾರಿನ ಬಗ್ಗೆ ನಿಮಗೆ ಗೊತ್ತೇ ಈ ವಿಚಾರ..?
ದೇಶದ ಕೃಷಿ ಚಟುವಟಿಕೆ ಹಾಗೂ ಜಲ ಸಂಪನ್ಮೂಲದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತಗಳು ಈ ಬಾರಿ ವಾಡಿಕೆಗಿಂತ ಮೂರು ದಿನ ಮೊದಲೇ ಕೇರಳಕ್ಕೆ ಮಂಗಳವಾರ ಅಪ್ಪಳಿಸಿವೆ. ಅದರಂತೆ ನಮಗೆ ಮುಂಗಾರು ಯಾಕೆ ಮಹತ್ವದ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಬೆಂಗಳೂರು : ದೇಶದ ಕೃಷಿ ಚಟುವಟಿಕೆ ಹಾಗೂ ಜಲ ಸಂಪನ್ಮೂಲದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತಗಳು ಈ ಬಾರಿ ವಾಡಿಕೆಗಿಂತ ಮೂರು ದಿನ ಮೊದಲೇ ಕೇರಳಕ್ಕೆ ಮಂಗಳವಾರ ಅಪ್ಪಳಿಸಿವೆ. ಅದರಂತೆ ನಮಗೆ ಮುಂಗಾರು ಯಾಕೆ ಮಹತ್ವದ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ದೇಶದಲ್ಲಿ ಒಟ್ಟು ಸುರಿಯುವ ಮಳೆಯ ಪೈಕಿ ಶೇ.70 ರಷ್ಟು ಮಳೆ ಮುಂಗಾರಿನದ್ದು ದೇಶದ ಶೇ.40ರಷ್ಟು ವಿದ್ಯುತ್ ಬೇಡಿಕೆ ಪೂರೈಸುವ ಜಲವಿದ್ಯುದಾಗಾರಗಳು ಮುಂಗಾರು ಅವಲಂಬಿತ
ಭಾರತದ 2 ಲಕ್ಷ ಕೋಟಿ ಕೃಷಿ ಆರ್ಥಿಕತೆ ಬಹುತೇಕವಾಗಿ ಮುಂಗಾರು ಮಳೆಯನ್ನು ಅವಲಂಬಿಸಿದೆ
ದೇಶದ 27 ರೈತ ಕುಟುಂಬಗಳ, 80 ಕೋಟಿ ಜನರು ಜೀವನೋಪಾಯಕ್ಕೆ ಅವಂಬಿಸಿರುವುದು ಮುಂಗಾರು
ದೇಶದ ಜಿಡಿಪಿಯ ಶೇ.20 ರಷ್ಟು ಪಾಲು ಕೃಷಿ ವಲಯದ್ದು. ಇಲ್ಲಿನ ಸಣ್ಣ ವ್ಯತ್ಯಾಸವೂ ದೇಶಕ್ಕೆ ಮಾರಕ