Asianet Suvarna News Asianet Suvarna News

ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ಕಾರಣ ಯಾರು..?

ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಇನ್ನು ರಾಮಲಿಂಗಾ ರೆಡ್ಡಿ ಅವರಿಗೂ ಕೂಡ ಸಚಿವ ಸ್ಥಾನ ತಪ್ಪಿದ್ದು, ಇದಕ್ಕೆ ತಾವು ಕಾರಣ ಅಲ್ಲ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ. 

Who is reason behind Ramalinga Reddy lost chance to join Karnataka cabinet
Author
Bengaluru, First Published Dec 25, 2018, 11:15 AM IST

ತುಮ​ಕೂರು: ರಾಮ​ಲಿಂಗಾ ರೆಡ್ಡಿ ಅವರಿಗೆ ಮಂತ್ರಿ ಪದವಿ ತಪ್ಪಲು ನಾನು ಕಾರಣವಲ್ಲ. ಅದು ಪಕ್ಷದ ತೀರ್ಮಾನ ಎಂದು ಉಪ​ಮು​ಖ್ಯ​ಮಂತ್ರಿ ಡಾ. ಜಿ. ಪರ​ಮೇ​ಶ್ವರ್‌ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿದ ಅವರು, ಸಚಿವ ಸಂಪುಟದ ವಿಸ್ತ​ರಣೆ ವೇಳೆ ಅಸಮಾಧಾನ ಉಂಟಾಗುವುದು ಸಹಜ. ವರಿ​ಷ್ಠರು ಯಾರನ್ನು ಮಂತ್ರಿ ಮಾಡ​ಬೇಕು, ಯಾರಿಗೆ ಆದ್ಯತೆ ನೀಡ​ಬೇಕು ಎಂದು ನಮ್ಮಲ್ಲಿ ಸಲಹೆ ಕೇಳು​ತ್ತಾರೆ ಅಷ್ಟೆ. ಇವ​ರನ್ನೇ ಮಾಡಿ ಅಂತಾ ಹೇಳಿ​ದರೆ ಹೈಕ​ಮಾಂಡ್‌ ಕೇಳಲ್ಲ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತ​ರ​ಣೆ ವೇಳೆ ನನ್ನ ಅಥವಾ ಸಿದ್ದ​ರಾ​ಮಯ್ಯ ಅವರ ಕೈ ಮೇಲಾ​ಗಿದೆ ಎನ್ನು​ವುದು ಮಾಧ್ಯ​ಮ​ದ​ವರ ಊಹೆ. ಯಾರ ಕೈ ಮೇಲೂ ಆಗಿಲ್ಲ, ಕೆಳಗೂ ಆಗಿಲ್ಲ. ಶಾಸಕರು ಹಾಗೂ ಸಚಿವರ ಪ್ರತಿಕ್ರಿಯೆ ಬಗ್ಗೆ ಬರುತ್ತಿರುವ ವಿಚಾರಗಳ ಬಗ್ಗೆ ವಾಸ್ತವ ತಿರುಚಲಾಗುತ್ತಿದೆ ಎಂದರು.

ರಮೇಶ್‌ ಜಾರಕಿಹೊಳಿ ರಾಜೀನಾಮೆ ವಿಚಾರ ಗೊತ್ತಿಲ್ಲ, ಅವರ ಮನ​ವೊ​ಲಿ​ಸುವ ಯತ್ನ ಮಾಡು​ತ್ತೇನೆ. ಹಾಗೆಯೇ ಖರ್ಗೆ ಅವರ ಬಳಿಯೂ ಮಾತ​ನಾ​ಡು​ತ್ತೇನೆ. ಎಂ.ಬಿ.ಪಾಟೀ​ಲ್‌ಗೆ ಗೃಹ ಖಾತೆ ನೀಡುವ ಕುರಿತು ಯಾವುದೇ ಚರ್ಚೆ ನಡೆ​ದಿಲ್ಲ. ಅದನ್ನು ಹೈಕ​ಮಾಂಡ್‌ ನಿರ್ಧ​ರಿ​ಸು​ತ್ತದೆ ಎಂದ​ರು.

ಒಂದು ವಾರದಲ್ಲಿ ಎಲ್ಲ ಗೊಂದಲವೂ ತಿಳಿಯಾಗಲಿದೆ. ಜೆಡಿಎಸ್‌ನಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಅವರು ತುಂಬು​ತ್ತಾರೆ. ಸದ್ಯಕ್ಕೆ ಯಾವುದೇ ತೊಂದ​ರೆ​ಯಿಲ್ಲ. ಸರ್ಕಾರ ಸುಭ​ದ್ರ​ವಾ​ಗಿದೆ ಎಂದರು.

Follow Us:
Download App:
  • android
  • ios