Asianet Suvarna News Asianet Suvarna News

ಬೆಂ. ಗ್ರಾಮಾಂತರದಲ್ಲಿ ಬಿಜೆಪಿ ಸೋಲಲು ಕಾರಣವೇನು..?

ಬೆಂಗಳೂರು ಗ್ರಾಮಂತರ ಕ್ಷೇತ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈ ತಪ್ಪಿದ್ದು ಇದಕ್ಕೆ ಕಾರಣವೇನು ಎಂದು ಹೇಳಿದ್ದಾರೆ.

What Is The Reason For BJP Lost Bengaluru Rural
Author
Bengaluru, First Published May 27, 2019, 8:48 AM IST

ರಾಮ​ನ​ಗರ :  ಬೆಂಗ​ಳೂರು ಗ್ರಾಮಾಂತರ ಲೋಕ​ಸಭಾ ಕ್ಷೇತ್ರ​ದಲ್ಲಿ ಅಭ್ಯರ್ಥಿಯ ಆಯ್ಕೆ ಹಾಗೂ ವ್ಯವ​ಸ್ಥಿ​ತ​ವಾಗಿ ಚುನಾ​ವ​ಣಾ ಪ್ರಚಾರ ನಡೆ​ಸು​ವಲ್ಲಿ ವಿಫ​ಲ​ವಾ​ಗಿದ್ದೆ ಚುನಾ​ವ​ಣೆ​ಯಲ್ಲಿ ಸೋಲು ಅನು​ಭ​ವಿ​ಸಲು ಕಾರಣ ಎಂದು ಪರಾ​ಜಿತ ಬಿಜೆ​ಪಿ ಅಭ್ಯರ್ಥಿ ಅಶ್ವಥ್‌ ನಾರಾ​ಯ​ಣ​ಗೌಡ ತಿಳಿ​ಸಿ​ದರು.

ಭಾನು​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಮೂರು ನಾಲ್ಕು ತಿಂಗಳ ಮುಂಚೆಯೇ ಬಿಜೆಪಿ ಅಭ್ಯರ್ಥಿ ಘೋಷ​ಣೆ​ಯಾ​ಗಿ​ದ್ದರೆ ಬೆಂಗ​ಳೂರು ಗ್ರಾಮಾಂತರ ಕ್ಷೇತ್ರ ಸೇರಿ​ದಂತೆ ಕರ್ನಾ​ಟ​ಕ​ ಕಾಂಗ್ರೆಸ್‌ ಮುಕ್ತ ಆಗು​ತ್ತಿತ್ತು. ಇದು ಪಕ್ಷದ ವರಿ​ಷ್ಠ​ರ ಅರಿ​ವಿಗೂ ಬಂದಿದೆ. ಮಾಜಿ ಸಚಿವ ಯೋಗೇ​ಶ್ವರ್‌ ಅಭ್ಯ​ರ್ಥಿ​ಯಾ​ಗಿ​ದ್ದರೆ ಸುಲ​ಭ​ವಾಗಿ ಸಂಸ​ದ​ರಾ​ಗುವ ಅವ​ಕಾಶ ಸಿಗು​ತ್ತಿತ್ತು. ಅವರು ನಿರಾ​ಕ​ರಿ​ಸಿದ ಹಿನ್ನೆ​ಲೆ​ಯಲ್ಲಿ ಆಕ​ಸ್ಮಿ​ಕ​ವಾಗಿ ನಾನು ಅಭ್ಯ​ರ್ಥಿ​ಯಾದೆ. ಚುನಾ​ವ​ಣೆ​ಯಲ್ಲಿ ಯಾರೇ ಹೊಂದಾ​ಣಿಕೆ, ಒಳ​ಒ​ಪ್ಪಂದ ಮಾಡಿ​ಕೊಂಡರೂ ಮತ​ದಾರ ಮತ್ತು ಪಕ್ಷದ ಕಾರ್ಯ​ಕ​ರ್ತರು ಅದನ್ನು ಒಪ್ಪು​ವು​ದಿ​ಲ್ಲ ಎಂದು ಹೇಳಿ​ದ​ರು.

ನಾನು ಬೆಂಗ​ಳೂರು ಉತ್ತರ ಕ್ಷೇತ್ರ​ ಚುನಾ​ವ​ಣೆಯ ಜವಾ​ಬ್ದಾರಿ ಹೊತ್ತುಕೊಂಡಿದ್ದೆ. ನಾಮ​ಪತ್ರ ಸಲ್ಲಿ​ಕೆಗೆ ಒಂದು ದಿನ ಇರು​ವಂತೆ ನನ್ನನ್ನು ಅಭ್ಯ​ರ್ಥಿ​ಯ​ನ್ನಾಗಿ ಆಯ್ಕೆ ಮಾಡಿ​ದರು. ತರಾ​ತು​ರಿ​ಯ​ಲ್ಲಿಯೇ ನಾನು ನಾಮ​ಪತ್ರ ಸಲ್ಲಿ​ಸಿದೆ. ಚುನಾ​ವ​ಣೆಗೆ ಬಾಕಿ ಉಳಿ​ದಿದ್ದ ಕೇವಲ 22 ದಿನ​ಗ​ಳಲ್ಲಿ ಮತ​ದಾ​ರ​ರನ್ನು ಭೇಟಿ​ಯಾ​ಗಲು ಹಾಗೂ ಕಾರ್ಯ​ಕ​ರ್ತರ ಸಭೆಗಳನ್ನು ನಡೆ​ಸಲು ಸಾಧ್ಯ​ವಾ​ಗ​ಲಿಲ್ಲ ಎಂದರು.

Follow Us:
Download App:
  • android
  • ios