ನಮ್ಮ ನಂಬಿಕೆ ನಮ್ಮ ಖಾಸಗಿ ವಿಷಯ. ಈ ವಿಷಯದ ಬಗ್ಗೆ ನಾವು ಯಾರೊಬ್ಬರಿಗೂ ಪ್ರಮಾಣಪತ್ರ ನೀಡಬೇಕಾಗಿಲ್ಲ.

ವಡೋದರಾ(ಡಿ.01): ಸೋಮನಾಥ್ ದೇಗುಲ ಭೇಟಿಯ ಸಂದರ್ಭದಲ್ಲಿ ಹಿಂದೂಯೇಯರ ಧರ್ಮದ ವಿವಾದ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ಅಜ್ಜಿ ಹಾಗೂ ನನ್ನ ಕುಟುಂಬದವರೆಲ್ಲ ಶಿವಭಕ್ತರು. ಇಂತಹ ಸಂಗತಿಗಳನ್ನು ಖಾಸಗಿಯಾಗಿ ಇರಿಸಲಾಗುತ್ತದೆ. ಈ ರೀತಿಯ ವಿಷಯಗಳ ಬಗ್ಗೆ ನಾವು ಮಾತನಾಡುವುದಿಲ್ಲ. ನಮ್ಮ ಧರ್ಮ ನಮ್ಮ ಖಾಸಗಿ ವಿಷಯ' ಎಂದು ವಡೋದರದಲ್ಲಿ ವ್ಯಾಪಾರಿಗಳೊಂದಿಗೆ ನಡೆದ ಸಮಾರಂಭದಲ್ಲಿ ತಿಳಿಸಿದರು.

ನಮ್ಮ ನಂಬಿಕೆ ನಮ್ಮ ಖಾಸಗಿ ವಿಷಯ. ಈ ವಿಷಯದ ಬಗ್ಗೆ ನಾವು ಯಾರೊಬ್ಬರಿಗೂ ಪ್ರಮಾಣಪತ್ರ ನೀಡಬೇಕಾಗಿಲ್ಲ. ನಾವು ಧರ್ಮದ ದಲ್ಲಾಳಿಗಳಲ್ಲ. ಇಂತಹ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನಾವು ಇಚ್ಚಿಸುವುದಿಲ್ಲ' ಎಂದು ಹೇಳಿದರು. ಇತ್ತೀಚಿಗೆ 2 ದಿನಗಳ ಹಿಂದಷ್ಟೆ ರಾಹುಲ್ ಗಾಂಧಿ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದಾಗ ಹಿಂದುಯೇತರ ಪುಸ್ತಕದಲ್ಲಿ ಅವರ ಹೆಸರು ನಮೂದಾಗಿ ವಿವಾದವುಂಟಾಗಿತ್ತು. ಆದರೆ ರಾಹುಲ್ ಗಾಂಧಿ ನಮೂದಿಸಲಿರಲಿಲ್ಲ' ಎಂದು ಕಾಂಗ್ರೆಸ್ ಸ್ಪಷ್ಟನೆ ನಿಡಿತ್ತು. ಹಲವು ದಿನಗಳಿಂದ ರಾಹುಲ್ ಗಾಂಧಿಯವರ ಮೂಲ ಧರ್ಮದ ಬಗ್ಗೆ ಚರ್ಚೆಗಳಾಗುತ್ತಿವೆ.