ಗುತ್ತಿಗೆ ಮತ್ತು ಕಾಯಂ ನೌಕರರು ಸೇರಿ ಎಲ್ಲ ನೌಕರರು ಭದ್ರಾವತಿ, ದುರ್ಗಾಪುರ ಹಾಗೂ ಸೇಲಂ ಉಕ್ಕು ಕಾರ್ಖಾನೆಯಲ್ಲಿ 1 ದಿನದ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಈ ಘಟಕಗಳಲ್ಲಿ ಕೆಲಸ ಸ್ತಬ್ಧವಾಗಿತ್ತು ಎಂದು ಸಿಐಟಿಯು ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ತಿಳಿಸಿದ್ದಾರೆ.

ನವದೆಹಲಿ(ಏ.11): ಶಿವಮೊಗ್ಗ ಜಿಲ್ಲೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸೇರಿ ದೇಶದ 3 ಸರ್ಕಾರಿ ಸ್ವಾಮ್ಯದ ಉಕ್ಕು ಕಾರ್ಖಾನೆಯಲ್ಲಿನ ಬಂಡವಾಳ ಹಿಂತೆಗೆತ ಪ್ರಕ್ರಿಯೆ ವಿರೋಸಿ ಮಂಗಳವಾರ ನೌಕರರು ಒಂದು ದಿನದ ಮುಷ್ಕರ ನಡೆಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುತ್ತಿಗೆ ಮತ್ತು ಕಾಯಂ ನೌಕರರು ಸೇರಿ ಎಲ್ಲ ನೌಕರರು ಭದ್ರಾವತಿ, ದುರ್ಗಾಪುರ ಹಾಗೂ ಸೇಲಂ ಉಕ್ಕು ಕಾರ್ಖಾನೆಯಲ್ಲಿ 1 ದಿನದ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಈ ಘಟಕಗಳಲ್ಲಿ ಕೆಲಸ ಸ್ತಬ್ಧವಾಗಿತ್ತು ಎಂದು ಸಿಐಟಿಯು ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ತಿಳಿಸಿದ್ದಾರೆ.

ಭದ್ರಾವತಿ ಕಾರ್ಖಾನೆಯಲ್ಲಿ ಕಬ್ಬಿಣದ ಅದಿರು ಕೊರತೆ ಕಾರಣ ಈಗಾಗಲೇ 1 ವಾರದಿಂದ ಕೆಲಸ ನಿಂತಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಉಕ್ಕು ಪ್ರಾಕಾರದ ಅಕಾರಿಯೊಬ್ಬರ ಪ್ರಕಾರ ಹಾಜರಾತಿ ಪ್ರಮಾಣ ಮೂರೂ ಕಾರ್ಖಾನೆಗಳಲ್ಲಿ ಶೇ.50ರಷ್ಟಿತ್ತು.