ಇಮ್ರಾನ್​'ಪಾಷಾ ಹಲ್ಲೆಗೊಳಗಾದವ. ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ನೈಸ್​ ರಸ್ತೆಯಲ್ಲಿ ಯುವತಿಗೆ ಚುಡಾಯಿಸಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಇಂಥ ಘಟನೆ ನಡೆದಿದೆ.

ಬೆಂಗಳೂರು(ಆ. 09): ಯುವತಿಗೆ ಚುಡಾಯಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲಮಂಗಲ ತಾಲೂಕಿನ ಮಂಟನಕುರ್ಚಿ ಗ್ರಾಮದಲ್ಲಿ ನಡೆದಿದೆ. ಯುವತಿಗೆ ಚುಡಾಯಿಸಿದ ಯುವಕನಿಗೆ ಗ್ರಾಮಸ್ಥರು ವಿದ್ಯುತ್​ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ಇಮ್ರಾನ್​'ಪಾಷಾ ಹಲ್ಲೆಗೊಳಗಾದವ. ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ನೈಸ್​ ರಸ್ತೆಯಲ್ಲಿ ಯುವತಿಗೆ ಚುಡಾಯಿಸಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಇಂಥ ಘಟನೆ ನಡೆದಿದೆ.