ಸಹಾಯಕ ಆಡಳಿತಾಧಿಕಾರಿ ಅಂಕಪ್ಪರಿಂದ ವಿಕ್ಟೋರಿಯಾ ಆಸ್ಪತ್ರೆ ಆಂಬ್ಯುಲೆನ್ಸ್ ದುರ್ಬಳಕೆ
ಬೆಂಗಳೂರು (ಫೆ.11): ನಮಗೆ ಒಂದು ಗಳಿಗೆ ತಡವಾದ್ರು ಪರವಾಗಿಲ್ಲ. ಆದ್ರೆ ಸಾವು-ಬದುಕಿನ ನಡುವೆ ಜಂಜಾಟ ನಡೆಸ್ತಿರೊ ಆ ಜೀವಕ್ಕೆ ಒಳ್ಳೆಯದಾಗಲಿ ಅಂತೀವಿ. ಅದೇ ಕಾರಣಕ್ಕೆ ಮಾರುದ್ದ ಟ್ರಾಫಿಕ್ ಇದ್ದರು, ಆ್ಯಂಬುಲೆನ್ಸ್ ಬರ್ತಿದ್ದಾಗೆ ಎಲ್ಲರೂ ಜಾಗ ಬಿಡ್ತೀವಿ. ಆದ್ರೆ ಜನರ ಈ ಮನಸ್ಥಿತಿಯನ್ನೇ ಸರ್ಕಾರಿ ಅಧಿಕಾರಿಯೊಬ್ಬರು ಬಂಡವಾಳ ಮಾಡ್ಕೊಂಡಿದ್ದಾರೆ. ಟ್ರಾಫಿಕ್ ನಲ್ಲಿ ಕಾಯೋಕ್ ಆಗಲ್ಲ ಅಂತಾ ಆಸ್ಪತ್ರೆ ಆ್ಯಂಬುಲೆನ್ಸ್ ನಲ್ಲೇ ಸ್ವಂತ ಕೆಲಸಕ್ಕೆ ತೆರಳಿದ್ದಾರೆ. ಈ ಮಹತ್ಕಾರ್ಯ ಮಾಡಿದ ಮಹಾನುಭಾವ ಮತ್ಯಾರು ಅಲ್ಲಾ. ಆತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಅಂಕಪ್ಪ.
ಬೆಂಗಳೂರು (ಫೆ.11): ನಮಗೆ ಒಂದು ಗಳಿಗೆ ತಡವಾದ್ರು ಪರವಾಗಿಲ್ಲ. ಆದ್ರೆ ಸಾವು-ಬದುಕಿನ ನಡುವೆ ಜಂಜಾಟ ನಡೆಸ್ತಿರೊ ಆ ಜೀವಕ್ಕೆ ಒಳ್ಳೆಯದಾಗಲಿ ಅಂತೀವಿ. ಅದೇ ಕಾರಣಕ್ಕೆ ಮಾರುದ್ದ ಟ್ರಾಫಿಕ್ ಇದ್ದರು, ಆ್ಯಂಬುಲೆನ್ಸ್ ಬರ್ತಿದ್ದಾಗೆ ಎಲ್ಲರೂ ಜಾಗ ಬಿಡ್ತೀವಿ. ಆದ್ರೆ ಜನರ ಈ ಮನಸ್ಥಿತಿಯನ್ನೇ ಸರ್ಕಾರಿ ಅಧಿಕಾರಿಯೊಬ್ಬರು ಬಂಡವಾಳ ಮಾಡ್ಕೊಂಡಿದ್ದಾರೆ. ಟ್ರಾಫಿಕ್ ನಲ್ಲಿ ಕಾಯೋಕ್ ಆಗಲ್ಲ ಅಂತಾ ಆಸ್ಪತ್ರೆ ಆ್ಯಂಬುಲೆನ್ಸ್ ನಲ್ಲೇ ಸ್ವಂತ ಕೆಲಸಕ್ಕೆ ತೆರಳಿದ್ದಾರೆ. ಈ ಮಹತ್ಕಾರ್ಯ ಮಾಡಿದ ಮಹಾನುಭಾವ ಮತ್ಯಾರು ಅಲ್ಲಾ. ಆತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಅಂಕಪ್ಪ.
ಈತ ಆರ್ಟಿಐ ಅಡಿಯ ವಿಚಾರಣೆಯಲ್ಲಿ ಭಾಗಿಯಾಗಬೇಕಿತ್ತು. ಆದರೆ ತನ್ನ ಸ್ವಂತ ವಾಹನದಲ್ಲಿ ಹೋದರೆ ಎಲ್ಲಿ ತಡವಾಗುತ್ತೋ ಅನ್ನೋ ಕಾರಣಕ್ಕೆ, ಆಸ್ಪತ್ರೆ ಆ್ಯಂಬುಲೆನ್ಸ್ ನಲ್ಲಿ ತೆರಳಿದ್ದಾನೆ. ತಾನು ಮಾಡುತ್ತಿರುವುದು ಕಾನೂನು ಬಾಹಿರ ಕೃತ್ಯ ಅಂತ ಗೊತ್ತಿದ್ದೂ ಕೂಡ ಅಂಕಪ್ಪ ಈ ಕೆಲಸಕ್ಕೆ ಕೈ ಹಾಕಿದ್ದಾನೆ.
ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಆ್ಯಂಬುಲೆನ್ಸ್ ದುರ್ಬಳಕೆ ಮಾಡಿರೋದನ್ನ ವಿರೋಧಿಸಿ, ಆರ್ಟಿಐ ಕಾರ್ಯಕರ್ತ ಡಿ ಎಸ್ ಗೌಡ ಎಂಬುವವರು ಆರೋಗ್ಯ ಸಚಿವ ರಮೇಶ್ ಕುಮಾರ್ಗೆ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಖುದ್ದು ಅಂಕಪ್ಪ ಅವರನ್ನೇ ಕೇಳಿದ್ರೆ, ನಾನೂ ಆ ರೀತಿ ಮಾಡೇ ಇಲ್ಲ. ನಂಗೆ ಅದು ಗೊತ್ತೇ ಇಲ್ಲ ಅಂತ ಸಬೂಬು ಹೇಳ್ತಾರೆ.