ವೀರಭದ್ರ ಸಿಂಗ್ ಅಕ್ರಮ ಆಸ್ತಿ ಪ್ರಕರಣ; ಆರೋಪಿಯ ಬಂಧನ ಅವಧಿ ಮುಂದೂಡಿಕೆ
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅಕ್ರಮ ಆಸ್ತಿ ಸಂಪಾದನೆಯಲ್ಲಿ ಭಾಗಿಯಾದ ಎಲ್ ಐಸಿ ಏಜೆಂಟ್ ಆನಂದ್ ಚೌಹಾಣ್ ರವರ ಬಂಧನವನ್ನು ನವೆಂಬರ್ 24 ರವರೆಗೆ ದೆಹಲಿ ನ್ಯಾಯಾಲಯ ಮುಂದೂಡಿದೆ.
ನವದೆಹಲಿ (ನ.05):ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅಕ್ರಮ ಆಸ್ತಿ ಸಂಪಾದನೆಯಲ್ಲಿ ಭಾಗಿಯಾದ ಎಲ್ ಐಸಿ ಏಜೆಂಟ್ ಆನಂದ್ ಚೌಹಾಣ್ ರವರ ಬಂಧನವನ್ನು ನವೆಂಬರ್ 24 ರವರೆಗೆ ದೆಹಲಿ ನ್ಯಾಯಾಲಯ ಮುಂದೂಡಿದೆ.
ಚೌಹಾಣ್ ರವರಗೆ ಸಂಬಂಧಪಟ್ಟ ಖಚಿತ ದಾಖಲೆಯನ್ನು ನೀಡಿ ಎಂದು ವಿಶೇಷ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ವಿಶೇಷ ನ್ಯಾಯಾಧೀಶ ವಿನೋದ್ ಕುಮಾರ್ ಆದೇಶಿಸಿದ್ದಾರೆ.