ಅಧಿವೇಶನದ ಸಮಯದಲ್ಲಿ ನಿತ್ಯವೂ ನಾವು ಮುಂಜಾನೆ 7 ಗಂಟೆಗೆ ಒಟ್ಟಾಗಿ ಉಪಾಹಾರ ಸೇವಿಸಿ ವಿವಿಧ ವಿಷಯಗಳನ್ನು ಚರ್ಚಿಸುತ್ತಿದ್ದೆವು| ಜೈಪಾಲ್‌ ರೆಡ್ಡಿ ಒಡನಾಟ ನೆನೆದು ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೆಂಕಯ್ಯನಾಯ್ಡು| 

ನವದೆಹಲಿ[ಜು.30]: ಭಾನುವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಎಸ್‌.ಜೈಪಾಲ್‌ ರೆಡ್ಡಿ ಅವರನ್ನು ನೆನೆದು, ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯನಾಯ್ಡು ಕಣ್ಣೀರಿಟ್ಟಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ಕಲಾಪ ಆರಂಭಾಗುತ್ತಲೇ ವೆಂಕಯ್ಯನಾಯ್ಡು ಅವರು ಜೈಪಾಲ್‌ ರೆಡ್ಡಿ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಕ ಪ್ರಸ್ತಾಪ ಮಾಡಿದರು. ಈ ವೇಳೆ ತಮ್ಮ ಆತ್ಮೀಯರಾಗಿದ್ದ ಜೈಪಾಲ್‌ರೆಡ್ಡಿ ಅವರನ್ನು ನೆನೆಪಿಸಿಕೊಂಡು ನಾಯ್ಡು ಆಸನದಲ್ಲೇ ಕಣ್ಣೀರಿಟ್ಟರು.

ಹಿಂದೆಲ್ಲಾ ಆಂಧ್ರಪ್ರದೇಶ ವಿಧಾನಸಭೆ ಕಲಾಪ ಮುಂಜಾನೆ 8 ಗಂಟೆಗೆಲ್ಲಾ ಆರಂಭವಾಗುತ್ತಿತ್ತು. ಹೀಗಾಗಿ ಅಧಿವೇಶನದ ಸಮಯದಲ್ಲಿ ನಿತ್ಯವೂ ನಾವು ಮುಂಜಾನೆ 7 ಗಂಟೆಗೆ ಒಟ್ಟಾಗಿ ಉಪಾಹಾರ ಸೇವಿಸಿ ವಿವಿಧ ವಿಷಯಗಳನ್ನು ಚರ್ಚಿಸುತ್ತಿದ್ದೆವು ಎಂದು ಹಳೆಯ ನೆನಪು ಮೆಲಕು ಹಾಕಿದರು.