Asianet Suvarna News Asianet Suvarna News

ಜೈಪಾಲ್‌ ರೆಡ್ಡಿ ನೆನೆದು ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೆಂಕಯ್ಯನಾಯ್ಡು!

ಅಧಿವೇಶನದ ಸಮಯದಲ್ಲಿ ನಿತ್ಯವೂ ನಾವು ಮುಂಜಾನೆ 7 ಗಂಟೆಗೆ ಒಟ್ಟಾಗಿ ಉಪಾಹಾರ ಸೇವಿಸಿ ವಿವಿಧ ವಿಷಯಗಳನ್ನು ಚರ್ಚಿಸುತ್ತಿದ್ದೆವು| ಜೈಪಾಲ್‌ ರೆಡ್ಡಿ ಒಡನಾಟ ನೆನೆದು ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೆಂಕಯ್ಯನಾಯ್ಡು| 

Venkaiah Naidu Mourns 7 am Breakfast Friend Jaipal Reddy Breaks Down
Author
Bangalore, First Published Jul 30, 2019, 8:27 AM IST

ನವದೆಹಲಿ[ಜು.30]: ಭಾನುವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಎಸ್‌.ಜೈಪಾಲ್‌ ರೆಡ್ಡಿ ಅವರನ್ನು ನೆನೆದು, ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯನಾಯ್ಡು ಕಣ್ಣೀರಿಟ್ಟಘಟನೆ ನಡೆದಿದೆ.

ಸೋಮವಾರ ಕಲಾಪ ಆರಂಭಾಗುತ್ತಲೇ ವೆಂಕಯ್ಯನಾಯ್ಡು ಅವರು ಜೈಪಾಲ್‌ ರೆಡ್ಡಿ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಕ ಪ್ರಸ್ತಾಪ ಮಾಡಿದರು. ಈ ವೇಳೆ ತಮ್ಮ ಆತ್ಮೀಯರಾಗಿದ್ದ ಜೈಪಾಲ್‌ರೆಡ್ಡಿ ಅವರನ್ನು ನೆನೆಪಿಸಿಕೊಂಡು ನಾಯ್ಡು ಆಸನದಲ್ಲೇ ಕಣ್ಣೀರಿಟ್ಟರು.

ಹಿಂದೆಲ್ಲಾ ಆಂಧ್ರಪ್ರದೇಶ ವಿಧಾನಸಭೆ ಕಲಾಪ ಮುಂಜಾನೆ 8 ಗಂಟೆಗೆಲ್ಲಾ ಆರಂಭವಾಗುತ್ತಿತ್ತು. ಹೀಗಾಗಿ ಅಧಿವೇಶನದ ಸಮಯದಲ್ಲಿ ನಿತ್ಯವೂ ನಾವು ಮುಂಜಾನೆ 7 ಗಂಟೆಗೆ ಒಟ್ಟಾಗಿ ಉಪಾಹಾರ ಸೇವಿಸಿ ವಿವಿಧ ವಿಷಯಗಳನ್ನು ಚರ್ಚಿಸುತ್ತಿದ್ದೆವು ಎಂದು ಹಳೆಯ ನೆನಪು ಮೆಲಕು ಹಾಕಿದರು.

Follow Us:
Download App:
  • android
  • ios